
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಪಟ್ಟಣದಲ್ಲಿ ಮಂಗಳವಾರ ಮದ್ಯಾಹ್ನದ ವೇಳೆಗೆ ಗುಡುಗು ಸಿಡಿಲಿನ ಸಹಿತ ಮಳೆ ಸುರಿದಿದ್ದು ಕಾದು ಕೆಂಡವಾಗಿದ್ದ ಭೂಮಿಗೆ ತಂಪೆರೆದಂತಾಗಿದೆ.

ಪಟ್ಟಣದಲ್ಲಿ ಮಂಗಳವಾರ ಮೋಡಕವಿದ ವಾತಾವರಣವಿದ್ದು ಆಗಾಗ ಗುಡುಗಿನ ಸದ್ದು ಕೇಳಿಸುತ್ತಿತ್ತು.2 ಗಂಟೆ ಸುಮಾರಿಗೆ ಸಿಡಿಲು ಗುಡುಗು ಜೋರಾಗುತ್ತಲೆ ಮಳೆ ಜೋರಾಗಿ ಧರೆಗಿಳಿಯಿತು. ಭೂಮಿಗೆ ಬಿದ್ದ ಈ ವರ್ಷದ ಮೊದಲ ಮಳೆ ಇದಾಗಿದ್ದು ಮಣ್ಣಿನ ಸುವಾಸನೆ ಕೆಲಕಾಲ ಜನರನ್ನ ಮಂತ್ರಮುಗ್ದವಾಗಿಸಿತ್ತು.

ಒಣಗಿ ಬಾಯ್ಬಿಟ್ಟ ಗಿಡಮರಗಳಲ್ಲಿ ಹಸಿರು ಜೀವ ನಕ್ಕು ನಲಿದಂತೆ ಕಂಡುಬಂತು.
ಒಟ್ಟಿನಲ್ಲಿ ಯುಗಾದಿ ಹೊಸ್ತಿಲಲ್ಲಿ ಮಳೆ ಭೂಮಿಗೆ ಸ್ಪರ್ಷಿಸುವುದು ವಾಡಿಕೆ ಅದರಂತೆ ಮಳೆ ಇಳೆಗೆ ತಂಪೆರೆದಿದೆ ಇದರಿಂದ ಕೆಲವು ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಪ್ಪಿಸುತ್ತದೆ ಎಂಬುದಾಗಿದ್ದು ಮಳೆಯ ಆಗಮನ ಶುಭಪ್ರದವಾದಂತಿದೆ.



Prathidvani Yellapura