
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ದಿನಗಳು ಕಳೆದಂತೆ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಕ್ಷೇತ್ರಗಳಿಗೆ ಸಂಬAಧಿಸಿದAತೆ ಟಿಕೆಟ್ ಅವರಿಗೆ ಇವರಿಗೆ ಎಂಬ ಚರ್ಚೆ ಜೋರಾಗಿದೆ. ಕೆನರಾ ಲೋಕಸಭಾ ಕ್ಷೇತ್ರದ ವಿಷಯ ಬಂದಾಗ ಮಾತ್ರ ಬೇರೆಲ್ಲಾ ಪಕ್ಷಗಳ ಅಭ್ಯರ್ಥಿ ವಿಚಾರ ಅಷ್ಟಾಗಿ ಪ್ರಮುಖವಾಗುವುದಿಲ್ಲ. ಹಿಂದುತ್ವದ ಫೈರ್ ಬ್ರಾಂಡ್ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಬಗ್ಗೆ ಸುದ್ದಿ ಜೋರಾಗಿ ಬಿಡುತ್ತದೆ. ಈ ಬಾರಿ ಕೊಂಚ ಹೆಚ್ಚೇ ಸುದ್ದಿಯಾಗುತ್ತಿದ್ದಾರೆ ಕಾರಣ ಕಳೆದೊಂದು ವರ್ಷದಿಂದ ರಾಜಕೀಯ ರಂಗದಿಂದ ದೂರವೆ ಉಳಿದಿರುವ ಸಂಸದ ಅನಂತ್ ಕುಮಾರ್ ಹೆಗಡೆ ಆಪ್ತರ ಬಳಿ ತಾನು ರಾಜಕೀಯದಿಂದ ದೂರವೆ ಇರುವುದಾಗಿ ಹೇಳುತ್ತಿರುವ ಬಗ್ಗೆ ಅಲ್ಲಲ್ಲಿ ಕೇಳಿ ಬರುತ್ತಿದೆ.

ಕೆನರಾ ಲೋಕ ಸಭಾ ಕ್ಷೇತ್ರದ ಜನತೆಯ ವಿಶೇಷ ಎಂದರೆ ಅಸೆಂಬ್ಲಿ ಚುನಾವಣೆ ಬಂತು ಎಂದರೆ ರಸ್ತೆ, ಸೇತುವೆ, ನೀರು, ವಿದ್ಯುತ್, ಶಿಕ್ಷಣ, ಆರೋಗ್ಯ, ವಾಸಿಸುವ ಮನೆಯ ಬಗ್ಗೆ, ಉದ್ಯೋಗ ಸೃಷ್ಟಿ ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸುತ್ತಾರೆ ಮತ್ತು ಈ ಕುರಿತು ಅಭ್ಯರ್ಥಿಯೊಂದಿಗೆ ವಾಗ್ವಾದಕ್ಕು ಇಳಿಯುತ್ತಾರೆ ಅದೇ ಜನ ಪಾರ್ಲಿಮೆಂಟ್ ಚುನಾವಣೆ ಬಂತೆಂದರೆ ಸಾಕು ಇದಾವುದರ ಬಗ್ಗೆ ಚಕಾರ ಎತ್ತದೆ ಹಿಂದುತ್ವ ಅಥವ ಪ್ರಧಾನಿ ಮೋದಿ ಮುಖದ ಪ್ರಭಾವದಲ್ಲಿ ಅನಂತ ಕುಮಾರ್ ಹೆಗಡೆ ಗೆಲ್ಲಿಸಿ ಲೋಕಸಭೆಗೆ ಸಲೀಸಾಗಿ ಕಳಿಸಿ ಬಿಡುತ್ತಾರೆ.

ಒಂದು ವಿಭಾಗದ ಮಂದಿ ಹೇಳುವಂತೆ ಅನಂತ ಕುಮಾರ್ ಭವಿಷ್ಯದ ಕಲ್ಪನೆಯನ್ನು ಹೊಂದಿದ್ದು ಸಾಗರ ಮಾಲ ಯೋಜನೆ ತರುವಲ್ಲಿ ಯಶಸ್ವಿಯಾಗಿ ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳಿಗೆ ನಿರಂತರ ಹಣ ಹರಿದು ಬರುವಂತೆ ಮಾಡಿದ್ದಾರೆ. ಇದರಿಂದ ಬಂದರು, ಏರ್ಪೋರ್ಟ್ , ಸಮುದ್ರದಲೆಗಳಿಗಾಗಿ ತಡೆಗೋಡೆ ಇನ್ನಿತರ ಉಪಯುಕ್ತ ಯೋಜನೆಗೆ ಶ್ರಮಿಸಿದ್ದಾರೆ ಆದರೆ ಅದೇಕೊ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದರೆ ಅನಂತ ಹೆಸರು ಗೌಣವಾಗಿಬಿಡುತ್ತಿದೆ..!!! ಎಂಬುದು ಅನಂತ್ ಆತ್ಮೀಯರ ಅಳಲಾಗಿದೆ.

ಒಂದು ಅರ್ಥದಲ್ಲಿ ಅನಂತ್ ಕುಮಾರ್ ಹೆಗಡೆ ರಾಜಕೀಯಕ್ಕಾಗಿ ತಮ್ಮ ಹಿಂದುತ್ವದ ಸಿದ್ದಾಂತ, ರಾಷ್ಟ್ರೀಯ ವಾದದ ಚಿಂತನೆ ಇದಾವುದರಿಂದಲು ಹಿಂದೆ ಸರಿದವರಲ್ಲ ಮತ್ತು ಎಲ್ಲಿಯು ರಾಜಿಗೆ ಒಪ್ಪಿದವರಲ್ಲ. ಈಗಲು ರಾಜಕೀಯ ಬೇಕೊ ಹಿಂದುತ್ವ ಬೇಕೊ ಎಂದರೆ ನಿಸ್ಸಂಶಯವಾಗಿ ಹಿಂದುತ್ವವನ್ನೆ ಆಯ್ಕೆ ಮಾಡಿಕೊಳ್ಳುವ ಪ್ರಖರ ಹಿಂದುತ್ವವಾದಿ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು.

ಕೆನರಾ ಲೋಕಸಭಾ ಚುನಾವಣೆಯ ವಿಚಾರಕ್ಕೆ ಬಂದರೆ ಅನಂತ್ ಸೋಲಿಲ್ಲದ ಸರದಾರ. ಲೋಕಸಭೆ ಚುನಾವಣೆ ಘೋಷಣೆಯಾಗುತ್ತಲೆ ಪಕ್ಕಾ ಗೆಲ್ಲುವವರ ಹೆಸರಿನ ಪಟ್ಟಿಯಲ್ಲಿ ಅನಂತ್ ಹೆಸರು ಮುಂಚೂಣಿಯಲ್ಲಿರುತ್ತದೆ. ಬೇರೆ ಪಕ್ಷಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಸಹ ಅನಂತ್ ಕುಮಾರ್ ಹೆಗಡೆ ಎದುರಾಳಿ ಎನ್ನುತ್ತಲೆ ಚಿಂತೆಗೆ ಜಾರಿಬಿಡುತ್ತಾರೆ. ಆದರೆ ಚುನಾವಣೆಯಲ್ಲಿ ಅವರನ್ನು ಎದುರಿಸಲು ಯಾರೂ ಹಿಂದೆ ಸರಿಯುವುದಿಲ್ಲ. ಅದುವೇ ಪ್ರಜಾಪ್ರಭುತ್ವದ ಸೌಂದರ್ಯವಾಗಿದೆ.
ಸದ್ಯ ಸಂಸದರು ಆರೋಗ್ಯವಂತರಾಗಿದ್ದು ರಾಷ್ಟ್ರ ರಾಜಕಾರಣದಲ್ಲಿ ಇನ್ನಷ್ಟು ದಶಕಗಳ ಕಾಲ ಮುನ್ನಡೆಯಬಹುದಾಗಿದೆ. ಅದಕ್ಕಾಗಿ ಪ್ರತಿನಿತ್ಯ ಸಂಸದರ ಮನೆಯ ಮುಂದೆ ಸ್ಪರ್ಧಿಸಲೇ ಬೇಕೆಂಬ ಕೂಗು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಆದರೆ ಅನಂತಣ್ಣ ನಿಲ್ಲದಿದ್ದರೆ ನಾನು ಪ್ರಯತ್ನಿಸುವೆ ಎನ್ನುವ ಹದಿನೈದಕ್ಕು ಹೆಚ್ಚು ಬಿಜೆಪಿ ಆಕಾಂಕ್ಷಿತರು ಸಹ ವರಿಷ್ಟರ ಮುಂದೆ ಹೇಳಿಕೊಂಡಿರುವುದಾಗಿ ಗುಸುಗುಸು ಪಕ್ಷದ ವಲಯದಲ್ಲಿ ಹರಿದಾಡುತ್ತಿದೆ.
ಒಟ್ಟಿನಲ್ಲಿ ಏನೆ ಇರಲಿ ಕಳೆದ ವಿಧಾನಸಭಾ ಚುನಾವಣೆಯ ಹೀನಾಯ ಸೋಲುಂಡ ರಾಜ್ಯ ಬಿಜೆಪಿ ನಾಯಕರು ಮತ್ತು ನೂತನ ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಅವರಿಗು ಲೋಕಸಭಾ ಚುನಾವಣೆ ಒಂದು ಅಗ್ನಿಪರೀಕ್ಷೆಯಾಗುವುದಂತೂ ಖಂಡಿತ. ಇಂತಹ ಸಂದಿಗ್ದ ಸನ್ನಿವೇಶದಲ್ಲಿ ಬಿಜೆಪಿ ಹಿಂದುತ್ವದ ಮೊರೆ ಹೋಗಲೆಬೇಕು ಹಾಗು ಹಿಂದುತ್ವದ ಫೈರ್ ಬ್ರಾಂಡ್ ನಾಯಕ ಅನಂತಕುಮಾರ ಹೆಗಡೆ ಮನವೊಲಿಸಿ ಚುನಾವಣಾ ಕಣಕ್ಕಿಳಿಸಲೇ ಬೇಕು ಎಂಬುದು ಯಲ್ಲಾಪುರ ತಾಲೂಕಿನ ಕೆಲವು ಬಿಜೆಪಿ ಕಾರ್ಯಕರ್ತರ ಮತ್ತು ಸಂಘ ಪರಿವಾರದ ಕೆಲವರ ಅಭಿಪ್ರಾಯವಾಗಿದೆ.

ಅನಂತ ಕುಮಾರ್ ಹೆಗಡೆ ಇತರೆ ರಾಜಕಾರಿಗಳಂತಲ್ಲ ನುಡಿದಂತೆ ನಡೆವುದಲ್ಲದೆ ತಮ್ಮ ತತ್ವ ಮತ್ತು ಸಿದ್ದಾಂತಗಳೊAದಿಗೆ ಎಂದಿಗು ರಾಜಿಮಾಡಿಕೊಂಡವರಲ್ಲ. ಹುಬ್ಬಳ್ಳಿ ಈದ್ಗಾ ವಿವಾದದ ಹೊತ್ತಿನಲ್ಲಿ ತಮ್ಮ ರಕ್ತ ಚೆಲ್ಲಿ ರಾಷ್ಟ್ರ ಮತ್ತು ಧರ್ಮದ ಪರ ನಿಂತು ಹೋರಾಡಿದವರು. ಅವರ ಸಕ್ರಿಯ ರಾಜಕಾರಣ ಪ್ರಸ್ತುತ ಸನ್ನಿವೇಶದಲ್ಲಿ ದೇಶಕ್ಕೆ ಮತ್ತು ಉತ್ತರ ಕನ್ನಡ ಜನತೆಗೆ ಅತ್ಯವಶ್ಯಕವಾಗಿದೆ. ನಮ್ಮ ಕೆನರಾ ಲೋಕಸಭಾ ಕ್ಷೇತ್ರಕ್ಕೆ ಅನಂತ ಕುಮಾರ ಹೆಗಡೆ ಹೆಸರು ಫೈನಲ್ ಆಗಲೇಬೇಕಿದೆ. ಇದಕ್ಕೆ ಕ್ಷೇತ್ರವ್ಯಾಪ್ತಿಯ ಕಾರ್ಯಕರ್ತರ ಮತ್ತು ಸಾರ್ವಜನಿಕರ ಒತ್ತಾಸೆಯಾಗಿದೆ. – ಗಣಪತಿ ಮುದ್ದೇಪಾಲ, ಸಂಸದರ ಆಪ್ತರು