


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಕಳೆದ ಕೆಲವು ದಿನಗಳ ಹಿಂದೆ ಯಲ್ಲಾಪುರ ತಾಲೂಕಿನ ಆನಗೋಡು ಮತ್ತು ಎಲ್.ಎಸ್.ಎಂ.ಪಿ ಸೊಸೈಟಿ ಚುನಾವಣೆ ನಡೆದಿತ್ತು ಅದರಲ್ಲಿ ಕೆಲವರು ತಮ್ಮ ಮತಗಳನ್ನು ಮಾನ್ಯ ಮಾಡುವಂತೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲೆ ಚುನಾವಣೆ ನಡೆದಿದೆ ನ್ಯಾಯಾಲಯದ ಮೆಟ್ಟಿಲು ಹತ್ತಿದ ಸದಸ್ಯರಿಗು ಮತ ಚಲಾಯಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು ಆದರೆ ಆ ಮತಗಳು ಸೇರಿದಂತೆ ಎಣಿಕೆ ನಡೆಯದೆ ಮತ ಪೆಟ್ಟಿಗೆಗಳನ್ನು ಯಲ್ಲಾಪುರದ ಉಪ ಖಜಾನೆಯಲ್ಲಿ ಇಡಲಾಗಿದೆ.


ಸ್ವಾರಸ್ಯ ಎಂದರೆ ಚುನಾವಣೆ ನಡೆದ ದಿನದಿಂದ ಪಾಳಿ ಪ್ರಕಾರದಲ್ಲಿ ಮತ ಪೆಟ್ಟಿಗೆಗಳನ್ನು ಅಭ್ಯರ್ಥಿಗಳ ಪರವಾಗಿ ಕಾಯುತ್ತಿರುವ ವಿಷಯ ಅತ್ಯಂತ ಕುತೂಹಲ ಕೆರಳಿಸಿದೆ.
ಇದೇ ಪ್ರಕರಣದ ವಿಚಾರಣೆ ಜೂ, 26 ರಂದು ಅಂದರೆ ಇಂದು ನಡೆಯಲಿದ್ದು ನ್ಯಾಯಾಲಯದ ಆದೇಶದಂತೆ ಮುಂದಿನ ಪ್ರಕ್ರಿಯೆ ಜರುಗಲಿದೆ. ನ್ಯಾಯಸ್ಥಾನ ಈ ವಿಚಾರವನ್ನು ಇನ್ನಷ್ಟು ದಿನ ಮುಂದೂಡಿದರೆ ಉಪ ಖಜಾನೆ ಬಳಿ ಮತಪೆಟ್ಟಿಗೆ ಕಾಯುವ ಸರಪಳಿ ಸೇವೆ ಮತ್ತೆ ಮುಂದುವರೆಯಲಿದೆ.
ಹಗಲು ರಾತ್ರಿ ಮತಪೆಟ್ಟಿಗೆ ಕಾಯಲು ಪೊಲೀಸರು ಇದ್ದರು ಇವರ ಸರ್ಪಗಾವಲು ಇರುವುದಕ್ಕು ಬಲವಾದ ಕಾರಣವಿದೆ. ಸೊಸೈಟಿ ಚುನಾವಣೆಗಳು ಲೋಕಸಭೆ,ವಿಧಾನಸಭೆ ಚುನಾವಣೆಗಳಿಗಿಂತ ಪ್ರತಿಷ್ಟೆಯ ಕಣವಾಗಿ ಮಾರ್ಪಟ್ಟಿದೆ. ಆನಗೋಡು ಸೊಸೈಟಿಗೆ ನಾರಾಯಣ ಭಟ್ಟ ಅಗ್ಗಾಶಿ ಕುಂಬ್ರಿ ತಂಡಕ್ಕು ಶಾಸಕ ಹೆಬ್ಬಾರ್ ಬೆಂಬಲಿತರ ತಂಡದ ನಡುವೆ ಪೈಪೋಟಿ ಏರ್ಪಟ್ಟಿದೆ. ಪಟ್ಟಣದ ಎಲ್ಎಸ್ಎಂಪಿ ಸೊಸೈಟಿಗೆ ನಾಗರಾಜ್ ಕವಡಿಕೆರೆ ತಂಡಕ್ಕು ಹೆಬ್ಬಾರ್ ಬೆಂಬಲಿತ ತಂಡಕ್ಕು ಪೈಪೋಟಿ ಇದೆ. ಇದೇ ಕಾರಣಕ್ಕಾಗಿ ಶಾಸಕರ ಬೆಂಬಲಿತರಿಂದ ಮತ ಪೆಟ್ಟಿಗೆಯಲ್ಲಿ ಬದಲಾವಣೆ ಆಗಿಬಿಡಬಹುದೇನೊ ಎಂಬ ಗುಮಾನಿಯಿಂದ ಪಾಳಿಯ ಪ್ರಕಾರ ಕಾವಲು ಕಾಯುತ್ತಿದ್ದಾರೆ
ಪಲಿತಾಂಶ ಹೊರ ಬಂದಮೇಲೆ ಕಾವಲು ಕಾದಿದ್ದು ಅರ್ಥವೊ ವ್ಯರ್ಥವೊ ತಿಳಿಯುವುದು. ಅಂತು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿರುವುದಂತು ಪಟ್ಟಣಾದಾದ್ಯಂತ ಕುತುಹಲ ಮೂಡಿಸಿದೆ.

Prathidvani Yellapura