
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ…..
ಪ್ರತಿಧ್ವನಿ ಯಲ್ಲಾಪುರ- ಕನ್ನಡ ಸಾಹಿತ್ಯ ಪರಿಷತ್ತು ಹೊಸ ದೃಷ್ಟಿಕೊನದೊಂದಿಗೆ ಮುಂದುವರೆಯುತ್ತಿದ್ದು ಪ್ರತಿ ಹಂತದಲ್ಲು ಪಾರದರ್ಶಕತೆಗೆ ಆದ್ಯತೆ ನೀಡಲಾಗುತ್ತಿದೆ. ಯಲ್ಲಾಪುರದಲ್ಲಿ ಶನಿವಾರ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಖರ್ಚುವೆಚ್ಚದ ಲೆಕ್ಕ ಪತ್ರ ಮಂಡಿಸಲಾಯಿತು.
ಕೆಲ ದಿನಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾದ್ಯಕ್ಷ ಬಿ.ಎನ್ ವಾಸರೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಖರ್ಚುವೆಚ್ಚಗಳನ್ನು ಪತ್ರಿಕೆಗಳ ಮುಂದೆ ಸಾರ್ವಜನಿಕವಾಗಿ ತೆರೆದಿಟ್ಟ ನಂತರ ತಾಲೂಕುಘಟಕಗಳು ಸಹ ಇಂತಹ ಸತ್ಸಂಪ್ರದಾಯವನ್ನು ಪಾಲಿಸುತ್ತಿದ್ದು ಯಲ್ಲಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ ಆನಗೋಡಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಲೆಕ್ಕ ಪತ್ರ ಮಂಡಿಸಿದರು.
ಸಾಹಿತ್ಯ ಪರಿಷತ್ತಿನ ಬ್ಯಾಂಕ್ ಖಾತೆಯಲ್ಲಿ ಹಿಂದಿನ ಅಧ್ಯಕ್ಷರು ಬಿಟ್ಟುಹೋದ 3199 ರುಪಾಯಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು, ದಾನಿಗಳು ಹಾಗು ಸಚಿವ ಶಿವರಾಮ್ ಹೆಬ್ಬಾರ್ ಅವರು ನೀಡಿದ 1ಲಕ್ಷವು ಸೇರಿದಂತೆ 2,15,727 ರುಪಾಯಿಗಳು ಜಮಾ ಆಗಿದ್ದು ಒಟ್ಟು 2,12,191 ರುಪಾಯಿಗಳು ಖರ್ಚಾಗಿದ್ದು 3536 ರುಪಾಯಿ ಬ್ಯಾಂಕ್ ಖಾತೆಯಲ್ಲಿ ಉಳಿದಿದೆ.ಸಮ್ಮೇಳನಕ್ಕೆ ಸರ್ಕಾರದಿಂದ ನೀಡಬೇಕಾದ ಅನುದಾನದ ಹಣ ಬಂದಲ್ಲಿ ಉಳಿಕೆಯಾಗಲಿದೆ ಎಂದು ಖರ್ಚುವೆಚ್ಚದ ವಿವರ ಒಪ್ಪಿಸಿದರು.
ಬರಲಿರುವ ದಿನಗಳಲ್ಲಿ ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ಸಾಹಿತ್ಯ ಚಟುವಟಿಕೆಗೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆ ಇದ್ದು ಸಾಹಿತ್ಯಾತ್ಮಕ ಕಾರ್ಯ ನಿರಂತರವಾಗಿರುವಲ್ಲಿ ಎಲ್ಲರು ಶ್ರಮಿಸಬೇಕಿದೆ. ಪರಿಷತ್ತಿಗೆ ಶಾಶ್ವತ ಕಟ್ಟಡ ಇದ್ದು ಅದರ ಕೆಲವು ಕೆಲಸಗಳನ್ನು ಮಾಡಿಸಬೇಕಿದೆ. ಈ ಎಲ್ಲಾ ಸಾತ್ವಿಕ ಕಾರ್ಯಗಳಲ್ಲಿ ಎಲ್ಲರ ಸಹಕಾರ ಬಯಸುತ್ತೇನೆ.
ವಿಧ್ವಾನ್ ಸುಬ್ರಹ್ಮಣ್ಯ ಭಟ್
ಯಲ್ಲಾಪುರ,ತಾಲೂಕು ಕ.ಸಾ.ಪ ಅಧ್ಯಕ್ಷ
Prathidvani Yellapura