
ಸುರಭಿ.ನಾಗೇಶ್ ಕುಮಾರ್.ಎನ್, ನರಸಿಂಹರಾಜಪುರ

ನರಸಿಂಹರಾಜಪುರ : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಹೃದಯಭಾಗ ಮೈಸೂರು ಸಂಸ್ಥಾನಕ್ಕೆ ನಿಕಟ ಸಂಪರ್ಕವಿದ್ದ ನರಸಿಂಹರಾಜಪುರ ತಾಲೂಕು ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ಪುಟ್ಟ ಭಾರತ ಎಂದರೆ ತಪ್ಪಾಗಲಾರದು ವಿವಿಧ ಧರ್ಮಗಳ ವಿವಿಧ ಬಾಷೆ ಮಾತನಾಡುವ ವಿಧವಿಧ ಸಂಸ್ಕೃತಿ ಸಂಪ್ರದಾಯ ಹೊಂದಿರುವವರ ನೆಲೆ ಬೀಡಾಗಿದೆ ನರಸಿಂಹರಾಜಪುರ.

ಭತ್ತ,ಅಡಿಕೆ,ತಳಿರುಗಳಿಂದ ಕಂಗೊಳಿಸುವ ಹಸಿರು ಸಸ್ಯ ಕಾಶಿ ಎನ್ಆರ್ಪುರ .ಹಿಂದಿನ ಕಾಲದಲ್ಲಿ ಶೃಂಗೇರಿ,ಕಳಸ,ಹೊರನಾಡು ತೀರ್ಥಕ್ಷೇತ್ರಗಳಿಗೆ ಪಯಣಿಸುವ ಭಕ್ತಾದಿಗಳಿಗೆ ತಂಗಲು ವಸತಿ ಮತ್ತು ಊಟೋಪಾಚಾರ ನೆರವೇರಿಸುತ್ತಿದ್ದ ಪವಿತ್ರ ಕ್ಷೇತ್ರವಾಗಿತ್ತು ಮತ್ತು ಅದರ ಹೆಸರು ಎಡೇಹಳ್ಳಿ ಎಂಬ ಹೆಸರಿತ್ತು ಎಂಬುದು ಐತಿಹ್ಯವಾಗಿದೆ.
ಕಾಲ ಬದಲಾದಂತೆ ಊರಿನ ಹೆಸರು ಬದಲಾಗಿದ್ದು ಮೈಸೂರು ರಾಜರ ಆಡಳಿತಾವಧಿಯಲ್ಲಿ ನರಸಿಂಹರಾಜ ಒಡೆಯರ್ ಅವರ ಹೆಸರನ್ನು ನೆನಪಿಸಲು ನರಸಿಂಹರಾಜಪುರ ಎಂದು ಬದಲಾಗಿದ್ದು ಇತಿಹಾಸ ಸಾರುವ ಸತ್ಯವಾಗಿದೆ.
ಇದೇ ಊರಿನಲ್ಲಿ ಮೂರು ವರ್ಷಗಳಿಗೊಮ್ಮೆ ಊರದೇವಿ ಮಾರಿಕಾಂಬಾ ದೇವಿಯ ಜಾತ್ರೆ ನಡೆಸಿಕೊಂಡು ಬರುತ್ತಿರುವುದು ಸಂಪ್ರದಾಯವಾಗಿದೆ. ಅದರಂತೆ ಪ್ರಸಕ್ತ 2025 ನೆ ಸಾಲಿನಲ್ಲಿ ಮೇ ತಿಂಗಳ20,21,22 ರಲ್ಲಿ ಮೂರು ದಿನಗಳ ಕಾಲ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಭ್ರಮದ ಜಾತ್ರೆ ಅತ್ಯಂತ ವಿಜ್ರಂಭಣೆಯಿಂದ ಜರುಗಿತು.




ಮಾರಿ ವಿಗ್ರಹ ತಯಾರಿಗೆ ಮರ ಕಡಿಯುವ ಶಾಸ್ರದಿಂದ ಹಿಡಿದು ವಿಸರ್ಜನೆ ಆಗುವ ತನಕ ವಿಶೇಷ ಪೂಜಾ ಪದ್ದತಿಗಳೊಂದಿಗೆ ಜಾತ್ರೆ ಸುಸಂಪನ್ನ ಕಂಡಿತು.
ಒಂದು ಜಾತ್ರೆಯ ಯಶಸ್ಸು ಅಡಗಿರುವುದು ನಿಸ್ವಾರ್ಥ ಸೇವಾಭಾವದ ಒಗ್ಗಟ್ಟಿನಲ್ಲಿ ಮತ್ತು ನನ್ನೂರಿನ ಹೆಮ್ಮೆಯ ಆಚರಣೆ ಎಂಬ ಬದ್ದತೆಯಲ್ಲಿ. ಈ ಎರಡು ಅಂಶಗಳಿಗೆ ನನ್ನೂರಿನ ಜಾತ್ರೆಯಲ್ಲಿ ಕೊರತೆ ಕಂಡು ಬರಲಿಲ್ಲ.

ಜಾತ್ರಾ ಸಮಿತಿ ಅಧ್ಯಕ್ಷ ದಿವಂಗತ ಪಿ.ರಾಘವನ್ ಕುಟುಂಬದ ಕುಡಿ ಆರ್,ಸದಾಶಿವ ಅತ್ಯಂತ ಪ್ರಾಮಾಣಿಕತೆಯಿಂದ ಮತ್ತು ಯಾರಿಗು ಮನಸ್ಸು ನೋಯಿಸದಂತೆ ನಾಜೂಕಿನಿಂದ ಜವಾಬ್ದಾರಿ ನಿರ್ವಯಿಸಿದ್ದು, ಅವರ ಜೊತೆಯಲ್ಲಿ ಕೈ ಜೋಡಿಸಿದ ಕ್ರಿಯಾಶೀಲ ತಂಡ ಜಾತ್ರೆಯ ಅಭೂತಪೂರ್ವ ಯಶಸ್ಸಿಗೆ ಕಾರಣಿಭೂತರಾಗಿದ್ದಾರೆ.

ಜಗನ್ಮಾತೆ ಮಾರಿಕಾಂಬೆಯ ಪ್ರೇರಣೆ ಜನಪ್ರತಿನಿಧಿಗಳು ಸಹ ಜಾತ್ರಾ ಯಶಸ್ಸಿನಲ್ಲಿ ಕೈ ಜೋಡಿಸಿದ್ದಾರೆ. ಅತ್ಯಂತ ಪ್ರಮುಖವಾದ ಆರ್ಥಿಕ ವಹಿವಾಟು ಜಾತ್ರಾ ಯಶಸ್ಸಿಗೆ ಪ್ರಮುಖ ಅಂಶವಾಗಲಿದೆ ಆ ವಿಭಾಗದ ಬಗ್ಗೆ ಎರಡು ಮಾತಿಲ್ಲ ಅದೇ ದಿವಂಗತ ಪಿ.ರಾಘವನ್ ಕುಟುಂಬದ ಮತ್ತೊಂದು ಕುಡಿ ಆರ್ ಸುಕುಮಾರ್ ನಮ್ಮೆಲ್ಲರ ಆತ್ಮೀಯ ಸುಗು ಮತ್ತು ತಂಡದವರ ನಿರಂತರ ಪ್ರಯತ್ನ ಅದೂ ಸಹ ಯೋಜನಾಬದ್ದ ಮಾರ್ಗಸೂಚಿ ಅತ್ಯಂತ ಯಶಸ್ವಿಯಾಗಿ ಸಾಗಿದ್ದು ಜನರು ಜಾತು,ಮತ,ಧರ್ಮ,ಅಂತಸ್ತಿನ ಭೇದವಿಲ್ಲದೆ ತಮ್ಮ ಕೈಲಾದ ಸೇವೆ ನೀಡಿದ್ದು ಜಾತ್ರಾ ಯಶಸ್ಸಿಗೆ ಕಾರಣವಾಗಿದೆ.
ಊರ ದೇವಿಯಾದ ಕಾರಣ ಪ್ರತಿಯೊಂದು ಸಮುದಾಯದವರು ತಮ್ಮ ಪಾಲಿಗೆ ಬಂದ ಕೆಲಸವನ್ನು ತಮಗೆ ಸಿಕ್ಕ ಸೌಭಾಗ್ಯ ಎಂಬಂತೆ ಭಾವಿಸಿ ಹಗಲು ರಾತ್ರಿ ಶ್ರಮಿಸಿದ ಫಲವೆ ಜಾತ್ರಾ ಯಶಸ್ಸಿಗೆ ಕಾರಣವಾಗಿದೆ.
ಸರ್ಕಾರದ ವಿವಿಧ ಇಲಾಖೆಗಳು,ಸಂಘ ಸಂಸ್ಥೆಗಳು, ಮಾಧ್ಯಮಗಳು, ಕಲಾವಿದರು, ಊರಿನ ಹಿರಿಯ ನಾಗರಿಕರು, ಹಿಂದು,ಮುಸ್ಲಿಂ, ಕ್ರೈಸ್ತ ಮುಖಂಡರು ಸಾರ್ವಜನಿಕರು, ಅಂಗಡಿಕಾರರು,ಪ್ರಚಾರಕರು, ಜಾತ್ರೆಯ ಕೆಲಸಕ್ಕಾಗಿ ಸಣ್ಣ ಕೆಲಸದಿಂದ ದೊಡ್ಡ ಕೆಲಸಗಳನ್ನು ನಿಸ್ವಾರ್ಥ ಮನಸ್ಸಿನಿಂದ ಪ್ರಚಾರ ಬಯಸದೆ ದುಡಿದ ಸಾವಿರಾರು ಕೈ ಗಳ ಶ್ರಮ ಮತ್ತು ಬೆವರಿನ ಫಲವೆ ಜಾತ್ರೆಯ ಯಶಸ್ಸಿಗೆ ಕಾರಣ.
ಬಂಧುಗಳೆ ಒಂದು ಜಾತ್ರೆಯ ಯಶಸ್ಸು ಬರಲಿರುವ ಮತ್ತೊಂದು ಜಾತ್ರೆಗೆ ಪ್ರೇರಣೆಯಾಗಬೇಕು ಮತ್ತು ಪಾಠವಾಗಬೇಕು. ನನ್ನೂರಿನ ಜಾತ್ರೆಯಲ್ಲಿ ಕಂಡ ಯಶಸ್ಸು ನನ್ನ ಹೆಮ್ಮೆಗೆ ಮತ್ತು ಸಂತೋಷಕ್ಕೆ ಕಾರಣವಾದಂತೆ ಮುಂದಿನ ಜಾತ್ರೆಯಲ್ಲಿ ಕೆಲವು ವ್ಯವಸ್ಥೆ ಬದಲಿಸಿಕೊಳ್ಳಬೇಕು ಅದು ಸಹ ಹಿರಿಯರ ಮಾರ್ಗದರ್ಶನದಲ್ಲಿ.
⏩ ಜಾತ್ರೆಯ ದಿನಾಂಕ ಕನಿಷ್ಠ ಫೆಬ್ರವರಿ ತಿಂಗಳಿಂದ ಏಪ್ರಿಲ್ ಕೊನೆಯ ವರೆಗಿನ ಒಳಗೆ ನಿಗಧಿ ಪಡಿಸಬೇಕಿತ್ತು.
⏩ ಜಾತ್ರೆಗಾಗಿ ಹಣವನ್ನು ಊರಿನ ಜನರಿಂದಲೇ ವಸೂಲಿ ಮಾಡಿದಮೇಲೆ ಪ್ರತಿ ವ್ಯವಸ್ಥೆ ಊರಿನ ಜನರಿಗೆ ನೀಡಬೇಕು.
ಉದಾಹರಣೆಗೆ ಶಾಮಿಯಾನ,ಸೌಂಡ್ಸ್,ಆರ್ಕೆಸ್ಟ್ರಾ, ಲೈಟಿಂಗ್, ದಿನಸಿ,ತರಕಾರಿ,ಹಣ್ಣು,ಪೂಜಾ ಸಾಮಾಗ್ರಿಗಳು, ಬಟ್ಟೆ, ಪ್ರಿಂಟಿಂಗ್ ಪ್ರೆಸ್ ಕೆಲಸ, ಫ್ಲೆಕ್ಸ್,ಬ್ಯಾನರ್ಸ್ ಒಟ್ಟಿನಲ್ಲಿ ಜಾತ್ರೆಗೆ ಸಂಬಂಧಿಸಿದ ಕೆಲಸ ಊರ ಜನರಿಗೆ ನೀಡಬೇಕು ಕಾರಣ ಊರಿನ ಜನರಿಂದ ಜಾತ್ರೆಗೆ ಪಡೆದ ದೇಣಿಗೆ ಹಣ ಊರಿನಲ್ಲೆ ವಹಿವಾಟಾಗುತ್ತದೆ ಇಲ್ಲವೆಂದರೆ ಆ ಹಣ ಸಂಪೂರ್ಣ ಹೊರ ಊರಿಗೆ ಹೋಗುತ್ತದೆ.
⏩ ಈ ರೀತಿ ಮಾಡಿದರೆ ಒಂದಷ್ಟು ಸಮಸ್ಯೆಗಳು ಬರಬಹುದು ಬಂದರೆ ಬರಲಿ ಊರಿನವರಿಂದ ಆಗುವ ಸಣ್ಣ ಪುಟ್ಟ ಸಮಸ್ಯೆಗಳನ್ನು ನಮ್ಮದೆಂದು ಭಾವಿಸಿ ಮುಂದೆ ಸಾಗಿದರೆ ಬೆಟ್ಟದಷ್ಟಿರುವುದು ಸಣ್ಣ ಸಾಸಿವೆಯಾಗಬಲ್ಲದು.
ಒಟ್ಟಿನಲ್ಲಿ ಏನೆ ಇರಲಿ ನನ್ನೂರಿನ ಜಾತ್ರೆಯ ಸೊಬಗು ಬಣ್ಣಿಸಲು ಪದಗಳೆ ಸಾಲದು. ಸದಾ ನನ್ನೂರು ಹಸಿರಾಗಿರಲಿ ಸುಖ ಶಾಂತಿ ನೆಮ್ಮದಿ ತುಂಬಿರಲಿ. ಉದರನಿಮಿತ್ತ ಪರ ಊರಿನಲ್ಲಿ ನೆಲೆಸಿ ದುಡಿಯುತ್ತಿದ್ದರು ನನ್ನೂರಿನ ನೆನಪು ಮಿಡಿಯುತ್ತಿರುತ್ತದೆ ಅಲ್ಲವೇ…….🖋
