



ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಮನೆಯಲ್ಲಿ ಬಡತನ ಕಿತ್ತು ತಿನ್ನುತ್ತಿರುವಾಗ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸುವುದು ಕನಸಿನ ಮಾತು ಎನ್ನುವುದನ್ನು ಸುಳ್ಳಾಗಿಸಿ ಗುಣಮಟ್ಟದ ಹಾಗು ಸಂಸ್ಕಾರಯುತ ಶಿಕ್ಷಣವನ್ನು ಊಟ ವಸತಿ ಸಹಿತ ನೀಡುತ್ತಿರುವ ಸರ್ಕಾರದ ಅನೇಕ ಯೋಜನೆಗಳಿವೆ.

ಪಟ್ಟಣದಲ್ಲಿ ಇಂತಹ ಯೋಜನೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಏಕೈಕ ಶಾಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ತಾಲೂಕಿನ ಬಡಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಪೂರೈಸುವ ವಿದ್ಯಾ ದೇಗುಲವಾಗಿದೆ. ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರೀಡೆ, ಯೋಗ, ಧ್ಯಾನ, ಎನ್.ಸಿ.ಸಿ, ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡುವ ದೇಗುಲವೀಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವುದು ದುರಂತವಾಗಿದೆ.

ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾಲೂಕಿನ ವಿವಿಧ ಪ್ರದೇಶಗಳಿಂದ ಬಂದು ಆಶ್ರಯ ಪಡೆದ ೨೩೪ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತಿದ್ದು ಮನೆ ಮತ್ತು ತಂದೆ ತಾಯಿಯರಿಂದ ದೂರ ಉಳಿದು ಅವರಿಗೆ ಹೊರೆಯಾಗದಂತೆ ವಿದ್ಯೆ ಕಲಿಯುತ್ತಿದ್ದಾರೆ. ಅವರಿಗೆಲ್ಲ ಈ ನಿಲಯವೆ ಮನೆ,ಸಿಬ್ಬಂದಿಗಳೆ ಕುಟುಂಬ ಇದ್ದಂತೆ.

ವಸತಿ ಶಾಲೆಯಲ್ಲಿ ಹಲವು ವರ್ಷಗಳಿಂದ ಮಕ್ಕಳಿಗೆ ನೀಡುತ್ತ ಬಂದಿರುವ ಸೋಪ್ ಕಿಟ್ಗಳನ್ನು ಕಳೆದ ಒಂದು ವರ್ಷದಿಂದ ನೀಡದೆ ಸಮಸ್ಯೆಯಾಗುತ್ತಿದೆ. ಕಿಟ್ನಲ್ಲಿ ಸ್ನಾನದ ಸೋಪು, ಬಟ್ಟೆ ಒಗೆಯುವ ಸೋಪು, ಕೊಬ್ಬರಿ ಎಣ್ಣೆ, ಪೇಸ್ಟ್ ಮತ್ತು ಬ್ರಶ್ ನೀಡಲಾಗುತ್ತಿತ್ತು. ವರ್ಷಕ್ಕೊಮ್ಮೆ ಬಜೆಟ್ ಮಂಡಿಸುವ ಯಾವುದೆ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಮೀಸಲಿರಿಸಿದರೂ ಅದರಲ್ಲಿ ಸಂಬಳದ ಭಾಗವೆ ಸಿಂಹಪಾಲಾಗಿರುತ್ತದೆ.ಉಳಿದ ಅಲ್ಪಸ್ವಲ್ಪ ಮೊತ್ತ ಮೂಲಭೂತ ಸೌಕರ್ಯಗಳಿಗೆ ಬಳಸಬೇಕು. ಆದರೆ ಕಳೆದೊಂದು ವರ್ಷದಿಂದ ಯಾವ ಹೊರೆ ಸರ್ಕಾರವನ್ನು ಕಾಡಿದೆಯೋ? ವಿದ್ಯಾರ್ಥಿಗಳಿಗೆ ನೀಡುವ ಸೋಪ್ಕಿಟ್ ಕಿತ್ತುಕೊಳ್ಳುವ ಮಟ್ಟಕ್ಕೆ ಇಳಿದಿರುವುದು ಶೋಚನೀಯ. ವಸತಿ ಶಾಲೆಗಳಲ್ಲಿ ಆಶ್ರಯ ಪಡೆದು ವಿದ್ಯಾಭ್ಯಾಸ ಪಡೆವ ಮಕ್ಕಳಿಗೆ ಇಷ್ಟು ವಸ್ತುಗಳನ್ನು ಕೊಂಡುಕೊಳ್ಳುವುದು ಸಹ ಕಷ್ಟದ ಕೆಲಸ ಅದಕ್ಕಾಗಿ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸೋಪ್ ಕಿಟ್ ನೀಡುವಂತಾಗಲಿ ಎಂಬುದು ಬಡ ತಂದೆತಾಯಿಗಳ ಅಭಿಪ್ರಾಯವಾಗಿದೆ.

ಹೆಣ್ಣು ಮಕ್ಕಳಿಗೆ ಆರೋಗ್ಯ ಇಲಾಖೆಯಿಂದ ನೀಡಲಾಗುತ್ತಿದ್ದ ಶುಚಿ ಸ್ಯಾನಿಟರಿ ಪ್ಯಾಡ್ಗಳನ್ನೂ ಸಹ ಕೊರೊನ ಸಂದರ್ಭದಿAದಲು ಕೊಡುವುದನ್ನು ನಿಲ್ಲಿಸಲಾಗಿದೆ. ಇದಂತು ಸರ್ಕಾರ ತಲೆ ತಗ್ಗಿಸುವ ವಿಚಾರವಾಗಿದೆ. ಬೇಟಿ ಬಚಾವೊ ಬೇಟಿ ಪಡಾವೊ ಕೇವಲ ಬಾಯಿ ಮಾತಿಗೆ ಹೇಳಿದರೆ ಸಾಲದು ಅದಕ್ಕೆ ಬೇಕಾದ ಸವಲತ್ತುಗಳನ್ನು ಅನುಷ್ಠಾನಕ್ಕೆ ತರಬೇಕಿದೆ. ಸದ್ಯ ಇದನ್ನು ಆಯಾ ಶಾಲೆಯ ಆಡಳಿತವೆ ಹೊರೆಯಾದರೂ ನಿಭಾಯಿಸುತ್ತಿದೆ. ಆರೋಗ್ಯ ಮಂತ್ರಿ ದಿನೇಶ್ ಗುಂಡೂರಾವ್ ಈ ಬಗ್ಗೆ ಗಮನ ಹರಿಸಬೇಕಿದೆ.

ಶಿಕ್ಷಣ ಬದುಕಿನ ಪಥವನ್ನು ಉತ್ತಮದೆಡೆಗೆ ಕೊಂಡೊಯ್ಯುತ್ತದೆ. ಅದರಿಂದ ಬಡತನ ನಿರ್ಮೂಲನೆ ಸಾದ್ಯವಿದೆ ಎಂದು ಬಲವಾಗಿ ನಂಬಿದವನು ನಾನು. ಬಡತನದಿಂದ ವಸತಿ ಶಾಲೆಗಳಲ್ಲಿ ಅಭ್ಯಾಸ ಮಾಡುವ ಮಕ್ಕಳಿಗೆ ಏನೆಲ್ಲಾ ಸಮಸ್ಯೆ ಕೊರತೆಗಳಿದೆ ಎಂಬುದನ್ನು ಕೇಳಿ ತಿಳಿದು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್.ಸಿ.ಮಹಾದೇವಪ್ಪ ಮತ್ತು ಆರೋಗ್ಯ ಮಂತ್ರಿ ದಿನೇಶ್ ಗುಂಡೂರಾವ್ ಅವರ ಬಳಿಯು ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.- ಅರಬೈಲ್ ಶಿವರಾಮ್ ಹೆಬ್ಬಾರ್, ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ.

ಮುರಾರ್ಜಿ ದೇಸಾಯಿ ವಸತಿ ಶಾಲೆ ಬಡವರು, ಮದ್ಯಮ ವರ್ಗದವರು, ಕೃಷಿ ಕಾರ್ಮಿಕರಿಗೆ ವರದಾನವಾಗಿದ್ದು ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ ಅದಕ್ಕಾಗಿ ಈ ಬಾರಿ ಎಸ್.ಎಸ್.ಎಲ್.ಸಿ ಯಲ್ಲಿ ಶೇಖಡ ನೂರರಷ್ಡು ಪಲಿತಾಂಶ ದಾಖಲಿಸಿ ಹೆಸರುಗಳಿಸಿದೆ.







