





ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಸುಂದರ ಮತ್ತು ಧಾರ್ಮಿಕ ಪರಿಸರ ಎನಿಸಿಕೊಂಡ ಜೋಡುಕೆರೆ ಸ್ವಚ್ಚತಾ ಅಭಿಯಾನ ಹಮ್ಮಿಕೊಂಡ ಪ್ರತಿಧ್ವನಿ ಮತ್ತು ವಿಷನ್ ಜನಪ್ರದೇಶಾಭಿವೃದ್ದಿ ಟ್ರಸ್ಟ್ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು ಜೋಡುಕೆರೆ ಪರಿಸರದಲ್ಲಿ ಬರುವ ನೂರಾರು ಪಕ್ಷಗಳಿಗೆ ನೀರು ಮತ್ತು ಆಹಾರದ ವ್ಯವಸ್ಥೆ ಕಲ್ಪಿಸುವ ಹೊಸ ಪ್ರಯತ್ನಕ್ಕೆ ಮುನ್ನಡಿ ಬರೆಯಲಾಗಿದೆ.

ಸೋಮವಾರ ಪಟ್ಟಣದ ಜೋಡುಕೆರೆ ತಟದಲ್ಲಿ ಪ್ರಾರಂಭಿಕ ಹಂತದಲ್ಲಿ ಮೂರು ಸ್ಥಳಗಳಲ್ಲಿ ಸುಂದರವಾಗಿ ವಿನ್ಯಾಸ ಮಾಡಲಾದ ಹಕ್ಕಿಗಳ ಆಹಾರ ನೀರು ಒದಗಿಸುವ ಸ್ಟಾಂಡ್ ನಲ್ಲಿ ವಿಷನ್ ಜನಪ್ರದೇಶಾಭಿವೃದ್ದಿ ಟ್ರಸ್ಟ್ ಕಾರ್ಯದರ್ಶಿ ಸತೀಶ್ ಶಿವಾನಂದ ನಾಯ್ಕ್ ಹಕ್ಕಿಗಳಿಗೆ ನೀರು ಮತ್ತು ವಿವಿಧ ರೀತಿಯ ಧಾನ್ಯಗಳನ್ನು ಹಾಕುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಜೋಡುಕೆರೆ ಅತ್ಯಂತ ಸುಂದರವಾದ ಸ್ಥಳವಾಗಿಸುವ ಪ್ರಯತ್ನ ನಿಧಾನವಾಗಿ ಒಂದೊಂದೇ ಹಂತ ಪೂರ್ಣ ಗೊಳಿಸುತ್ತ ಮುಂದುವರೆಯುತ್ತಿದ್ದೇವೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಹೊಸ ವ್ಯವಸ್ಥೆ ಅಳವಡಿಸುವತ್ತ ನಮ್ಮ ಸಂಘಟಿತ ಪ್ರಯತ್ನ ಸಾಗಲಿದೆ.ಪಕ್ಷಿ ಸಂಕುಲಕ್ಕೆ ನೀರು ಆಹಾರ ಒದಗಿಸುವ ಶ್ರೇಷ್ಠ ಕಾರ್ಯ ಹಮ್ಮಿಕೊಂಡ ಪ್ರತಿಧ್ವನಿ ವೆಬ್ ನ್ಯೂಸ್ ಪ್ರತ್ನಕ್ಕೆ ಅಭಿನಂದಿಸುತ್ತೇನೆ ಎಂದರು.