





ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ರವೀಂದ್ರನಗರದಲ್ಲಿ ನೆಲೆನಿಂತ ಪ್ರಭು ಶ್ರೀರಾಮನ ಬಂಟ ಪವನಸುತ ವೀರ ಆಂಜನೆಯನಿಗೆ ವಿಶೇಷ ಸೇವೆ ಸಲ್ಲಿಸುವ ಸದುದ್ದೇಶದಿಂದ ಪಲ್ಲಕ್ಕಿ ಸಮರ್ಪಿಸುವ ಕಾಯಕಕ್ಕೆ ಒಂದು ಹೆಜ್ಜೆ ಮುಂದಿಟ್ಟು ಹನುಮ ಜಯಂತಿಗೆ ನೂತನ ಪಲ್ಲಕಿ ಆಂಜನೇಯನಿಗೆ ಸಲ್ಲಿಸಿದಂತಾಗಿದೆ.

ದಿನಾಂಕ 01..05..2023 ರಂದು ನಮ್ಮ ಶ್ರೀ ಆಂಜನೇಯ ದೇವಸ್ಥಾನದ ಪಲ್ಲಕ್ಕಿ ನಿರ್ಮಾಣ ಸಹಾಯಾರ್ಥವಾಗಿ ಶ್ರೀ ಗುರು ಸಿದ್ದೇಶ್ವರ ನಾಟ್ಯ ಸಂಘ ಮಂಡಲಗಿರಿ ಅವರಿಂದ ಚಿನ್ನದ ಗೊಂಬೆ ನಾಟಕ ಪ್ರದರ್ಶನ ಮಾಡಲಾಗಿತ್ತು ಅದರಿಂದ ಬಂದ ಉಳಿತಾಯದ ಹಣದಲ್ಲಿ ಪಲ್ಲಕ್ಕಿ ನಿರ್ಮಾಣ ಮಾಡಲು ನೀಡಲಾಗಿತ್ತು.

ಇದೀಗ ಬಹು ದಿನದ ಕನಸು ನನಸಾಗಿ ಪಲ್ಲಕ್ಕಿ ನಿರ್ಮಾಣ ಪೂರ್ಣಗೊಂಡಿದ್ದು ಹನುಮ ಜಯಂತಿ ಪ್ರಯುಕ್ತ ಮಂಗಳವಾರ ಬಿಕ್ಕು ಗುಡಿಗಾರ್ ಕಲಾ ಕೇಂದ್ರದಿಂದ ದೇವಸ್ಥಾನಕ್ಕೆ ತರಲಾಯಿತು.


ಈ ಸಂದರ್ಭದಲ್ಲಿ ಸಹಾಯ ಮಾಡಿದ ಮಂಡಲಗಿರಿ ನಾಟ್ಯ ಸಂಘದವರಿಗೂ ಸ್ಥಳಾವಕಾಶ ಮಾಡಿಕೊಟ್ಟ ವೇಣುಗೋಪಾಲ್ ಮದ್ಗುಣಿ ಮತ್ತು ನಾಗರಾಜ್ ಮದ್ಗುಣಿ ಯವರಿಗೂ ನಮ್ಮ ಕರೆಗೆ ಓಗೊಟ್ಟು ಬಂದು ನಾಟಕ ವೀಕ್ಷಣೆ ಮಾಡಿದ ಎಲ್ಲಾ ಕಲಾಭಿಮಾನಿಗಳಿಗೂ ದೇವಸ್ಥಾನ ಕಮಿಟಿಯ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.

ಮುಂದಿನ ದಿನಗಳಲ್ಲಿ ದೇವಸ್ಥಾನ ಕಟ್ಟಡ ಜೀರ್ಣೋದ್ಧಾರ ಮಾಡುವ ಕೆಲಸ ಹಮ್ಮಿಕೊಂಡಿದ್ದು ಆ ಸಂದರ್ಭದಲ್ಲಿಯೂ ಸಹ ತಮ್ಮೆಲ್ಲರಿಂದ ತನು ಮನ ಧನ ಸಹಾಯ ಸಹಕಾರ ನೀಡಿರೆಂದು ಕೇಳಿಕೊಳ್ಳುತ್ತೇವೆ ತಾವುಗಳು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಹುಸಿ ಮಾಡದೆ ಕಾಪಾಡಿಕೊಳ್ಳುತ್ತೇವೆ ಎಂದು ದೇವಸ್ಥಾನ ಕಮಿಟಿಯ ಎಲ್ಲಾ ಪದಾಧಿಕಾರಿಗಳು ಭಕ್ತ ಜನತೆಯಲ್ಲಿ ಮನವಿ ಮಾಡಿದ್ದಾರೆ.

