

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಅತ್ಯಂತ ಸುಂದರ ಮತ್ತು ಹಳೆಯ ಇತಿಹಾಸ ಪ್ರಸಿದ್ದ ಜೋಡುಕೆರೆ ವಿಷಕಾರಿ ಪ್ಲಾಸ್ಟಿಕ್, ಗಾಜಿನ ಬಾಟಲಿ, ಇನ್ನಿತರ ತ್ಯಾಜ್ಯದ ವಸ್ತುಗಳ ಆಗರವಾಗಿತ್ತು. ಇದರ ಸ್ವಚ್ಚತೆಗೆ ಪಣತೊಟ್ಟ ” ಪ್ರತಿಧ್ವನಿ ವೆಬ್ ನ್ಯೂಸ್ ” ಸ್ಥಳೀಯ ಹೋಲಿ ರೋಜರಿ ಶಾಲಾ ಮಕ್ಕಳ ಸಹಯೋಗದೊಂದಿಗೆ ಶಿಕ್ಷಕರ ಸಹಕಾರದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಕಳೆದ ಒಂದು ತಿಂಗಳಿಂದ ಜೋಡುಕೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹರಡಿದ್ದ ಪ್ಲಾಸ್ಟಿಕ್ ಸಾಮ್ರಾಜ್ಯ ಕಂಡು ಗಾಬರಿಯಾಗಿ ಇದಕ್ಕೆ ಏನಾದರೊಂದು ಮಾರ್ಗ ಹುಡುಕಬೇಕೆಂದುಕೊಂಡ ಪ್ರತಿಧ್ವನಿ ಸಮೀಪದಲ್ಲಿ ಇರುವ ಹೋಲಿ ರೋಜರಿ ಶಾಲೆ ಮಕ್ಕಳ ಸಹಾಯ ಪಡೆದು ಶನಿವಾರ ಎರಡು ತಾಸು ಸ್ವಚ್ಚತಾ ಕಾರ್ಯ ಹಮ್ಮಿಕೊಂಡುಬದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ಮತ್ತು ಬೇಡದ ತ್ಯಾಜ್ಯವನೆಲ್ಲ ಹೆಕ್ಕಿ ತೆಗೆದು ಸ್ವಚ್ಚಗೊಳಿಸಲಾಯಿತು.

ಈ ಸಂದರ್ಭದಲ್ಲಿ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ, ಮಾತೃ ಭೂಮಿ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀರಂಗ ಕಟ್ಟಿ, ಪತ್ರಕರ್ತ ವಿಶ್ವೇಶ್ವರ ಗಾಂವ್ಕರ್, ಬೆಡಸಗದ್ದೆ ಕಿರಣ್ ಗಾಂವ್ಕರ್, ಆಂಬುಲೆನ್ಸ್ ಚಾಲಕ ಮಾರುತಿ ತಿನ್ನೇಕರ್, ಗಜಾನನ ಮುಳೆ, ರಹಮಾನ್, ವಾಟರ್ ಮ್ಯಾನ್ ನಾಗರಾಜ್, ನಾರಾಯಣ ಭಟ್ಟ, ಇನ್ನಿತರರು ಉಪಸ್ಥಿತರಿದ್ದು ಮಕ್ಕಳೊಂದಿಗೆ ಸ್ವಚ್ಚತಾ ಕಾರ್ಯದಲ್ಲಿ ಕೈ ಜೋಡಿಸಿ ಶುಭನುಡಿದರು.



ಮಂಜುನಾಥ ನಗರ ಪಟ್ಟಣ ಪಂಚಾಯತ್ ಸದಸ್ಯ ಸತೀಶ್ ಶಿವಾನಂದ ನಾಯ್ಕ ಮಾರ್ಗದರ್ಶನದಲ್ಲಿ ಪಟ್ಟಣ ಪಂಚಾಯತ್ ಸಹಕಾರದಲ್ಲಿ ಹೋಲಿರೋಜರಿ ಶಾಲೆಯ ಮುಖ್ಯೋಪಾಧ್ಯಾಯ ಫಾದರ್ ರೇಮಂಡ್ ಫರ್ನಾಂಡೀಸ್ ಪ್ರೋತ್ಸಾಹದೊಂದಿಗೆ ಶಿಕ್ಷಕರಾದ ಚಂದ್ರಶೇಖರ್, ರಾಜಶೇಖರ ಎಂ, ವೆಂಕಟರಮಣ ಭಟ್ಟ, ನೆಲ್ಸನ್ ಗೊನ್ಸಾಲೀಸ್ ಹಾಗು ಶಾಲೆಯ ಸ್ಕಾಟ್ಸ್ ಹಾಗು ಗೈಡ್ಸ್ ತಂಡದವರು ಉಪಸ್ಥಿತರಿದ್ದು ಸ್ವಚ್ಚಾತಾ ಕಾರ್ಯಕ್ಕೆ ವೇಗ ತಂದರು.

ಅತ್ಯಂತ ಹಳೆಯ ಮತ್ತು ಸುಂದರ ಜೋಡುಕೆರೆ ಯಲ್ಲಾಪುರದ ಪ್ರತಿಷ್ಟೆಯನ್ನು ಹೆಚ್ಚಿಸುವಂತಹ ಪ್ರದೇಶವಾಗಿದೆ ಇಂತಹ ಪರಿಸರ ವಿಷಕಾರಿ ಪ್ಲಾಸ್ಟಿಕ್ ತ್ಯಾಜ್ಯದಿಂದ ತುಂಬಿರುವುದು ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತಹದ್ದಾಗಿದೆ ಇಂತಹ ಕೆರೆಯ ಸ್ವಚ್ಚತೆಗೆ ಮುಂದಾದ ಪ್ರತಿಧ್ವನಿ ಪ್ರಯತ್ನ ಶ್ಲಾಘನೀಯ ಕಾರ್ಯ ಎಂದು ಮಾತೃಭೂಮಿ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀರಂಗ ಕಟ್ಟಿ ಹೇಳಿದರು.

ಸ್ವಚ್ಚತೆ ಒಂದು ದಿನಕ್ಕೆ ಸೀಮಿತವಾಗದೆ ವಾರಕ್ಕೊಮ್ಮೆ ಹಮ್ಮಿಕೊಂಡಾಗ ನಿರಂತರ ಸಂಪರ್ಕವಾದಾಗ ಕೆರೆಯ ಸುತ್ತಮುತ್ತ ಸುಂದರ ಮತ್ತು ಸ್ವಚ್ಚ ಪರಿಸರ ನಿರ್ಮಾಣ ಸಾದ್ಯವಾಗಲಿದೆ. ಎಲ್ಲಾ ಕಾರ್ಯಕ್ಕೆ ಸರ್ಕಾರವನ್ನು ಅವಲಂಬಿಸುವುದಕ್ಕಿಂತ ಜನರ ಸಹಬಾಗಿತ್ವದಲ್ಲಿ ಸಂಘ ಸಂಸ್ಥೆಗಳ ಅಡಿಯಲ್ಲಿಬಿಂತಹ ಸಮಾಜಮುಖಿ ಕಾರ್ಯ ಮಾಡುವುದು ಉತ್ತಮ. ಯಲ್ಲಾಪುರದ ಸೌಂದರ್ಯ ಹೆಚ್ಚಿಸುವ ಮತ್ತು ಧಾರ್ಮಿಕ ಕಾರ್ಯಕ್ಕೆ ಪ್ರಮುಖವಾಗಿರುವ ಜೋಡುಕೆರೆ ಸ್ವಚ್ಚತಾ ಕಾರ್ಯ ಅರ್ಥಪೂರ್ಣವಾಗಿದೆ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಶುಭ ನುಡಿಗಳನ್ನಾಡಿದರು.




