Breaking News

ಗ್ರಾಮದೇವಿ ಜಾತ್ರೆ ಲೆಕ್ಕಾಚಾರದ ಕಡತವೇ ಮಾಯ – ದೇವರ ದುಡ್ಡೆಂಬ ಭಯವೇ ಇಲ್ಲ.!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಯಲ್ಲಾಪುರ :  ಪಟ್ಟಣ ಪಂಚಾಯತ ನಲ್ಲಿ ಇಂದು 2024-25 ನೇ ಸಾಲಿನಲ್ಲಿ ಸರಕಾರ ದಿಂದ ಬಂದ ಅನುಧಾನ ವನ್ನೂ ಮಾರ್ಗ ಸೂಚಿಯಂತೆ ಕ್ರಿಯಾಯೊಜನೆ ತಯಾರಿಸಲು ವಿಷೇಶ ಸಾಮಾನ್ಯ ಸಭೆಯನ್ನೂ ಕರಿಯಲಾಗಿತ್ತು.

ಸಭೇಯ ಪ್ರಾರಂಭದಲ್ಲಿಯೇ ಓಂದೆ ವಿಷಯದ ಮೇಲೆ ಚರ್ಚಿಸಲು ಸಭೇಯನ್ನು ಕರೆದ ಬಗ್ಗೆ ಸದಸ್ಯರಾದ ರಾಧಾಕೃಷ್ಣ ನಾಯ್ಕ , ಸತೀಶ ನಾಯ್ಕ , ಸೋಮೇಶ್ವರ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು .

ಕಳೇದ ಯಲ್ಲಾಪುರ ಗ್ರಾಮದೇವಿ ಜಾತ್ರೆಯ ಲೆಕ್ಕಾಚಾರ ದ ಕೂರಿತು ಮಾರ್ಚ 19 ರಂದು ನಡೆದ ಸಭೇಯಲ್ಲಿ ತನಿಖೆಗೆ ಠರಾವು ಮಾಡಿದ್ದು ಅದರ ಠರಾವು ಪ್ರತಿ ನಿಡಿ ಸಭೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ನಂತರ ಜಾತ್ರೆಯ ಕುರಿತು ನಡೆದ ಚರ್ಚೆಯಲ್ಲಿ ಯಲ್ಲಾಪುರ ಪಟ್ಟಣ ಪಂಚಾಯತ ಇಂಜಿನಿಯರಿಂಗ್ ವಿಭಾಗ ಹಾಗೂ ರೆವಿನ್ಯೂ ವಿಭಾಗದಲ್ಲಿ ಅಥವಾ ಇನ್ಯಾವುದೆ ವಿಭಾಗದಲ್ಲಿ ಜಾತ್ರೆಗೆ ಸಂಭಂದಿಸಿದ ಪೈಲ್ ಇಲ್ಲಾ ಎಂದು ಅಧಿಕಾರಿಗಳೂ ಜಾರಿಕೊಂಡಾಗಾ ಪ್ರಭಾರ ಮುಖ್ಯಾಧಿಕಾರಿಗಳು ಹಾಗೂ ಅಧ್ಯಕ್ಷ ರು ಅಧಿಕಾರಿಗಳನ್ನೂ ತರಾಠೆಗೆ ತೆಗೆದುಕೊಂಡರು.

ಜಾತ್ರೆ ಮುಗಿದ ದೀನದಿಂದ ಇಂದಿನ ವರೆಗೆ ಜಾತ್ರೆಯ ಲೇಕ್ಕಾಚಾರ ಕೇಳಿ ಬೇಸತ್ತಿದ್ದ ಸದಸ್ಯರಾದ ರಾಧಾಕೃಷ್ಣ ನಾಯ್ಕ , ಸುನಂದಾ ಧಾಸ್ , ಸತೀಶ ನಾಯ್ಕ ನಾವು ಕಳೆದ ಸಭೇಯಲ್ಲಿ ಯೆ 12 ಲಕ್ಷದ ಅಪರಾ ತಪರಾ ನಡೆದ ಬಗ್ಗೆ ತನಿಖೆಗೆ ಠರಾವು ಮಾಡಿದ್ದು ಇಗಾ ಸಾಮನ್ಯ ಸಭೇ ನಡೆಸದೆ ವಿಷೆಷ ಸಾಮಾನ್ಯ ಸಭೆ ನಡೆಸಿದ ಕಾರಣ ಜಾತ್ರೆ ವಿಷಯದಲ್ಲಿ ಅವ್ಯವಹಾರ ನಡೆದಿರುವುದು ಸತ್ಯ ಇಗಾ ಪೈಲ್ ಸಹಾ ಇಲ್ಲಾ ಎಂದು ಹೇಳುತ್ತಿರುವದು ಇದನ್ನೂ ದ್ರಡಿಕರಿಸುತ್ತಿದೆ ಇದರಲ್ಲಿ ಇನ್ನೂ ಹೆಚ್ಚಿನ ಅವ್ಯವಹಾರ ನಡೆದಿರುವದು ಕಂಡು ಬರುತ್ತಿದ್ದು ಠರಾವು ಪ್ರತಿ ಪ್ರಡೆದು ಲೊಕಾಯುಕ್ತರನ್ನೂ ಭೇಟಿ ಮಾಡಿ ತನಿಖೆಗೆ ಆಗ್ರಹ ಮಾಡುತ್ತೆವೆ ಎಂದು ಸಭೆಯಲ್ಲಿ ಹೇಳಿದರು.

ಎರಡು ವರ್ಷಗಳಿಂದ ಆಗ್ರಹಿಸುತ್ತಿದ್ದ ಜಾತ್ರೆಯ ಲೆಕ್ಕಾಚಾರದ ಪೈಲ್ ಕಳೆದಿದೆ ಎಂದು ಅಧಿಕಾರಿಗಳು ಹೇಳುತ್ತಿರುವದು ಆಶ್ಚರ್ಯ ತಂದಿದೆ, ಅಧಿಕಾರಿಗಳೂ ಇದರಲ್ಲಿ ಹಣ ತಿಂದಿರುವದು ಖಚಿತ. ಜಾತ್ರಾ ಹಣ ತಿಂದ ಪ್ರಕರಣ ಲೊಕಾಯುಕ್ತದಲ್ಲಿ ದೂರು ದಾಖಲಿಸುತ್ತೆನೆ. ಸತೀಶ್ ಶಿವಾನಂದ ನಾಯ್ಕ್ , ಪಟ್ಟಣ ಪಂಚಾಯತ್ ಸದಸ್ಯರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *