Breaking News

ನಿಸರ್ಗ ಮಡಿಲಿನ ಬೆಟ್ಟದಮೇಲೊಂದು ಪಂಚಮುಖಿ ಆಂಜನೇಯ – ಓಶೋ ಧ್ಯಾನ ಪರಿಸರ-ಪತ್ರೇವನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : ತಾಲೂಕಿನ ಇಡಗುಂದಿ ಪಂಚಾಯತ ವ್ಯಾಪ್ತಿಯಲ್ಲಿ ಬರುವ ದೋಣಗಾರ ಸಮೀಪದ ತುಂಬಳ್ಳಿ ಬಳಿ ನಿಸರ್ಗ ರಮಣೀಯ ಬೆಟ್ಟದ ಮೇಲೊಂದು ಪಂಚಮುಖಿ ಆಂಜನೇಯ ಮತ್ತು ಓಶೋ ಪ್ರತಿಕೃತಿ ಕೆತ್ತನೆಯ ವಿಗ್ರಹ ಪ್ರತಿಷ್ಠಾಪನೆಯಾಗಿರುವ ಪರಿಸರದಲ್ಲಿ ದೃಡ ಸಂಕಲ್ಪವಿರುವ ಧ್ಯಾನಾಸಕ್ತರಿಗೆ ಜೀವನದ ಸತ್ಯ ಅರಿಯಲು ವ್ಯವಸ್ಥೆಯಾಗಿದೆ.


ಗಣಪತಿ ಸುಬ್ರಾಯ ತುಂಬಳ್ಳಿ ಎಂಬುವರು ಓಶೋ ಸಿದ್ಧಾಂತದ ಪ್ರತಿಪಾದಕರಾಗಿ ದ್ಯಾನಾಸಕ್ತರಿಗೆ ವ್ಯವಸ್ಥೆ ಕಲ್ಪಿಸುತ್ತಾ ಬಂದಿದ್ದಾರೆ.


   ತುಂಬಳ್ಳಿ ಸಮೀಪದ ಪರಿಸರದಲ್ಲಿ ಬೆಟ್ಟದ ಮೇಲೆ ನಂಬಿ ಬರುವ ಭಕ್ತರಿಗೆ ಧ್ಯಾನಕ್ಕೆ ಪ್ರಶಸ್ಥವಾದ ಸ್ಥಳಾವಕಾಶವಿದ್ದು ಬೆಟ್ಟದಲ್ಲಿ ನಡೆದು ಸಾಗಲು 108  ತತ್ವಗಳನ್ನು ಆದರಿಸುವ ಮೆಟ್ಟಿಲುಗಳನ್ನು ಕೆತ್ತಲಾಗಿದೆ.

ಬೆಟ್ಟದ ತುಂಬೆಲ್ಲಾ ಪರಮೇಶ್ವರನಿಗೆ ಪ್ರಿಯವಾದ ಪತ್ರೆ ಗಿಡಗಳ ರಾಶಿಯೆ ತುಂಬಿದೆ ಅದಕ್ಕಾಗಿ  ಬೆಟ್ಟದ ಪರಿಸರವನ್ನು “ಪತ್ರೆವನ” ಎಂದು ಕರೆಯಲಾಗುತ್ತಿದೆ.

ತುಂಬಳ್ಳಿ ಗಣಪತಿ ಅವರ ನಿವಾಸದಲ್ಲಿ ದ್ಯಾನಮಂದಿರವಿದ್ದು ಅಲ್ಲಿ ಸಂಕಲ್ಪ ಹೊತ್ತು ಸಾಗುವ ಜನರಿಗೆ ಕೌನ್ಸಿಲಿಂಗ್ ಮಾಡಲಾಗುತ್ತದೆ.

ಅಲ್ಲಿಂದ ಬೆಟ್ಟಕ್ಕೆ ತೆರಳಿ 108 ಮೆಟ್ಟಿಲು ಹತ್ತಬೇಕು ಹತ್ತುವ ಸಮಯದಲ್ಲಿ ಕೈಯ್ಯಲ್ಲಿ ಮಂತ್ರಾಕ್ಷತೆ ಹಿಡಿದು ದೃಡ ಸಂಕಲ್ಪ ಮಾಡುತ್ತಾ ಸಾಗಬೇಕು.

ಬೆಟ್ಟದ ತುದಿ ತಲುಪಿದ ನಂತರ ಅಲ್ಲಿನ ವಿಗ್ರಹಕ್ಕೆ ಪೂಜೆ ಸಲ್ಲಿಸಿ ದ್ಯಾನಿಸಬೇಕಿದೆ. ಬಹು ಸಮಯದಿಂದ ಈ ಪರಿಸರವು ದ್ಯಾನ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದು ಮತ್ತಷ್ಟು ಜನಮಾನಸಕ್ಕೆ ತೆರೆದುಕೊಳ್ಳುತ್ತಿದೆ.


ಒಶೋ ಸಿದ್ದಾಂತ ಮತ್ತು ಪಂಚಮುಕಿ ಆಂಜನೇಯನ ಶಕ್ತಿ ಕ್ರೂಡಿಕರಿಸಿಕೊಂಡ ಆದ್ಯಾತ್ಮ ಕೇಂದ್ರವಾಗಿ ತುಂಬಳ್ಳಿಯ ಪತ್ರೇವನ ದ್ಯಾನಸಕ್ತರನ್ನು ಕೈ ಬೀಸಿ ಕರೆಯುತ್ತಿದೆ. ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು mob-9482755942 land -9481231389 ಕರೆ ಮಾಡಬಹುದಾಗಿದೆ.

ಶ್ರೀ ಸ್ವಾಮಿ ಗಣೇಶ ( ಗಣಪತಿ ಸುಭ್ರಾಯ ತುಂಬಳ್ಳಿ ಮನೆ)

ಯಲ್ಲಾಪುರದ ” ಪತ್ರೇವನ ” ದಲ್ಲಿ ಓಶೋ ಧ್ಯಾನ ಪರಿಸರ ಸಂಕಲ್ಪ ಕ್ಷೇತ್ರ.
ನವೀನ ಮಾನವತೆಗೊಂದು
ವಿನೂತನ ಅವಕಾಶ.

ಮನಃ ಶಾಂತಿಗಾಗಿ
ಕುಟುಂಬದ ಸ್ವಾಸ್ಥ್ಯಕ್ಕಾಗಿ
ನೆಮ್ಮದಿಯ ನಿದ್ರೆಗಾಗಿ
ಶ್ರೇಷ್ಠ ಸಂತಾನಕ್ಕಾಗಿ

ಓಶೋ ಅವರ ಟೆರೋ ರೀಡಿಂಗ್
ಮತ್ತು ವೈಜ್ಞಾನಿಕ ಕೌನ್ಸಲಿಂಗ್
ಸಂಕಲ್ಪ ಕ್ಷೇತ್ರದಲ್ಲಿ ಪ್ರಾರ್ಥನೆ
ಸರಳ ಉಪಾಯದಲ್ಲಿ ನೆಮ್ಮದಿ ಕಾಣಲು
ಟೆರೋ ಜ್ಯೋತಿಷ್ಯ , ಕ್ಷೇತ್ರ ಪೂಜೆ
ಈ ಎಲ್ಲಾ ವಿವರಗಳಿಗಾಗಿ
ಸಂಪರ್ಕಿಸಿ :-
ಸ್ವಾಮಿ ಗಣೇಶ ( ಗಣಪತಿ ತುಂಬಳ್ಳಿ ಮನೆ)
ದೋಣಗಾರ (ಪೋ) ಇಡಗುಂದಿ
ಯಲ್ಲಾಪುರ (ತಾ) ಉತ್ತರ ಕನ್ನಡ(ಜಿ)
ಪಿನ್ – 581337
ವಿಸೂ…ಪ್ರತಿ ಗುರುವಾರ ವಿಶೇಷ
ಮೊಬೈಲ್ -9482755942
ಮನೆ ಸಂಖ್ಯೆ -9481231389
ನಮೋ ನಮೋ ವಿಶ್ವ ಶಾಂತಿಗೆ ನಮೋ ನಮಃ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *