
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕೋಳಿಕೇರಿಯಲ್ಲಿ ಬಸ್ ನಿಲುಗಡೆ ಮಾಡುವಂತೆ ಸೂಕ್ತ ಆದೇಶ ಇದ್ದರೂ ಬಸ್ ನಿಲುಗಡೆ ಮಾಡದಿರುವುದನ್ನು ಖಂಡಿಸಿ ತಾಲೂಕಿನ ಕಣ್ಣಿಗೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೋಳಿಕೇರಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನ.28 ರಂದು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರೆಸುವ ಕುರಿತು ವಾ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿ ತಲುಪುವಂತೆ ಗ್ರೇಡ್-೨ ತಹಸೀಲ್ದಾರ್ ಸಿ.ಜಿ ನಾಯ್ಕ ಪಿಎಸ್ಐ ನಸ್ರೀನ್ ತಾಜ್ ರವರಿಗೆ ಪತ್ರ ನೀಡಿದ್ದಾರೆ.

ಕೋಳಿಕೇರಿಯ ಸುತ್ತಮುತ್ತ ಏಳೆಂಟು ಗ್ರಾಮಗಳ 2000 ಕ್ಕೂ ಅಧಿಕ ಮಂದಿ ವಿವಿಧ ಕೆಲಸಗಳಿಗಾಗಿ ಸಂಚಾರಕ್ಕೆ ಬಸ್ಸುಗಳನ್ನೇ ಆಶ್ರಯಿಸಬೇಕಿದೆ. ವಿದ್ಯಭ್ಯಾಸದ ಸಲುವಾಗಿ 1೦೦ ಕ್ಕೂ ಅಧಿಕ ಮಕ್ಕಳು ಶಾಲಾ-ಕಾಲೇಜುಗಳಿಗೆ ಹೋಗಲೂ ಸಹ ಬಸ್ಸುಗಳಲ್ಲಿ ಸಂಚರಿಸುವುದು ಅನಿವಾರ್ಯವಾಗಿದೆ. ಈ ಹಿನ್ನಲೆಯಲ್ಲಿ ಬಸ್ಸುಗಳ ನಿಲುಗಡೆ ಮಾಡದಿರುವುದರ ಕುರಿತು ಮುಖ್ಯ ಸಂಚಾರ ವ್ಯವಸ್ಥಾಪಕರು ವಾ.ಕ.ರ.ಸಾ.ಸಂಸ್ಥೆಯ ಕೇಂದ್ರ ಕಚೇರಿ ಹುಬ್ಬಳ್ಳಿಯವರಲ್ಲಿ ಮನವಿ ಮಾಡಿದ್ದು ಜು.೦4 ರಲ್ಲಿ ಬಸ್ಸು ನಿಲುಗಡೆ ಆದೇಶಿಸಿದ್ದಾರೆ.
ಆದರೂ ಇಂದಿಗೂ ಬಸ್ ನಿಲುಗಡೆ ಮಾಡದಿರುವುದನ್ನು ಖಂಡಿಸಿ ಪ್ರತಿಭಟನೆಗೆ ಮುಂದಾಗಿರುವುದಾಗಿ ಮುಖ್ಯ ಸಂಚಾರ ವ್ಯವಸ್ಥಾಪಕ, ವಾ.ಕ.ರ.ಸಾ.ಸಂಸ್ಥೆ ಹುಬ್ಬಳ್ಳಿ, ಶಾಸಕ ಶಿವರಾಮ ಹೆಬ್ಬಾರ್, ವಿಭಾಗೀಯ ನಿಯಂತ್ರಣಾಧಿಕಾರಿ ವಾ.ಕ.ರ.ಸಾ.ಸಂ ಶಿರಸಿ, ಯಲ್ಲಾಪುರ ತಹಸೀಲ್ದಾರ, ಪೊಲೀಸ್ ನಿರೀಕ್ಷಕರು, ಹಾಗೂ ಘಟಕ ವ್ಯವಸ್ಥಾಪಕರಿಗೆ ಕಣ್ಣಿಗೇರಿ ಗ್ರಾ.ಪಂ ಉಪಾಧ್ಯಕ್ಷ ನಾಗೇಶ ನಾರಾಯಣ ಗಾವಡೆ, ಸದಸ್ಯೆ ಲಕ್ಷ್ಮೀ ವಸಂತ ಪಾಟೀಲ, ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘ ಗೌರವಾಧ್ಯಕ್ಷ ಜಾನ್ ಚಳಕೀಕರ, ಎಸ್.ಡಿ.ಎಂ.ಸಿ ಅಧ್ಯಕ್ಷ ರಾಘು ಅಣ್ಣಪ್ಪ ಮರಾಠಿ, ಬಿಜೆಪಿ ಕೋಳಿಕೇರಿ ಬೂತ್ ಅಧ್ಯಕ್ಷ ನಾಗರಾಜ ಮಾರುತಿ ಪಾಟೀಲ, ಉನ್ನತಿ ಗೌಳಿ ಕ್ರೆಡಿಟ್ ಕೋ-ಆಪ್ ಸೊಸೈಟಿ ಅಧ್ಯಕ್ಷ ಮಾಕು ಸೋನು ಕೊಕ್ರೆ ಸಹಿ ಮಾಡಿ ಮನವಿ ಮಾಡಿದ ಪತ್ರ ನೀಡಲಾಗಿದೆ.