
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಸೋಲಿಸಲು ಪಕ್ಷದೊಳಗೆ ಇದ್ದು ವಿರೋಧಿ ಚಟುವಟಿಕೆ ಮಾಡಿದ ಪರಿಣಾಮ ಕೆಲವು ಸದಸ್ಯರು ಶಿಸ್ತು ಕ್ರಮಕ್ಕೆ ಗುರಿಯಾಗಿದ್ದರು ಆದರೆ ಕಳೆದೆರಡು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಶಿಸ್ತು ಕ್ರಮ ಎದುರಿಸುತ್ತಿದ್ದ ಕೆಲ ಪಕ್ಷ ವಿರೋಧಿ ಸದಸ್ಯರನ್ನು ಪುನಃ ಅದೇ ಸ್ಥಾನಗಳಿಗೆ ಮುಂದುವರೆಸಿರುವುದನ್ಗು ಅತ್ಯಂತ ಪ್ರಭಲವಾಗಿ ಖಂಡಿಸುತ್ತೇನೆ ಎಂದು ಯಲ್ಲಾಪುರ ಪಟ್ಟಣ ಪಂಚಾಯತ್ ಸದಸ್ಯ ಹಾಗು ಹೆಬ್ಬಾರ್ ಅಭಿಮಾನಿ ಬಳಗದ ಪ್ರಮುಖ ಸತೀಶ್ ಶಿವಾನಂದ ನಾಯ್ಕ್ ಪಕ್ಷದ ವಿರುದ್ದ ಗುಡುಗಿದರು.

ನಮ್ಮ ನಾಯಕಕರು ಮತ್ತು ಶಾಸಕರಾದ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗಿನಿಂದ ಅವರೊಂದಿಗೆ ನಾವು ಹಿಂಬಾಲಿಸಿ ಪಕ್ಷಕ್ಕೆ ಸೇರ್ಪಡೆಯಾಗಿ ತತ್ವ ಸಿದ್ದಾಂತಗಳಿಗೆ ಕಟಿಬದ್ದರಾಗಿ ನಡೆದುಕೊಂಡು ಬಂದಿದ್ದೇವೆ ಪಕ್ಷದೊಳಗೆ ನಮಗೆ ಎಷ್ಟೇ ನೋವು ನೀಡಿದರು ನಿರ್ಲಕ್ಷ್ಯ ತೋರಿದರು ನಮ್ಮ ನಾಯಕರಾದ ಹೆಬ್ಬಾರ್ ಅವರಿಗಾಗಿ ಎಲ್ಲವನ್ನು ಸಹಿಸಿಕೊಂಡು ಬಂದಿದ್ದೇವೆ ಆದರೆ ಅಂತಹ ನಿಗರ್ವಿ ಜನ ನಾಯಕ ಹೆಬ್ಬಾರ್ ಅವರ ಸೋಲಿಗೆ ಪ್ರಯತ್ನಿಸಿದ ಇದೇ ಶಿಸ್ತಿನ ಪಕ್ಷದ ಕೆಲ ಪಕ್ಷವಿರೋದಿ ಬಿಜೆಪಿಸದಸ್ಯರ ನಡೆ ಅತ್ಯಂತ ಅಮಾನವೀಯ ಅಂತಹವರ ಮೇಲೆ ಕ್ರಮ ಕೈಗೊಳ್ಳಿ ಎಂದು ಖುದ್ದು ಹೆಬ್ಬಾರ್ ಅವರೆ ಲಿಖಿತವಾಗಿ ಕೇಳಿ ಶಿಸ್ತು ಕ್ರಮಕ್ಕೆ ಒಳಗಾದ ಸದಸ್ಯರನ್ನು ಯಾವುದೆ ಮಾಹಿತಿ ನೀಡದೆ ಪುನಃ ನಿಯೋಜನೆಗೊಳಿಸಿರುವುದು ದುರಂತವಾಗಿದೆ. ನಮ್ಮದು ಶಿಸ್ತಿನ ಪಕ್ಷ ಎಂದು ಬಾಷಣದಲ್ಲಿ ಮಾತ್ರ ಹೇಳಿಕೊಂಡರೆ ಸಾಲದು ಮಾಡಿ ತೋರಿಸಬೇಕಿದೆ. ಶಾಸಕರ ಗಮನಕ್ಕೆ ತರದೆ ಪಕ್ಷ ವಿರೋಧಿಗಳನ್ನು ಮತ್ತೆ ನಿಯೋಜಿಸಿರುವುದನ್ನು ಬಲವಾಗಿ ಖಂಡಿಸುತ್ತೇವೆ ಎಂದು ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ಸುನಂದದಾಸ್ ಹೇಳಿದರು.

ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಇಂತಹ ಪಕ್ಷ ವಿರೋಧಿಗಳಿಂದ ಪಕ್ಷಕ್ಕೆ ಬಲವಾದ ಪೆಟ್ಟು ಬೀಳಲಿದೆ ಮತ್ತು ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ದವೆ ಮತ ಯಾಚಿಸಲಿದ್ದಾರೆ. ಇದಕ್ಕೆ ಪಕ್ಷದ ವರಿಷ್ಟರೆ ಅಧಿಕೃತ ಒಪ್ಪಿಗೆ ನೀಡಿದಂತಾಗಲಿದೆ. ಇದಕ್ಕೆ ಆಸ್ಪದ ನೀಡಧ ನಮ್ಮ ನಾಯಕರಾದ ಶಿವರಾಮ ಹೆಬ್ಬಾರ್ ಗಮನಕ್ಕೆ ತಂದು ಮುಂದಿನ ಹೆಜ್ಜೆ ಇಡಬೇಕಿದೆ. ಅವರ ಒಪ್ಪಿಗೆ ನಂತರವೆ ಇಂತಹ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಆಗ್ರಹಿಸುವೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಅಮಿತ್ ಅಂಗಡಿ ಸದಸ್ಯರುಗಳಾದ ಪ್ರಶಾಂತ್ ತಳವಾರ್, ಅಲಿ ನೂತನ ನಗರ , ಗೀತಾ ದೇಶ್ ಭಂಡಾರಿ, ಹಲಿಮಾ ಕಕ್ಕೇರಿ ಉಪಸ್ಥಿತರಿದ್ದರು.