Breaking News

ಪಕ್ಷ ವಿರೋಧಿಗಳ ಸೇರ್ಪಡೆ – ಸಿಡಿದೆದ್ದ ಹೆಬ್ಬಾರ್ ಪಡೆ – ಈಗೆಲ್ಲಿ ಹೋಯ್ತು ತತ್ವ ಸಿದ್ದಾಂತ ವರಿಷ್ಟರಿಗೆ ಸತೀಶ್ ನಾಯ್ಕ್- ಸುನಂದದಾಸ್ ಖಡಕ್ ಪ್ರಶ್ನೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಪ್ರತಿಧ್ವನಿ ಯಲ್ಲಾಪುರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಸೋಲಿಸಲು ಪಕ್ಷದೊಳಗೆ ಇದ್ದು ವಿರೋಧಿ ಚಟುವಟಿಕೆ ಮಾಡಿದ ಪರಿಣಾಮ ಕೆಲವು ಸದಸ್ಯರು ಶಿಸ್ತು ಕ್ರಮಕ್ಕೆ ಗುರಿಯಾಗಿದ್ದರು ಆದರೆ ಕಳೆದೆರಡು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಶಿಸ್ತು ಕ್ರಮ ಎದುರಿಸುತ್ತಿದ್ದ ಕೆಲ ಪಕ್ಷ ವಿರೋಧಿ ಸದಸ್ಯರನ್ನು ಪುನಃ ಅದೇ ಸ್ಥಾನಗಳಿಗೆ ಮುಂದುವರೆಸಿರುವುದನ್ಗು ಅತ್ಯಂತ ಪ್ರಭಲವಾಗಿ ಖಂಡಿಸುತ್ತೇನೆ ಎಂದು ಯಲ್ಲಾಪುರ ಪಟ್ಟಣ ಪಂಚಾಯತ್ ಸದಸ್ಯ ಹಾಗು ಹೆಬ್ಬಾರ್ ಅಭಿಮಾನಿ ಬಳಗದ ಪ್ರಮುಖ ಸತೀಶ್ ಶಿವಾನಂದ ನಾಯ್ಕ್ ಪಕ್ಷದ ವಿರುದ್ದ ಗುಡುಗಿದರು.

ನಮ್ಮ ನಾಯಕಕರು ಮತ್ತು ಶಾಸಕರಾದ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗಿನಿಂದ ಅವರೊಂದಿಗೆ ನಾವು ಹಿಂಬಾಲಿಸಿ ಪಕ್ಷಕ್ಕೆ ಸೇರ್ಪಡೆಯಾಗಿ ತತ್ವ ಸಿದ್ದಾಂತಗಳಿಗೆ ಕಟಿಬದ್ದರಾಗಿ ನಡೆದುಕೊಂಡು ಬಂದಿದ್ದೇವೆ ಪಕ್ಷದೊಳಗೆ ನಮಗೆ ಎಷ್ಟೇ ನೋವು ನೀಡಿದರು ನಿರ್ಲಕ್ಷ್ಯ ತೋರಿದರು ನಮ್ಮ ನಾಯಕರಾದ ಹೆಬ್ಬಾರ್ ಅವರಿಗಾಗಿ ಎಲ್ಲವನ್ನು ಸಹಿಸಿಕೊಂಡು ಬಂದಿದ್ದೇವೆ ಆದರೆ ಅಂತಹ ನಿಗರ್ವಿ ಜನ ನಾಯಕ ಹೆಬ್ಬಾರ್ ಅವರ ಸೋಲಿಗೆ ಪ್ರಯತ್ನಿಸಿದ ಇದೇ ಶಿಸ್ತಿನ ಪಕ್ಷದ ಕೆಲ ಪಕ್ಷವಿರೋದಿ ಬಿಜೆಪಿ‌ಸದಸ್ಯರ ನಡೆ ಅತ್ಯಂತ ಅಮಾನವೀಯ ಅಂತಹವರ ಮೇಲೆ ಕ್ರಮ ಕೈಗೊಳ್ಳಿ ಎಂದು ಖುದ್ದು ಹೆಬ್ಬಾರ್ ಅವರೆ ಲಿಖಿತವಾಗಿ ಕೇಳಿ ಶಿಸ್ತು ಕ್ರಮಕ್ಕೆ ಒಳಗಾದ ಸದಸ್ಯರನ್ನು ಯಾವುದೆ ಮಾಹಿತಿ ನೀಡದೆ ಪುನಃ ನಿಯೋಜನೆಗೊಳಿಸಿರುವುದು ದುರಂತವಾಗಿದೆ. ನಮ್ಮದು ಶಿಸ್ತಿನ ಪಕ್ಷ ಎಂದು ಬಾಷಣದಲ್ಲಿ ಮಾತ್ರ ಹೇಳಿಕೊಂಡರೆ ಸಾಲದು ಮಾಡಿ ತೋರಿಸಬೇಕಿದೆ. ಶಾಸಕರ ಗಮನಕ್ಕೆ ತರದೆ ಪಕ್ಷ ವಿರೋಧಿಗಳನ್ನು ಮತ್ತೆ ನಿಯೋಜಿಸಿರುವುದನ್ನು ಬಲವಾಗಿ ಖಂಡಿಸುತ್ತೇವೆ ಎಂದು ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ಸುನಂದದಾಸ್ ಹೇಳಿದರು.

ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಇಂತಹ ಪಕ್ಷ ವಿರೋಧಿಗಳಿಂದ ಪಕ್ಷಕ್ಕೆ ಬಲವಾದ ಪೆಟ್ಟು ಬೀಳಲಿದೆ ಮತ್ತು ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ದವೆ ಮತ ಯಾಚಿಸಲಿದ್ದಾರೆ. ಇದಕ್ಕೆ ಪಕ್ಷದ ವರಿಷ್ಟರೆ ಅಧಿಕೃತ ಒಪ್ಪಿಗೆ ನೀಡಿದಂತಾಗಲಿದೆ. ಇದಕ್ಕೆ ಆಸ್ಪದ ನೀಡಧ ನಮ್ಮ ನಾಯಕರಾದ ಶಿವರಾಮ ಹೆಬ್ಬಾರ್ ಗಮನಕ್ಕೆ ತಂದು ಮುಂದಿನ ಹೆಜ್ಜೆ ಇಡಬೇಕಿದೆ. ಅವರ ಒಪ್ಪಿಗೆ ನಂತರವೆ ಇಂತಹ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಆಗ್ರಹಿಸುವೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಅಮಿತ್ ಅಂಗಡಿ‌ ಸದಸ್ಯರುಗಳಾದ ಪ್ರಶಾಂತ್ ತಳವಾರ್, ಅಲಿ ನೂತನ ನಗರ , ಗೀತಾ ದೇಶ್ ಭಂಡಾರಿ, ಹಲಿಮಾ ಕಕ್ಕೇರಿ ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *