
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಪ್ರತಿಧ್ವನಿ ಯಲ್ಲಾಪುರ : ಪ್ರತಿ ವರ್ಷ ಗ್ರಾಮದೇವಿ ಅನುಗ್ರಹದಲ್ಲಿ ಸಮಸ್ತ ಭಕ್ತಾದಿಗಳ ಸಹಕಾರದಲ್ಲಿ ಮತ್ತು ನನ್ನ ಹಿತೈಷಿಗಳು ಸ್ನೇಹಿತರು ಸಂಘ ಸಂಸ್ಥೆಗಳ ಸಹಕಾರದಲ್ಲಿ ರಿಕ್ಷಾ ಟ್ಯಾಕ್ಸಿ ಚಾಲಕಮಾಲಕರ ಶ್ರಮದಲ್ಲಿ ಅನೇಕ ತಾಯಂದಿರ ಪಾಲ್ವೊಳ್ಳುವಿಕೆಯಿಂದ ಮೂರು ದಿನಗಳ ಕಾಲ ಗ್ರಾಮದೇವಿ ಸಾನಿದ್ಯದಲ್ಲಿ ಯಶಸ್ವಿಯಾಗಿ ನಡೆದ ಅನ್ನ ಪ್ರಸಾದ ಸೇವೆಯ ಯಶಸ್ಸಿಗೆ ಶಿರ ಭಾಗಿ ನಮಿಸುತ್ತೇನೆ ಎಂದು ಗ್ರಾಮದೇವಿ ಸಾನಿದ್ಯ ಅನ್ನ ಪ್ರಸಾದಸೇವೆಯ ಆಯೋಜನೆಯ ಪ್ರಮುಖ ಸಾಮಾಜಿಕ ಕಾರ್ಯಕರ್ತ ಸಂತೋಷ್ ನಾಯ್ಕ್ ಹೇಳಿದರು.

ಅವರು ಪಟ್ಟಣದ ಗ್ರಾಮದೇವಿ ಸಾನಿದ್ಯದಲ್ಲಿ ನವರಾತ್ರಿ ಉತ್ಸವ ಅಂಗವಾಗಿ ಮೂರುದಿನಗಳ ಕಾಲ ಆಯೋಜಿಸಿದ್ದ ಬೃಹತ್ ಅನ್ನ ಪ್ರಸಾದ ಸೇವೆಯು ಯಶಸ್ವಿಯಾಗಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಸಹಕರಿಸಿದ ಸರ್ವರಿಗು ಕೃತಜ್ಞತೆ ಸಲ್ಲಿಸಿ ಮಾತನಾಡಿದರು.

ನವರಾತ್ರಿ ಉತ್ಸವದಲ್ಲಿ ಯಲ್ಲಾಪುರ ಸೀಮೆಗೆ ಮಹಾಶಕ್ತಿಪೀಠ ಎಂದೇ ಖ್ಯಾತಿ ಪಡೆದ ಗ್ರಾಮದೇವಿ ಸಾನಿದ್ಯದಲ್ಲಿ ಪ್ರತಿ ವರ್ಷ ಭಗತ್ ಸಿಂಗ್ ಆಟೋ ಚಾಲಕ ಮಾಲಕರ ಸಂಘ ಗ್ರಾಮದೇವಿ ಟ್ಯಾಕ್ಸಿ ಚಾಲಕ ಮಾಲಕರ ಸಂಘ, ಬಸವೇಶ್ವರ ಗೂಡ್ಸ್ ರಿಕ್ಷಾ ಚಾಲಕ ಮಾಲಕರ ಸಂಘ, ಕನ್ನಡ ಪರ ಸಂಘಟನೆಗಳು ಹಾಗು ಕೆಲವು ಧಾನಿಗಳ ಸಹಕಾರದಿಂದ ಬೃಹತ್ ಪ್ರಮಾಣದಲ್ಲಿ ಪ್ರಸಾದ ಸೇವೆ ನಡೆಸಿಕೊಂಡು ಬರುತ್ತಿದ್ದು ಈ ವರ್ಷವು ಸಹಸ್ರಾರು ಸಂಖ್ಯೆಯಲ್ಲಿ ಪ್ರಸಾದ ಸ್ವೀಕರಿಸಿ ಹರಸಿದ್ದಾರೆ.

ವರ್ಷದಿಂದ ವರ್ಷಕ್ಕೆ ದಾನಿಗಳ ಸಂಖ್ಯೆ ಮತ್ತು ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು ಗ್ರಾಮದೇವಿ ಅನುಗ್ರಹವೇ ಕಾರಣವಾಗಿದೆ. ಇಂತಹ ಸಾರ್ಥಕ ಕಾರ್ಯಕ್ಕೆ ಬಲತುಂಬಿದ ಸರ್ವರಿಗು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಸಮಸ್ತರಿಗು ವಂದನೆಗಳು. ನಿಮ್ಮ ಸೇವೆಗೆ ತಾಯಿ ಜಗನ್ಮಾತೆ ಗ್ರಾಮದೇವಿ ಹರಸಿ ನಿಮ್ಮ ಏಳಿಗೆಗೆ ಹರಸಲಿ ಎಂದು ಹೇಳಿದರು.

ದಾನಗಳಲ್ಲಿ ಅತ್ಯಂತ ಶ್ರೇಷ್ಠ ದಾನ ಅನ್ನದಾನ ಈ ಕಾಯಕದಲ್ಲಿ ಸಹಕರಿಸಿದ ಜನಪ್ರತಿಧಿಗಳು, ಸಂಘ, ಸಂಸ್ಥೆ, ಸಮಾಜಗಳು, ಗ್ರಾಮದೇವಿ ದೇವಸ್ಥಾನದ ಆಡಳಿತ ಮಂಡಳಿ, ವೆಂಕಟರಮಣ ಮಠದ ಪ್ರಮುಖರು, ಎಲ್ಲಾ ಬಗೆಯ ವಾಹನ ಚಾಲಕ ಮಾಲಕರು, ಸರ್ಕಾರಿ ಅಧಿಕಾರಿಗಳು, ಪೊಲೀಸ್ ಇಲಾಖೆಯವರು, ಅಗ್ನಿಶಾಮಕ ದಳದವರು, ಸಹಕಾರಿ ಬ್ಯಾಂಕುಗಳು ವ್ಯಾಪಾರ ವ್ಯವಹಾರದವರು, ಪೌರ ಕಾರ್ಮಿಕರು, ಸ್ನೇಹಿತರು, ಕುಟುಂಬದ ಸದಸ್ಯರು, ಎಲ್ಲಾ ಬಗೆಯ ಕಾರ್ಮಿಕರು ಹಾಗು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಸರ್ವರಿಗು ನನ್ನ ವಂದನೆಗಳು. ಸಂತೋಷ ನಾಯ್ಕ್, ಅನ್ನಪ್ರಸಾದ ಸೇವೆ ಸಂಘಟನೆ ಪ್ರಮುಖ