
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಬೆಲ್ ರಸ್ತೆಯಲ್ಲಿ ಹಳೆಯ ತಹಸೀಲ್ದಾರ್ ಕಚೇರಿಯ ಮುಂಭಾಗ ರಸ್ತೆಯ ಒಂದು ಬದಿ ದಡೂತಿ ಟ್ಯಾಂಕರುಗಳು, ಲಾರಿಯ ಬಾಡಿ ಮಟ್ಟವನ್ನೂ ಮೀರಿ ಕಟ್ಟಿಗೆ ತುಂಬಿರುವ ಲಾರಿ, ಇನ್ನಿತರೆ ದೊಡ್ಡ ಗಾತ್ರದ ವಾಹನಗಳನ್ನು ರಸ್ತೆ ಬದಿ ನಿಲ್ಲಿಸುವುದರಿಂದ ಇನ್ನೊಂದು ಬದಿಯಿಂದ ಬರುವ ವಾಹನಗಳಿಗಾಗಲೀ ಸಂಚರಿಸುವ ಪಾದಚಾರಿಗಳಿಗಾಗಲೀ ಸಂಕಷ್ಟ ತಪ್ಪಿದ್ದಿಲ್ಲ. ಒಂದು ದೊಡ್ಡ ಅವಘಡ ಆಗದ ಹೊರತು ಎಚ್ಚೆತ್ತುಕೊಳ್ಳುವ ಲಕ್ಷಣಗಳೆ ಕಂಡು ಬರುತ್ತಿಲ್ಲ.

ಈ ಸಮಸ್ಯೆಯ ಕುರಿತು ಪತ್ರಿಕೆಗಳೂ ಸಹ ವರದಿ ಪ್ರಕಟಿಸಿ ಎಚ್ಛರಿಸಿದ್ದವು. ಆದರೂ ಯಾವುದೇ ಪ್ರಯೋಜನವಾಗದಿರುವುದು ವಿಪರ್ಯಾಸವಾಗಿದೆ. ಸದ್ಯ ತಹಸೀಲ್ದಾರ ಕಚೇರಿ ನೂತನ ಆಡಳಿತ ಸೌಧಕ್ಕೆ ಸ್ಥಳಾಂತರಗೊAಡಿದ್ದು ಹಳೆಯ ಕಟ್ಟಡದ ಮುಂಭಾಗದ ರಸ್ತೆಯಲ್ಲಿ ವಾಹನ ನಿಲುಗಡೆಗೆ ಕಡಿವಾಣ ಹಾಕುವವರಿಲ್ಲದಂತಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಗಮನ ಹರಿಸಿ ಗಜಗಾತ್ರದ ವಾಹನಗಳನ್ನು ಬೇಕಾಬಿಟ್ಟಿ ರಸ್ತೆ ಬದಿ ನಿಲ್ಲಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಅಬಿಪ್ರಾಯವಾಗಿದೆ.
Prathidvani Yellapura