



ಪ್ರತಿಧ್ವನಿ ,ಯಲ್ಲಾಪುರ : ತಾಲ್ಲೂಕಿನ ಮದನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಯಲ್ಲಾಪುರ ಮುಂಡಗೋಡು ರಸ್ತೆಯಲ್ಲಿರುವ ಬೆಳಕೊಪ್ಪ ಎಂಬಲ್ಲಿ ಸುಮಾರು ಆರು ಮಕ್ಕಳು ಯಲ್ಲಾಪುರ ಪಟ್ಟಣದ ಶಾಲೆಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ನಿತ್ಯವು ಬಸ್ ನಲ್ಲಿ ಸಂಚಾರ ಮಾಡುತ್ತಾರೆ ಆದರೆ ಇತ್ತೀಚೆಗೆ ಬಸ್ ನಿಲ್ಲಿಸದ ಪರಿಣಾಮ ವಿದ್ಯಾಭ್ಯಾಸಕ್ಕೆ ಅಡಚಣೆಯಾಗಿದೆ. ಮಕ್ಕಳ ಪೋಷಕರು ಮನವಿ ಮಾಡಿ ಅಧಿಕಾರಿಗಳಬಳಿ ಸಮಸ್ಯೆ ಹೇಳಿಕೊಂಡರು ಬಸ್ ನಿಲ್ಲಿಸದಿರುವುದನ್ನು ಕಂಡ ಮಕ್ಕಳು ಮಂಗಳವಾರ ಯಲ್ಲಾಪುರ ಡಿಪೋ ಮ್ಯಾನೇಜರ್ ಕಚೇರಿಗೆ ಶಾಲಾ ಸಮವಸ್ತ್ರದಲ್ಲಿ ಪಾಟಿಚೀಲದ ಸಹಿತ ಆಗಮಿಸಿ ಮನವಿ ಸಲ್ಲಿಸಿದ ಘಟನೆ ನಡೆದಿದೆ.

ಸಾರಿಗೆ ಸಂಸ್ಥೆ ವ್ಯವಸ್ಥೆಯೆ ನಾಚುವಂತೆ ಮಕ್ಕಳು ಶಾಲಾ ಸಮವಸ್ತ್ರದಲ್ಲೆ ವಿದ್ಯಾಭ್ಯಾಸದ ಅಡಚಣೆ ತಪ್ಪಿಸಲು ಸಂಚಾರಕ್ಕೆ ಬಸ್ ನಿಲ್ಲಿಸುವಂತೆ ಮನವಿ ಸಲ್ಲಿಸಿದ್ದು ವ್ಯವಸ್ಥೆ ನಾಚಿಕೆ ಪಡುವಂತಿತ್ತು.
ಬೆಳಕೊಪ್ಪದಲ್ಲಿ ಬಸ್ ನಿಲ್ದಾಣ ಇಲ್ಲ ನಿಲ್ದಾಣ ಬೇಕೆಂದರೆ ಕಿಲೋಮೀಟರ್ ಗಟ್ಟಲೆ ಸಾಗಬೇಕಾದ ಅನಿವಾರ್ಯತೆ ಇದೆ. ಚಿಕ್ಕ ಮಕ್ಕಳು ಅಷ್ಟು ದೂರ ಸಾಗುವುದು ಸಹ ಕಷ್ಟವಾಗಲಿದೆ ಈ ಹಿನ್ನೆಲೆಯಲ್ಲಿ ಮಕ್ಕಳ ಪೋಷಕರು ಮನವಿ ಮಾಡಿದರು ಪ್ರಯೋಜನವಾಗದೆ ಕೊನೆಗೆ ಮಕ್ಕಳೆ ರೊಚ್ಚಿಗೆದ್ದು ಮನವಿ ಸಲ್ಲಿಸಿದ್ದಾರೆ ಇನ್ನಾದರು ಸಮಸ್ಯೆ ಬಗೆಹರಿಯುತ್ತದ ಕಾದು ನೋಡಬೇಕಿದೆ.

ಬಸ್ ವ್ಯವಸ್ಥೆ ಸಮರ್ಪಕವಾಗಿರದೆ ಮಕ್ಕಳ ವಿಧ್ಯಾಭ್ಯಾಸಕ್ಕೆ ತೊಡಕಾಗಿದೆ. ಈ ಕುರಿತು ಅಧಿಕಾರಿಗಳಿಗೆ ಮತ್ತು ಚಾಲಕ ನಿರ್ವಾಹಕರಿಗೆ ಮೇಲಿಂದ ಮೇಲೆ ಸಮಸ್ಯೆ ಹೇಳಿಕೊಂಡರು ಪ್ರಯೋಜನವಾಗಲಿಲ್ಲ ಮಂಗಳವಾರ ಮತ್ತೆ ಅದೇ ಪುನರಾವರ್ತನೆಯಾದ ಹಿನ್ನೆಲೆಯಲ್ಲಿ ಶಾಲೆ ವಂಚಿತರಾದ ಮಕ್ಕಳು ಡಿಪೋ ಮ್ಯಾನೇಜರ್ ಅವರಿಗೆ ನೇರವಾಗಿ ಕಂಡು ಮನವಿ ಮಾಡಿದ್ದಾರೆ ನಮ್ಮ ಮನವಿಗೆ ಸರಿಹಣೊಗದ ಸಮಸ್ಯೆ ಮಕ್ಕಳ ಮನವಿಗೆ ಸರಿಹೋಗಬಹುದೇನೊ ಎಂಬ ಆಶಾ ಭಾವನೆ.
ಮಕ್ಕಳ ಪೋಷಕರು

ಸಂತೋಷ ವರ್ಣೇಕರ್
ಯಲ್ಲಾಪುರ ಬಸ್ ಡಿಪೋ ಮ್ಯಾನೇಜರ್







Prathidvani Yellapura