



ಪ್ರತಿಧ್ವನಿ ಯಲ್ಲಾಪುರ : ಸಮಾಜದಲ್ಲಿ ಎಲ್ಲಾ ರಂಗದವರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಿ ಆದರಿಸುವುದು ಸಾಮಾನ್ಯ ಆದರೆ ಆಟೋರಿಕ್ಷಾ ಚಾಲಕರು ಮತ್ತು ಮಾಲಕರನ್ನು ಗೌರವಿಸುವ ಒಂದು ವಿಧಾಯಕ ಸಮಾಜ ಸೇವಾ ಕಾರ್ಯ ಹಮ್ಮಿಕೊಂಡಿರುವ ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ಅವರ ಸಾರ್ಥಕ ಕಾರ್ಯ ನಿರಂತರವಾಗಿ ನಿರ್ವಿಘ್ನವಾಗಿ ಸಾಗಲಿ. ಸಮಾಜದಲ್ಲಿ ಚಾಲಕ ವೃತ್ತಿ ಅತ್ಯಂತ ಶ್ರೇಷ್ಠ ಸ್ಥಾನವಾಗಿ ಮಾರ್ಪಾಡಾಗಿದೆ ದೇಶದ ಪ್ರಧಾನಿಯಿಂದ ಹಿಡಿದು ಸಾಮಾನ್ಯ ಅಧಿಕಾರಿಗಳು ಚಲಕನ ಅವಶ್ಯಕತೆ ಇದ್ದೇ ಇದೆ ಅಂತಹವರನ್ನು ಗುರುತಿಸಿ ಬೆನ್ನೆಲುಬಾಗಲು ಮುಂದಾಗುವ ಎಲ್ಲರಿಗು ನನ್ನ ವಂದನೆಗಳು ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು

ಅವರು ಪಟ್ಟಣದ ಅಡಿಕೆ ಭವನದಲ್ಲಿ ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಯಲ್ಲಾಪುರ ಆಟೋ ಚಾಲಕರ ಮತ್ತು ಮಾಲಕರಿಗೆ ಔತಣ,ಸಮವಸ್ತ್ರ, ಪಾಸಿಂಗ್, ಮತ್ತು ಪ್ರಿಂಟಿಂಗ್ ಹುಡ್ ವಿತರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇರುವುದೆಲ್ಲಾ ನನಗೆ ಬೇಕು ಎನ್ನುವ ಧನಿಕರ ಮದ್ಯೆ ನನಗೆ ಒಲಿದ ವರಮಾನದಲ್ಲಿ ಕೊಂಚ ಬಡವರಿಗೆ ಸಮಾಜದಲ್ಲಿ ಸೇವೆ ಸಲ್ಲಿಸಿದರೆ ಅದು ಆತ್ಮ ತೃಪ್ತಿ ನೀಡಲಿದೆ ಇಂತಹ ಸಾರ್ಥಕ ಕಾರ್ಯ ಮಾಡುವ ಕೈಂಕರ್ಯ ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ಅವರ ಸೇವೆ ಸ್ಮರಣೀಯವಾದುದು ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿ.ಎಸ್.ಪಾಟೀಲ್ ಹೇಳಿದರು.

ವೇದಿಕೆಯಲ್ಲಿ ಹತ್ತು ರಿಕ್ಷಾ ಚಾಲಕರ ಪತಿಗಳಿಗೆ ಅವರ ಸೇವೆ ಪರಿಗಣಿಸಿ ಶಾಲುಹೊದೆಸಿ ಗೌರವಿಸಿ ಸನ್ಮಾನಿಸಲಾಯಿತು.

ಪ್ರಮೋದ್ ಹೆಗಡೆ.
ಉಪಾಧ್ಯಕ್ಷ
ಪಂಚಾಯತ್ ರಾಜ್ ವಿಕೇಂದ್ರೀಕರಣ ಯೋಜನ ಸಮಿತಿ
ಸಾಂಸ್ಕೃತಿಕ ರಾಯಭಾರಿ ಪ್ರಮೋದ್ ಹೆಗಡೆ, ಹಿರಿಯ ಉದ್ಯಮಿ ಡಿ,ಶಂಕರ ಭಟ್, ಜಿಲ್ಲಾ ಆಟೋರಿಕ್ಷಾ ಚಾಲಕ ಸಂಘದ ಅಧ್ಯಕ್ಷ ಶಿವರಾಜ್ ಮೇಸ್ತ , ಯಲ್ಲಾಪುರ ತಾಲೂಕಾಧ್ಯಕ್ಷ ಸಂತೋಷ್ ನಾಯ್ಕ್ ಅವರು ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ಜನಪರ ಸೇವೆಯ ಕುರಿತು ಅಭಿನಂದಿಸಿ ಮಾತನಾಡಿದರು.

ಸಂತೋಷ್ ನಾಯಕ
ಯಲ್ಲಾಪುರ ತಾಲೂಕಿನ ಆಟೋ ಚಾಲಕ ಸಂಘದ ಪ್ರಮುಖ

ಸಾರ್ಥಕ ಸಮಾಜಸೇವಾ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಲು ಯಲ್ಲಾಪುರ ತಾಲೂಕಿನ ಆಟೋರಿಕ್ಷಾ ಚಾಲಕ ಮಾಲಕರ ವತಿಯಿಂದ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಉದ್ಯಮಿ ಬಾಲಕೃಷ್ಣ ನಾಯಕ್, ಅನಂತಮೂರ್ತಿ ಹೆಗಡೆ ಅವರ ಮಾತಪಿತೃಗಳಾದ ಮಹಾಬಲೇಶ್ವರ ಹೆಗಡೆ, ಶಾರದಾ ಭಟ್, ಉಪಸ್ಥಿತರಿದ್ದರು
ನಯನ ಭಟ್ ಪ್ರಾರ್ಥಿಸಿದರು. ಚಾರಿಟಬಲ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಪ್ರಾಸ್ತಾವಿಕ ನುಡಿದರು. ಗಿರಿಧರ್ ಕಬ್ನಳ್ಳಿ ನಿರೂಪಿಸಿ ವಂದಿಸಿದರು.









Prathidvani Yellapura