

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ತಿಲಕ್ಚೌಕದ ಸಾರ್ವಜನಿಕ ಗಜಾನನೋತ್ಸವ ಸಮಿತಿಯ ಕಟ್ಟಡದಲ್ಲಿ ಯಲ್ಲಾಪುರ ತಾಲೂಕು ದೈವಜ್ಞ ಸಮಾಜದ ವತಿಯಿಂದ ಲೋಕ ಕಲ್ಯಾಣಾರ್ಥ ಮತ್ತು ಸಮುದಾಯದ ಒಳಿತಿಗಾಗಿ ಹಾಗೂ ಸಂಘಟನೆಯ ದೃಷ್ಠಿಯಿಂದ 5 ಕಾಯಿಯ ಗಣ ಹವನ ಹಾಗೂ 101 ಕಲಶ ಪೂಜೆ ಮತ್ತು ಅರಿಶಿನ-ಕುಖುಮ ನೀಡುವ ಪವಿತ್ರ ಕಾರ್ಯಕ್ರಮ ಜರುಗಿತು.


ದೈವಜ್ಞ ಬ್ರಾಹ್ಮಣ ಹಿತವರ್ಧಕ ಸಂಘ ಹಾಗೂ ಜ್ಞಾನೇಶ್ವರಿ ಮಹಿಳಾ ಮಂಟಳಿ ಯಲ್ಲಾಪುರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶೇಷ ಪೂಜಾ ಕೈಂಕರ್ಯದಲ್ಲಿ ಸಮಾಜದ ಹಿರಿಯರು , ಮಹಿಳೆಯರು, ಯುವಕರು ಪಾಲ್ಗೊಂಡು ಪೂಜೆ ಯಶಸ್ವಿಗೊಳಿಸಿ ಅನ್ನಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.

