Breaking News

ಆನೆ ದಾಳಿಗೆ ರೈತನ ಬೆಳೆ ನಾಶ ಕಂಗಾಲಾದ ರೈತನಿಗೆ ಧೈರ್ಯ ತುಂಬುವರು ಯಾರು???

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ: ತಾಲೂಕಿನ ಮದನೂರು ಗ್ರಾಮ ಪಂಚಾಯತ ವ್ಯಾಪ್ತಿಯ ಕಳಸೂರು ಗ್ರಾಮದಲ್ಲಿ ಕಾಡಾನೆ ಗುಂಪಿನ ದಾಳಿಗೆ ರೈತರೋರ್ವರ ತೋಟ ಬಹಳಷ್ಟು ಹಾನಿಯಾಗಿದೆ


     ಕಳಸೂರು ಗ್ರಾಮದ ರೈತ ಕೃಷ್ಣ ನಾಗಪ್ಪ ಜಕ್ಕೊಳ್ಳನವರ ಎಂಬುವರಿಗೆ ಸೇರಿದ ಅಡಿಕೆ ಮತ್ತು ಬಾಳೆ ಬೆಳೆದಿರುವ ತೋಟ ಕಾಡಾನೆ ದಾಳಿಗೆ ಹಾನಿಯಾಗಿದ್ದು ಹದಿನೈದಕ್ಕು ಅಧಿಕ ಅಡಿಕೆಮರ ಧರೆಗುರುಳಿದೆ ದುಃಖದ ಸಂಗತಿ ಎಂದರೆ ಕಳೆದ ಕೆಲವು ವರ್ಷಗಳಿಂದ ಮಕ್ಕಳಂತೆ ಸಾಕಿ ಬೆಳೆಸಿದ ಅಡಿಕೆ ಗಿಡಗಳು ಈ ವರ್ಷ ಫಲಬಿಟ್ಟು ಭರವಸೆ ಮೂಡಿಸಿದ್ದವು ಆದರೆ ಕಾಡಾನೆ ದಾಳಿಗೆ ನಾಶವಾಗಿದೆ. ಇನ್ನು ಬಾಳೆಗಿಡಗಳು ಲೆಕ್ಕವಿಲ್ಲದಂತೆ ಧರಾಶಾಯಿಯಾಗಿದೆ.


      ಕಾಡುಪ್ರಾಣಿಗಳಿಂದ ಕಾಡಿನಲ್ಲೆ ಇದ್ದು ಜೀವನ ಸಾಗಿಸುವ ನಮಗೆ ಯಾವುದೆ ತಾಪತ್ರಯಗಳು ಬರಬಾರದೆಂದು ಗಣಹವನ ಪೂಜೆಗಳನ್ನು ಭಗವಂತನಿಗೆ ಅರ್ಪಿಸಿದ್ದೆವು ಆದರು ಎಂದೂ ಬಾರದ ಆನೆಗಳ ಹಿಂಡು ತೋಟಕ್ಕೆ ಲಗ್ಗೆ ಇಟ್ಟು ಬೆಳೆ ನಾಶಪಡಿಸಿರುವುದು‌ ಭವಿಷ್ಯದಲ್ಲಿನ ಸಮಸ್ಯೆ ನೆನೆದು ಆತಂಕ ಮನೆಮಾಡಿದೆ ಎನ್ನುತ್ತಾರೆ ನೋಂದ ರೈತ ಕೃಷ್ಣ ಎನ್ನುವವರು.


    ಸಮಸ್ಯೆ ಯಾರಬಳಿ ಹೇಳಿಕೊಂಡರು ನಮ್ಮ ಭೂಮಿ ಅತಿಕ್ರಮಣದಲ್ಲಿರುವುದರಿಂದ ಯಾವುದೆ ಪರಿಹಾರ   ಪ್ರಯೋಜನ ದೊರೆಯುತ್ತಿಲ್ಲ ಎಂಬುದು ನೊಂದ ರೈತನ ಅಳಲಾಗಿದೆ. ಆದರು ಈ ಭಾಗದ ಪ್ರಭಾವಿ‌ಮುಖಂಡ ವಿಜಯ್ ಮಿರಾಶಿ ರೈತನಿಗೆ ಕರೆಮಾಡಿ ತೋಟಕ್ಕಾದ ಹಾನಿಯ ಬಗ್ಗೆ ಮಾಹಿತಿ ಪಡೆದು ದೈರ್ಯದ ಮಾತುಗಳನ್ನಾಡಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *