

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ: ತಾಲೂಕಿನ ಮದನೂರು ಗ್ರಾಮ ಪಂಚಾಯತ ವ್ಯಾಪ್ತಿಯ ಕಳಸೂರು ಗ್ರಾಮದಲ್ಲಿ ಕಾಡಾನೆ ಗುಂಪಿನ ದಾಳಿಗೆ ರೈತರೋರ್ವರ ತೋಟ ಬಹಳಷ್ಟು ಹಾನಿಯಾಗಿದೆ

ಕಳಸೂರು ಗ್ರಾಮದ ರೈತ ಕೃಷ್ಣ ನಾಗಪ್ಪ ಜಕ್ಕೊಳ್ಳನವರ ಎಂಬುವರಿಗೆ ಸೇರಿದ ಅಡಿಕೆ ಮತ್ತು ಬಾಳೆ ಬೆಳೆದಿರುವ ತೋಟ ಕಾಡಾನೆ ದಾಳಿಗೆ ಹಾನಿಯಾಗಿದ್ದು ಹದಿನೈದಕ್ಕು ಅಧಿಕ ಅಡಿಕೆಮರ ಧರೆಗುರುಳಿದೆ ದುಃಖದ ಸಂಗತಿ ಎಂದರೆ ಕಳೆದ ಕೆಲವು ವರ್ಷಗಳಿಂದ ಮಕ್ಕಳಂತೆ ಸಾಕಿ ಬೆಳೆಸಿದ ಅಡಿಕೆ ಗಿಡಗಳು ಈ ವರ್ಷ ಫಲಬಿಟ್ಟು ಭರವಸೆ ಮೂಡಿಸಿದ್ದವು ಆದರೆ ಕಾಡಾನೆ ದಾಳಿಗೆ ನಾಶವಾಗಿದೆ. ಇನ್ನು ಬಾಳೆಗಿಡಗಳು ಲೆಕ್ಕವಿಲ್ಲದಂತೆ ಧರಾಶಾಯಿಯಾಗಿದೆ.


ಕಾಡುಪ್ರಾಣಿಗಳಿಂದ ಕಾಡಿನಲ್ಲೆ ಇದ್ದು ಜೀವನ ಸಾಗಿಸುವ ನಮಗೆ ಯಾವುದೆ ತಾಪತ್ರಯಗಳು ಬರಬಾರದೆಂದು ಗಣಹವನ ಪೂಜೆಗಳನ್ನು ಭಗವಂತನಿಗೆ ಅರ್ಪಿಸಿದ್ದೆವು ಆದರು ಎಂದೂ ಬಾರದ ಆನೆಗಳ ಹಿಂಡು ತೋಟಕ್ಕೆ ಲಗ್ಗೆ ಇಟ್ಟು ಬೆಳೆ ನಾಶಪಡಿಸಿರುವುದು ಭವಿಷ್ಯದಲ್ಲಿನ ಸಮಸ್ಯೆ ನೆನೆದು ಆತಂಕ ಮನೆಮಾಡಿದೆ ಎನ್ನುತ್ತಾರೆ ನೋಂದ ರೈತ ಕೃಷ್ಣ ಎನ್ನುವವರು.


ಸಮಸ್ಯೆ ಯಾರಬಳಿ ಹೇಳಿಕೊಂಡರು ನಮ್ಮ ಭೂಮಿ ಅತಿಕ್ರಮಣದಲ್ಲಿರುವುದರಿಂದ ಯಾವುದೆ ಪರಿಹಾರ ಪ್ರಯೋಜನ ದೊರೆಯುತ್ತಿಲ್ಲ ಎಂಬುದು ನೊಂದ ರೈತನ ಅಳಲಾಗಿದೆ. ಆದರು ಈ ಭಾಗದ ಪ್ರಭಾವಿಮುಖಂಡ ವಿಜಯ್ ಮಿರಾಶಿ ರೈತನಿಗೆ ಕರೆಮಾಡಿ ತೋಟಕ್ಕಾದ ಹಾನಿಯ ಬಗ್ಗೆ ಮಾಹಿತಿ ಪಡೆದು ದೈರ್ಯದ ಮಾತುಗಳನ್ನಾಡಿದ್ದಾರೆ.