




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ:- ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಮದ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲಗೋಡ ಗ್ರಾಮದ ಅಮೃತ ಸರೋವರ ದಡದ ಮೇಲೆ ಶುಕ್ರವಾರ ತಾಲ್ಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಿ ಎನ್.ಆರ್. ಹೆಗಡೆ ನೇತೃತ್ವದಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ಗ್ರಾಮಸ್ಥರು, ಚುನಾಯಿತ ಚನಪ್ರತಿನಿಧಿಗಳು ಹಾಗೂ ನರೇಗಾ ಕೂಲಿಕಾರಿಗೆ ವಿವಿಧ ಬಗೆಯ ಯೋಗಾಸನಗಳನ್ನು ಸ್ವತಃ ತಾಪಂ ಇಒ ರವರು ಮಾಡಿಸುವ ಮೂಲಕ ಯೋಗ ದಿನಾಚರಣೆಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಯೋಗವು ಅಂತ್ಯಂತ ಪುರಾತನವಾಗಿದ್ದು, ಹಲವಾರು ಜ್ಞಾನಿಗಳು ಅದರ ಮಹತ್ವವನ್ನು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯೋಗ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರಿಂದ ವಿಶ್ವಾದ್ಯಂತ ಇದರ ಪ್ರಯೋಜನವನ್ನು ಎಲ್ಲರೂ ಪಡೆಯುತ್ತಿದ್ದೇವೆ. ಮನಸ್ಸು-ದೇಹದ ಸಮತೋಲನಕ್ಕಾಗಿ ಪ್ರತಿದಿನ ಯೋಗ ಮಾಡುವ ಅಗತ್ಯವಿದ್ದು, ಯೋಗವು ದೇಹ, ಮನಸ್ಸು ಮತ್ತು ಆತ್ಮವನ್ನು ಪ್ರಕೃತಿಯೋಂದಿಗೆ ಮಿಲನ ಮಾಡುವ ಪ್ರಕ್ರಿಯೆಯಾಗಿದೆ ಎಂದರು.

ತಾಲ್ಲೂಕಿನ ಕಣ್ಣಿಗೇರಿ, ಉಮ್ಮಚಗಿ, ಕುಂದರಗಿ, ಹಾಸಣಗಿ, ಚಂದಗುಳಿ, ಕಿರವತ್ತಿ, ನಂದೊಳ್ಳಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ನರೇಗ ಕೂಲಿಕಾರರು ಮತ್ತು ಗ್ರಾಮಸ್ಥರಿಗೆ ಅಮೃತ ಸರೋವರಗಳ ದಡದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಯೋಗ ದಿನ ಆಚರಿಸಿ ಯೋಗದ ಮಹತ್ವ ಕುರಿತು ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ ಆಗೇರ, ಗ್ರಾಪಂ ಪಿಡಿಒ ಅಣ್ಣಪ್ಪ ವಡ್ಡರ, ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ, ಟಿಸಿ ನಾರಾಯಣ ತಾನೋಜಿ, ಟಿಎಇ ಗಳಾದ ಭವ್ಯಾ ನಾಯ್ಕ, ಅಬ್ದುಲ್ ಗಫಾರ, ಗ್ರಾಪಂ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ, ನರೇಗಾ ಕೂಲಿಕಾರರು, ಗ್ರಾಮಸ್ಥರು ಉಪಸ್ಥಿತರಿದ್ದರು.