




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಜ,21 ಅಂತರಾಷ್ಟ್ರೀಯ ಯೋಗ ದಿನ ಜಗತ್ತಿನ ಎಲ್ಲೆಡೆ ಸನಾತನ ಭಾರತೀಯ ಸಾಂಸ್ಕೃತಿಕ ಪರಂಪರೆಯ ಭಾಗವಾದ ಯೋಗ ವನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸಲಾಗುತ್ತಿದೆ ಅಂತೆಯೆ ಯಲ್ಲಾಪುರ ತಾಲೂಕಿನಾಧ್ಯಂತ ವಿವಿಧೆಡೆ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ತಾಲೂಕು ಕಾನೂನು ಸೇವಾ ಸಮಿತಿ,ವಕೀಲರ ಸಂಘ,ಪೊಲೀಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ನ್ಯಾಯಾಲಯದ ಆವರಣದಲ್ಲಿ ಯೋಗಾಸನ ಚಟುವಟಿಕೆ ನಡೆಸುವ ಮೂಲಕ ಅಂತರರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪತಂಜಲಿ ಯೋಗ ಪರಿವಾರದ ಸಂತೋಷ್ ಬಿಕ್ಕು ಗುಡಿಗಾರ್ ಮಾರ್ಗ ದರ್ಶನದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗುಡ್ಡಪ್ಪ ಬಸವಣ್ಣೆಪ್ಪ ಹಳ್ಳಕಾಯಿ, ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ್, ವಕೀಲರ ಸಂಫದ ಅಧ್ಯಕ್ಷೆ ಸರಸ್ವತಿ ಭಟ್, ಪ್ಯಾರಾ ಲೀಗಲ್ ವಾಲೆಂಟಿಯರ್ ಸುಧಾಕರ ನಾಯ್ಕ್, ವಕೀಲರು, ನ್ಯಾಯಾಲಯದ ಸಿಬ್ಬಂದಿಗಳು, ಯೋಗಾಸನದ ಪಟ್ಟುಗಳನ್ನು ಮಾಡಿದರು. ನಂತರ ಆಯೋಜಕರ ವತಿಯಿಂದ ಸಂತೋಷ್ ಗುಡಿಗಾರ್ ಅವರನ್ನು ಗೌರವಿಸಲಾಯಿತು.

ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಸಂಜಯ್ ಎಲ್ ನಾಯಕ್, ನಿಲಯ ಪಾಲಕರಾದ ಪ್ರವೀಣ್ ಕುಮಾರ್ , ಎನ್.ಸಿ.ಸಿ ಘಟಕದ ಎ.ಎನ್.ಒ ಆದ ಶಿಲ್ಪಾ ಪ್ರಭು ಮತ್ತು ನಯನಾ ಭಟ್ ಇತರೆ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪಟ್ಟಣದ ಹೋಲಿ ರೋಜರಿ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಸಾಮೂಹಿಕ ವಾಗಿ ಯೋಗ ಮಾಡುವುದರ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಕ ಚಂದ್ರಶೇಖರ ಯೋಗ ಆಸನ ಹೇಳಿಕೊಟ್ಟರು ಯೋಗದಿನದ ವಿಶೇಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ಫಾ, ರೇಮಂಡ್ ಫರ್ನಾಂಡೀಸ್ ವಿವರಿಸಿದರು. ನೆಲ್ಸನ್ ಗೊನ್ಸಾಲ್ವಿಸ್ ಸಂಸ್ಕೃತ ಶ್ಲೋಕ ಹೇಳಿಕೊಟ್ಟರು. ಶಿಕ್ಷಕ ಎಂ.ರಾಜಶೇಖರ, ವೆಂಕಟ್ರಮಣ ಭಟ್, ನೆಲ್ಸನ್ ಫರ್ನಾಂಡೀಸ್ ಉಪಸ್ಥಿತರಿದ್ದು ಯೋಗದ ವಿಶೇಷತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.