
ಯಲ್ಲಾಪುರ – ತಾಲ್ಲೂಕಿನ ಕೃಷ್ಣಗದ್ದೆ ಎಂಬಲ್ಲಿ ಮನೆಯ ಮುಂದೆ ಒಣಗಲು ಹಾಕಿದ್ದ ಕೆಂಪು ಅಡಕೆ ಕಳ್ಳತನವಾಗಿರುವ ಕುರಿತು ಯಲ್ಲಾಪುರ ಠಾಣೆಯಲ್ಲಿ ಜ.೧೫ರಂದು ಪ್ರಕರಣ ದಾಖಲಾಗಿತ್ತು. ಅದಕ್ಕೆ ಸಂಬAಧಿಸಿದAತೆ ಅಡಕೆ ಖದೀಮರನ್ನು ಮಾಲಿನ ಸಹಿತ ಯಲ್ಲಾಪುರ ಪೊಲೀಸರು ಹಿಡಿದಿದ್ದು ಕಳ್ಳರು ಅಂದರ್ ಆಗಿದ್ದಾರೆ.
ಜ.೧೪ ರಂದು ರಾತ್ರಿ ತಾಲೂಕಿನ ಕೃಷ್ಣಗದ್ದೆಯ ವಿಶ್ವೇಶ್ವರ ತಿಮ್ಮಪ್ಪ ಭಟ್ಟ ಎಂಬುವರ ಮನೆಯ ಮುಂದೆ ಒಣಗಲು ಹಾಕಿದ್ದ ಸುಮಾರು ೫೦,೦೦೦ರೂ ಮೌಲ್ಯದ ೧೩೦ ಕೆ.ಜಿ ಕೆಂಪು ಅಡಿಕೆಯನ್ನು ಯಾರೋ ಕದ್ದೊಯ್ದಿರುವ ಕುರಿತು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಯಲ್ಲಾಪುರ ಪೋಲೀಸರು ಹಲವು ಮಜಲುಗಳಲ್ಲಿ ತನಿಎ ಕೈಗೊಂಡು ಮಾ.೨೦ರಂದು ಚಿತ ಮಾಹಿತಿಯನ್ನಾಧರಿಸಿ ಅಡಿಕೆ ಕದ್ದ ಮೂವರು ಕಳ್ಳರನ್ನು ಬಂಧಿಸಿ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ದಾಂಡೇಲಿ ನಿವಾಸಿ ಮೌಲಾಲಿ ಸತ್ತರ ಸಾಬ ಜಮಾದಾರ(೩೧)ಹಾಗೂ ತಾಲೂಕಿನ ಸವಣೂರು ನಿವಾಸಿ ಸಾಹಿಲ್ ಶಬ್ಬೀರ್ ಗವಾರಿ(೧೯), ಹುಬ್ಬಳ್ಳಿಯ ಸಮೀರ್ ಮೆಹಬೂಬ ಸಾಬ ಹವಾಲ್ದಾರ(೨೧) ಎಂಬ ಮೂವರು ಕಳ್ಳರನ್ನು ಬಂಧಿಸಿ ಒಂದು ಕ್ವಿಂಟಾಲ್ ೩೦ ಕೆಜಿ ಕೆಂಪು ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ಸಿಫ್ಟ್ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಜಿಲ್ಲಾ ಪೋಲೀಸ್ ಅಧೀಕ್ಷಕ ನಾರಾಯಣ ಎಂ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ, ಜಗದೀಶ ಎಂ.ಎನ್, ಉಪಾಧೀಕ್ಷಕರಾದ ಗಣೇಶ ಕೆ.ಎಲ್ ಹಾಗೂ ಯಲ್ಲಾಪುರ ಪಿಐ ರಮೇಶ ಹಾನಾಪುರ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ಸಿದ್ದಪ್ಪ ಗುಡಿ, ಮಹಾವೀರ ಕಾಂಬಳೆ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಹಮದ್ ಶಫಿ, ಗಿರೀಶ್ ಲಮಾಣಿ, ಪ್ರವೀಣ ಪೂಜಾರ, ಕರಣಕುಮಾರ, ಶೇಷು ಮರಾಠಿ, ನಾಗರಾಜ ನಾಯ್ಕ ಮತ್ತು ಮಹಿಳಾ ಸಿಬ್ಬಂದಿಗಳಾದ ಶೋಭಾ ನಾಯ್ಕ, ರೇಖಾ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.
Prathidvani Yellapura