
ಡಿಸೆಂಬರ್ 22 ಅಂತರಾಷ್ಟ್ರೀಯ ಗಣಿತ ದಿನ ವಿಶೇಷ ಲೇಖನ. …. ಪ್ರತಿಧ್ವನಿ ಅತಿಥಿ ಬರಹ

ರವಿಕುಮಾರ ಕೆ ಎನ್
ಗಣಿತ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಬಿಸಗೋಡ
ತಾಲೂಕು ಯಲ್ಲಾಪುರ. ಕೃಪೆ: ಅನಂತವನ್ನು ಅರಿತಾತ- ಲೇಖಕರು ಬಿ.ಕೆ ವಿಶ್ವನಾಥರಾವ್ )
ತಮಿಳುನಾಡು ರಾಜ್ಯದ ಕೊಯಂಬತ್ತೂರು ಜಿಲ್ಲೆ ಈ ರೋಡು ಪಟ್ಟಣದಲ್ಲಿ 22. 12. 2018 ರಂದು ರಾಮಾನುಜನ್ನರ ಜನನ. ತಂದೆ ಕೆ ಶ್ರೀನಿವಾಸ ಅಯ್ಯಂಗಾರ್ ಕುಂಭಕೋಣಂ ನ ಜವಳಿ ಅಂಗಡಿಯ ಗುಮಾಸ್ತರಾಗಿದ್ದರು ತಾಯಿ ಕೋಮಲತಮ್ಮಳ್ ಗೃಹಿಣಿ. ಮಧ್ಯಮ ವರ್ಗದ ಬಡ ಶ್ರೀವೈಷ್ಣವ ಕುಟುಂಬ. ರಾಮಾನುಜನ್ನರಿಗೆ ಇಬ್ಬರು ತಮ್ಮಂದಿರು ಇದ್ದರು.
1892ರಲ್ಲಿ ಕುಂಭಕೋಣಂನ ಪ್ರಾಥಮಿಕ ಶಾಲೆಗೆ ದಾಖಲಾಗಿ ವ್ಯಾಸಂಗ ಮಾಡಿದರು ಚಿಕ್ಕಂದಿನಿಂದಲೂ ಮಿತ ಭಾಷೆ ಅಂತರ್ಮುಖಿ ಯೋಜನಾ ಪರ ಗಣಿತದಲ್ಲಿ ಹೆಚ್ಚು ಆಸಕ್ತಿ. ಸಹಪಾಠಿಗಳನ್ನು ಹಿರಿಯ ವಿದ್ಯಾರ್ಥಿಗಳನ್ನು ಗಣಿತದ ಅಂತ್ಯ ತತ್ವ ಯಾವುದು ಎಂದು ಕೇಳುತ್ತಿದ್ದರು.
ಏಳನೇ ತರಗತಿಯಲ್ಲಿರುವಾಗಲೇ ಅಂಕಗಣಿತ ಶ್ರೇಢಿಗಳನ್ನು ಕಲಿತರು.ರಾಮಾನುಜನ್ನರು 8ನೇ ತರಗತಿಯಲ್ಲಿ ಓದುತ್ತಿದ್ದಾಗ ಬಿಎ ತರಗತಿಯ ಒಬ್ಬ ವಿದ್ಯಾರ್ಥಿಯ ಪುಸ್ತಕವನ್ನು ಪಡೆದು ಅದರಲ್ಲಿನ ಎಲ್ಲಾ ಪ್ರಶ್ನೆಗಳನ್ನು ಬಿಡಿಸಿ ಆ ವಿದ್ಯಾರ್ಥಿಗಳಿಗೆ ಅವುಗಳನ್ನು ಹೇಳಿಕೊಟ್ಟರು. ಹಾಗೂ ಪುಸ್ತಕದಲ್ಲಿನ ಕ್ಲಿಷ್ಟ ಪ್ರಶ್ನೆಗಳನ್ನು ತಾನೇ ಸ್ವತಃ ಬಿಡಿಸಿದರು. 1903ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಾಲೇಜು ಸೇರಿಕೊಂಡರು. ಆ ವೇಳೆಗಾಗಲೇ ಅಪಾರ ಗಣಿತದ ಜ್ಞಾನವನ್ನು ಸಂಪಾದಿಸಿದ್ದರು. ಮೆಟ್ರಿಕ್ ನಲ್ಲಿ ಹೆಚ್ಚು ಅಂಕ ಪಡೆದಕ್ಕಾಗಿ ಸುಬ್ರಹ್ಮಣ್ಯಂ ಸ್ಕಾಲರ್ಶಿಪ್ ಲಭಿಸಿತು ಇದರಿಂದ ತನ್ನ ವಿದ್ಯಾಭ್ಯಾಸದ ಖರ್ಚುಗಳನ್ನು ತಾನೇ ನಿಭಾಯಿಸುತ್ತ, ಉನ್ನತ ಮಟ್ಟದ ಗಣಿತದಲ್ಲಿ ಸಮಯ ಶಕ್ತಿ ಹಾಕಿದರು. ಇತರೆ ವಿಷಗಳನ್ನು ಕಡೆಗಣಿಸಿ, ಕ್ರಮಬದ್ಧ ಶಿಕ್ಷಣಕ್ಕೆ ಹೊಡೆತ ಬಿದ್ದು ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣರಾದರು.
ರಾಮಾನುಜನ್ನ್ ರ ಒಂದು ಅಭ್ಯಾಸವೆಂದರೆ ತಾನು ಗಣಿತದಲ್ಲಿ ಶೋಧಿಸಿದ ಫಲಿತಗಳನ್ನೆಲ್ಲ ನೋಟ್ ಬುಕ್ ನಲ್ಲಿ ಬರೆದಿಡುತ್ತಿದ್ದರು ಅಲ್ಲದೇ ಆ ನೋಟುಗಳನ್ನು ಜೋಪಾನವಾಗಿ ಕಾಪಾಡಿಕೊಂಡು ಬರುತ್ತಿದ್ದರು.1909 ರಲ್ಲಿ
ರಾಮಾನುಜನ್ನರಿಗೆ ವಿವಾಹವಾಯಿತು.
ರಮಾನುಜನ್ರ ಪ್ರತಿಬಿಂಬ ಪುರಸ್ಕರಿಸಿ ಹಲವರು ಅವರಿಗೆ ನೆರವಾದರೂ ಇವರ ಪ್ರತಿಭೆ ಬೆಳಗಬೇಕೆಂದು ಅನುಕೂಲ ಮಾಡಿಕೊಟ್ಟರು. ಅವರಲ್ಲಿ ರಾ ಬಹದ್ದೂರ್ ಪ್ರೊ. ಗಿಲ್ಬರ್ಟ್ ಪ್ರೊ. ಜಿ ಎಚ್ ಹಾರ್ಡಿ ಪ್ರೊ. ಗಿಫ್ರಿತ್,ಬಿ ಹನುಮಂತ ರಾವ್ ಪ್ರಮುಖರು.
ಶ್ರೀನಿವಾಸರಮಾನುಜನ್ನರು ಬರೆದ ಪ್ರಥಮ ಪೂರ್ಣ ಪ್ರಮಾಣದ ಸಂಶೋಧನಾ ಪ್ರಬಂಧ ಬರ್ನೋಲಿ ಸಂಖ್ಯೆಗಳ ಕೆಲವು ಲಕ್ಷಣಗಳು, ಜೊತೆಗೆ ಇತರೆ ಪ್ರಶ್ನೋತ್ತರಗಳು ಮಾದರಿ ಲೇಖನಗಳು ಜರ್ನಲ್ ಆಫ್ ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿ ಪತ್ರಿಕೆಯಲ್ಲಿ ಪ್ರಕಟವಾಯಿತು. ಹೀಗೆ ರಾಮಾನುಜನ್ನರ ಗಣಿತದಲ್ಲಿನ ಆಸಕ್ತಿ ತುಡಿತ ಹೆಚ್ಚುತ್ತಾ ಕೀರ್ತಿ ಹೆಗಡೆ ಪಸರಿಸಿತು. ಮುಂದೆ ಅವರು ವಿದ್ಯಾರ್ಥಿ ವೇತನದ ಸಹಾಯದಿಂದ ಮದ್ರಾಸಿನಲ್ಲಿ ಗಣಿತ ಸಂಶೋಧನೆ ಮುಂದುವರೆಸಿದರು.
ಹಿತೈಷಿಗಳ ಹಾಗೂ ಪ್ರೊ.ಹಾರ್ಡಿ ಅವರ ಅಪೇಕ್ಷೆಯ ಮೇರೆಗೆ ರಾಮಾನುಜನ್ನರು ಹೆಚ್ಚಿನ ಅಧ್ಯಯನಕ್ಕಾಗಿ 1914ರಲ್ಲಿ ಇಂಗ್ಲೆಂಡಿಗೆ ತೆರಳಿದರು.
ಆಹಾರ ನಿದ್ರೆಗಳನ್ನು ನಿರ್ಲಕ್ಷಿಸುವುದು ಹಾಗೂ ಇಂಗ್ಲೆಂಡಿನ ಹವಾ ಸತತ ಪರಿಶ್ರಮ ಇವುಗಳಿಂದಾಗಿ ರಾಮಾನುಜನ್ನರ ಆರೋಗ್ಯ ಕೆಟ್ಟಿತು. 1917ರಲ್ಲಿ ಕ್ಷಯರೋಗಕ್ಕೆ ಗುರಿಯಾದರು. ಹಲವು ಕಡೆ ಚಿಕಿತ್ಸೆ ಪಡೆದರು ರೋಗ ಉಲ್ಬಣದಿಂದ ಅವರು ಭಾರತಕ್ಕೆ ವಾಪಸ್ ಆಗಬೇಕಾಯಿತು. ಹೆಚ್ಚಿನ ಚಿಕಿತ್ಸೆ ಕೊಡಿಸಿದರು ಯಾವುದೇ ಪ್ರಯೋಜನವಾಗಲಿಲ್ಲ.1920 ಏಪ್ರಿಲ್ 26ರಂದು ತಮ್ಮ 33ನೇ ವಯಸ್ಸಿನಲ್ಲಿ ಗಣಿತ ಲೋಕದ ನಕ್ಷತ್ರ ಬಾನಂಗಳದಲ್ಲಿ ಮರೆಯಾಯಿತು.
ಗಣಿತ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ ಅವರ ಜೀವನವೇ ಗಣಿತ ಸಹಜ ಸಂಖ್ಯೆಗಳು, Infiny(ಅನಂತ ) ಪರಿಕಲ್ಪನೆಯ ವಿವರಣೆ, asymptotic formulae, ಕಾಂಬಿನೇಟರಿ ವಿಶ್ಲೇಷಣೆ,1729 ಹಾರ್ಡಿ-ರಾಮನುಜನ್ ಸಂಖ್ಯೆ ವಿಶೇಷತೆ, ಅನುಕ್ರಮ ಅವಿಭಾಜ್ಯ ಸಂಖ್ಯೆಗಳಲ್ಲಿ ಸಮತ್ವ, ಮಾಕ್ ತೀಟಾ ಫಂಕ್ಷನ್ ಗಳು, ಹೈಪರ್ ಜಾಮೆಟ್ರಿಕ್ ಫಂಕ್ಷನ್ ಮಾಯಾ ಚೌಕಗಳ ರಚನೆ ನಿತ್ಯ ಸಮತೆ (Identtity), ಅಭಾಗಲಬ್ಧ ಸಂಖ್ಯೆಗಳ ಬೆಲೆ ಕಂಡು ಹಿಡಿಯುವ ವಿಧಾನ ಮುಂತಾದವು ವಿಭಿನ್ನ ವಿಶೇಷ ವಿಶಿಷ್ಟ.
ಅಂತೆಯೇ ಅವರ ಸಂಶೋಧನೆಗಳು,ಉತ್ಕೃಷ್ಟ ಫಲಿತಗಳು, ವಿವಿಧ ಪರಿಕಲ್ಪನೆಗಳು, ಪ್ರಮೇಯಗಳು ಕೃತಿಗಳು ವಿಶ್ಲೇಷಣೆಗಳು ಅದ್ಭುತ. ಈ ಕೊಡುಗೆಗಳು ಇಂದಿಗೂ ಜೀವಂತ!
ಪ್ರಸ್ತುತ ಹಿಂದಿನ ವಿದ್ಯಾರ್ಥಿ ಪೀಳಿಗೆ ಇದೆಲ್ಲವನ್ನು ಅರಿತು ಪರಿಶ್ರಮದ ಹಾದಿ ಹಿಡಿದು ಸಾಧಿಸಬೇಕಿದೆ..


