Breaking News

ಉನ್ನತಿ ಗೌಳಿ ಕ್ರೆಡಿಟ್ ಕೋ-ಆಪ್ ಸೊಸೈಟಿ ಲಿ. ಗೌಳಿ ಸಮುದಾಯದ ಹೆಮ್ಮೆ ಈ ಸಂಸ್ಥೆ- ಹೆಬ್ಬಾರ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ -ತಾಲೂಕಿನ ಕಿರವತ್ತಿಯಲ್ಲಿ ಉನ್ನತಿ ಗೌಳಿ ಕ್ರೆಡಿಟ್ ಕೋ-ಆಪ್ ಸೊಸೈಟಿ ಲಿ. ಸಂಸ್ಥೆ 26 ವರ್ಷಗಳ ನಂತರ ಸ್ವತ ಕಟ್ಟಡ ಹೊಂದಿದ್ದು ನೂತನ ಕಟ್ಟಡದ ಉದ್ಘಾಟನೆ ಸಮಾರಂಭ ಮಂಗಳವಾರ ಕಿರವತ್ತಿಯಲ್ಲಿ ನಡೆಯಿತು.


ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದ ಶಾಸಕ ಶಿವರಾಮ್ ಹೆಬ್ಬಾರ್ ಮಾತನಾಡಿ ಬೇರೆಲ್ಲಾ ಸಂಘ ಸಂಸ್ಥೆಗಳು ಹುಟ್ಟಿ ಬೆಳೆದು ಸ್ವಂತ ಕಟ್ಟಡ ಕಟ್ಟಿ ಇಷ್ಟೊಂದು ಸುದೀರ್ಘ ಸಮಯ ಆರ್ಥಿಕವಾಗಿ ಮುಂದುವರೆಯುವುದು ಒಂದು ಭಾಗವಾದರೆ ಸಮಾಜದಲ್ಲಿ ಅತ್ಯಂತ ಹಿಂದುಳಿದ,ಬಡವರ,ಅನಕ್ಷರಸ್ಥ, ನಿರುದ್ಯೋಗ, ಭೂ ರಹಿತ ರನ್ನೊಳಗೊಂಡ ಗೌಳಿ ಸಮುದಾಯ ಇಂತಹ ಸಾಧನೆ ಮಾಡಿರುವುದು ಅತ್ಯಂತ ಶ್ಲಾಘನೀಯ ಮತ್ತು ಇನ್ನಷ್ಟು ಉತ್ತಮ ಬೆಳವಣಿಗೆಯೊಂದಿಗೆ ಸಂಸ್ಥೆ ಬೆಳೆಯಲಿ ಎಂದು ಹೇಳಿದರು.


ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗೌಳಿ ಸಮಾಜದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಂಸ್ಥೆ ಏಳಿಗೆಯಲ್ಲಿ ಸಹಕರಿಸುತ್ತಿರುವ ಪ್ರಮುಖ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ ನೂತನ ಕಟ್ಟಡದ ಸಭಾ ಭವನ ಉದ್ಘಾಟಿಸಿದರು.

ಸಹಕಾರ ಸಂಘಗಳ ಉಪನಿಬಂಧಕ ಮಂಜುನಾಥ ಸಿಂಗ್ ಸಂಸ್ಥೆಯ ಕಟ್ಟಡದ ಭದ್ರತಾ ಕೊಠಡಿ ಉದ್ಘಾಟಿಸಿದರು.

ಉತ್ತಮ ಸಂಸ್ಥೆಯಾಗಿ ನೇತೃತ್ವ ವಹಿಸಿ ಕೊಂಡೊಯ್ಯುತ್ತಿರುವ ಸೊಸೈಟಿ ಅಧ್ಯಕ್ಷ ಮಾಕು ಸೋನು ಕೋಕ್ರೆ, ಅವಿರತ ಶ್ರಮಿಸುತ್ತಿರುವ ಸಂಸ್ಥೆ ವ್ಯವಸ್ಥಾಪಕ ರೇಖು ಸೋನು ಕೋಕ್ರೆ, ಕಟ್ಟಡದ ನೀಲನಕ್ಷೆ ತಯಾರಿಸಿ ನೀಡಿದ ವಿಶಾಲ್ ವಾಳಂಬಿ, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುಧಾಕರ ನಾಯಕ, ಹಾಗು ಸಂಸ್ಥೆಯ ನಿರ್ಧೇಶಕರನ್ನು ವೇದಿಕೆಯಲ್ಲಿ ಶಾಸಕರು ಗೌರವಿಸಿ ಸನ್ಮಾನಿಸಿದರು
ಸಂಸ್ಥೆ ನಡೆದು ಬಂದ ದಾರಿಯ ಕಠಿಣತೆ ಕಷ್ಟ ನಷ್ಟಗಳ ಕುರಿತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಕು ಸೋನು ಕೋಕ್ರೆ ಮಾತನಾಡಿದರು.
ಶಿರಸಿ ಚಾರ್ಟರ್ಡ್ ಅಕೌಂಟೆಂಟ್ ಮಂಜುನಾಥ ಶೆಟ್ಟಿ ಸಹ ಮಾತನಾಡಿದರು.

ಸಹಕಾರ ಸಂಘಗಳ ಉಪನಿಬಂಧಕ ಮಂಜುನಾಥ ಸಿಂಗ್ ಸಂಸ್ಥೆ ಲೋಗೋ ಅನಾವರಣಗೊಳಿಸಿದರು ವೇದಿಕೆಯಲಿದ್ದ ಅತಿಥಿಗಳು ಕೈಜೋಡಿಸಿದರು


ವೇದಿಕೆಯಲ್ಲಿ ಕಿರವತ್ತಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಂಗೀತ ಆರ್ ಕೋಕ್ರೆ, ಸದಸ್ಯ ರಹಮತ್ ಅಬ್ಬಿಗೆರೆ, ಎಪಿಎಂಸಿ ಮಾಜಿ ಉಪಾಧ್ಯಕ್ಷ ರಾಘವೇಂದ್ರ ಗೋಂದಿ, ವಿಕಾಸ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ, ದನಗರ ಗೌಳಿ ಸಮುದಾಯದ ಉಪಾಧ್ಯಕ್ಷ ಬಮ್ಮು ಬೀರು ಎಡಗೆ, ಸಂಸ್ಥೆ ಉಪಾಧ್ಯಕ್ಷ ಬೀರು ಅಂಬ್ರು ಹುಂಬೆ, ಸಮಾಜ ಸೇವಕ ಅನಂತ ಬಾಬು ಕಿಣಿ, ಸಮಾಜದ ಪ್ರಮುಖರಾದ ಬಿಕ್ಕು ಜಗ್ಗು ಕೋಕ್ರೆ, ದೇವು ಜಾನು ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.
ಸುಮಂಗಲ ಹೆಗಡೆ ಪ್ರಾರ್ಥಿಸಿದರು, ಸಂಸ್ಥೆ ವ್ಯವಸ್ಥಾಪಕ ರೇಖು ಸೋನು ಕೋಕ್ರೆ ಸ್ವಾಗತಿಸಿದರು, ಮಾಲು ಕೋಕ್ರೆ ವಂದಿಸಿದರು, ಪ್ರಭಾತ ಭಟ್ಟ ವಂದೆ ಮಾತರಂ ಹಾಡಿದರು, ಶಿಕ್ಷಕ ಸುದಾಕರ ನಾಯಕ ನಿರೂಪಿಸಿದರು, ಪತ್ರಕರ್ತ ಕೇಬಲ್ ನಾಗೇಶ್ ಪ್ರಾಸ್ತಾವಿಕ ನುಡಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *