Breaking News

ಯಲ್ಲಾಪುರದಲ್ಲಿ ಪ್ರಾಚಾರ್ಯರ ವಿರುದ್ದ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳ ಮೌನ ಪ್ರತಿಭಟನೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳು ಶನಿವಾರ ಬೆಳ್ಳಂ ಬೆಳಗ್ಗೆ ಪಾಠ ಪ್ರವಚನ ಬಹಿಷ್ಕರಿಸಿ ಕಾಲೇಜು ಪ್ರಾಂಶುಪಾಲೆ ಭವ್ಯ ಸಿ ವಿರುದ್ದ ಕಾಲೇಜು ದ್ವಾರ ಬಾಗಿಲಲ್ಲಿ ಕುಳಿತು ಮೌನ ಪ್ರತಿಭಟನೆ ನಡೆಸಿ ಪ್ರಾಂಶುಪಾಲರ ವಿರುದ್ದ ಅಸಮಧಾನ ಹೊರಹಾಕಿದರು.


ಕಳೆದೆರಡು ತಿಂಗಳುಗಳಿದ ಸುಪ್ತವಾಗಿದ್ದ ಅಸಮಧಾನ ಒಮ್ಮೆಲೆ ಹೊರ ಹೊಮ್ಮಿದೆ ಶುಕ್ರವಾರ ಉಪನ್ಯಾಸಕಿ ಸುರೇಖ ತಡವಾಲ ಶಾಲೆಯಲ್ಲಿಯೆ ಕುಸಿದು ಬಿದ್ದ ಪರಿಣಾಮ ವಿದ್ಯಾರ್ಥಿಗಳು ಪೊಲೀಸರ ಗಮನಕ್ಕು ಹಾಗು ಶಾಸಕರ ಗಮನಕ್ಕೆ ತಂದು ಆಸ್ಪತ್ರೆಗೆ ದಾಖಲಿಸಿ ಉಪನ್ಯಾಸಕಿಗೆ ಚಿಕಿತ್ಸೆ ಕೊಡಿಸಿದ್ದರು.


ಶನಿವಾರ ಬೆಳಗ್ಗೆ ಕಾಲೇಜು ಪ್ರಾರಂಭವಾಗುತ್ತಿದ್ದಂತೆ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕಾಲೇಜಿನ ದ್ವಾರ ಬಾಗಿಲಲ್ಲಿ ದಿಡೀರ್ ಧರಣಿ ಮೂಲಕ ಮೌನ ಪ್ರತಿಭಟನೆ ಮಾಡಿದರು. ಒಂದು ಹಂತದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಸ್ಥಳಕ್ಕಾಗಮಿಸದೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎನ್ನುತ್ತಿದ್ದ ವಿದ್ಯಾರ್ಥಿಗಳಿಗೆ ಶಾಸಕರು ಅನ್ಯ ಕಾರ್ಯ ನಿಮಿತ್ತ ಊರಿಂದ ಹೊರಗಿದ್ದು ವಿಷಯ ತಿಳಿದು ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವುದಾಗಿ ಮಾಹಿತಿ ರವಾನಿಸಿದ ಕಾರಣ ಪ್ರತಿಭಟನೆ ಕೈಬಿಟ್ಟರು.

ತಮ್ಮ ಅಸಮಧಾನಗಳ ಪಟ್ಟಿ ಮಾಡಿ ಮನವಿ ಪತ್ರದ ಮೂಲಕ ಶಿಕ್ಷಣ ಸಚಿವರಿಗೆ ನೀಡುವ ಸಲುವಾಗಿ ತಹಸೀಲ್ದಾರ ಕಚೇರಿಗೆ ಆಗಮಿಸಿ ತಹಸೀಲ್ದಾರ ಗುರುರಾಜ ಅವರಿಗೆ ಮನವಿ ನೀಡಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ ಗುರುರಾಜ ಸಮಸ್ಯೆಯ ಕುರಿತು ಪರಿಶೀಲಿಸಿ ಮನವಿಯನ್ನು ಸಂಬಂಧಿಸಿದವರಿಗೆ ತಲುಪಿಸುವುದಾಗಿ ಭರವಸೆ ನೀಡಿದರು.

ಪ್ರಥಮ ದರ್ಜೆ ಕಾಲೇಜಿನ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು ಶೈಕ್ಷಣಿಕ ವಾತಾವರಣ ಕೆಡದಂತೆ ಶೀಘ್ರವೇ ಸಮಸ್ಯೆ ಬಗೆಹರಿಸಲಾಗುವುದು. ದಸರಾ ರಜೆಯ ಸಮಯವಾಗಿರುವುದರಿಂದ ಮುಗಿದ ತಕ್ಷಣ ಸಭೆ ಕರೆದು ಇತ್ಯರ್ಥ ಪಡಿಸಲಾಗುವುದು. ಅನ್ಯ ಕಾರ್ಯ ನಿಮಿತ್ತ ಊರಿಂದ ಹೊರಗಿರುವುದರಿಂದ ಕಾಲೇಜಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಆದರೆ ಸಂಬAಧಪಟ್ಟವರಿಗೆ ಮಾಹಿತಿ ರವಾನಿಸಿದ್ದೇನೆ. ಶಿವರಾಮ ಹೆಬ್ಬಾರ್, ಶಾಸಕರು, ಯಲ್ಲಾಪುರ ವಿಧಾನಸಭಾ ಕ್ಷೇತ್ರ


ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ಕಾಲೇಜಿನ ಬಳಿ ಪ್ರಾಚಾರ್ಯೆ ಭವ್ಯ ಸಿ ಅವರನ್ನು ಕರಾವಳಿ ಮುಂಜಾವು ಪ್ರತಿನಿಧಿ ಮಾತನಾಡಿಸಿ ಪ್ರತಿಕ್ರಿಯೆ ಕೇಳಿದಾಗ ತಾನು ೩ ತಿಂಗಳಿನಿಂದ ಜವಾಬ್ದಾರಿ ವಹಿಸಿಕೊಂಡು ಮಕ್ಕಳ ಶೈಕ್ಷಣಿಕ ಸಂಬಂಧ ಹಲವು ನಿಯಮಗಳನ್ನು ಅಳವಡಿಸಿದ್ದೇನೆ. ಮತ್ತು ಶಾಲಾ ಅವಧಿಯಲ್ಲಿ ಹೊರಹೋಗುವುದು, ತರಗತಿಗಳಿಗೆ ಗೈರಾಗುವುದು ತಪ್ಪಿಸಲು ಕಾಲೇಜು ನಿಯಮಾವಳಿಗಳ ಅನುಸಾರವಾಗಿಯೇ ವಿದ್ಯಾರ್ಥಿಗಳೊಂದಿಗಾಗಲೀ ಅಧ್ಯಾಪಕರೊಂದಿಗಾಗಲೀ ನಡೆದುಕೊಂಡಿದ್ದೇನೆ. ಯಾರದೋ ಪಿತೂರಿಯಿಂದ ವಿದ್ಯಾರ್ಥಿಗಳನ್ನು ನನ್ನ ಮೇಲೆ ಎತ್ತಿಕಟ್ಟಿ , ಕಾಲೇಜಿನ ವಾತಾವರಣವನ್ನು ಕಲುಷಿತಗೊಳಿಸಲು ಪ್ರಯತ್ನಿಸುತ್ತಿರುವುದು ವಿಷಾಧನೀಯ. ಈ ಸಂಬಂಧ ಶಾಸಕರು ಮತ್ತು ಕಾಲೇಜಿಗೆ ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೂ ತಂದಿದ್ದೇನೆ. – ಭವ್ಯಾ ಸಿ, ಪ್ರಾಂಶುಪಾಲರು, ಯಲ್ಲಾಪುರ ಪ್ರ.ದ.ಕಾಲೇಜು

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *