
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನ ಹಿತ್ಲಳ್ಳಿ ಮೂಲದ ತನಯ ಹೆಗಡೆ ಸಿ ಇ ಟಿ ಯಲ್ಲಿ ರಾಜ್ಯಕೆ 45 ನೇ ರ್ಯಾಂಕ್ ಹಾಗೂ ಜೆ ಇ ಇ ಅಡ್ವಾನ್ಸಡ್ ನಲ್ಲಿ ದೇಶಕ್ಕೆ 1790 ನೇ ರ್ಯಾಂಕ್ ಗಳಿಸಿ ಅದ್ಭುತ ಸಾಧನೆ ಮಾಡಿರುತ್ತಾನೆ.

ತನಯ ಹೆಗಡೆ ಹಿತ್ಲಳ್ಳಿ ಗ್ರಾಮದ ನಿವಾಸಿಗಳಾದ ವಿನಾಯಕ ಹೆಗಡೆ ಮತ್ತು ಶಾಂತಲಾ ಹೆಗಡೆ ದಂಪತಿಗಳ ಪುತ್ರನಾಗಿದ್ದು 1 ರಿಂದ 7 ನೇ ತರಗತಿ ವರೆಗೆ ಹಿತ್ಲಳ್ಳಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ 8 ರಿಂದ10 ರ ವರೆಗೆ ಭೈರುಂಬೆ ಪ್ರೌಢಶಾಲೆ ಯಲ್ಲಿ ವಿದ್ಯಾಬ್ಯಾಸ ಪಡೆದು ದೇಶದ ಪ್ರತಿಷ್ಠಿತ ಜೆ ಇ ಇ ಅಡ್ವಾನ್ಸಡ್ ನಲ್ಲಿ ಈ ಸಾಧನೆ ಮಾಡಿರುವುದು ಶ್ರೇಷ್ಠ ಸಾಧನೆಯಾಗಿರುತ್ತದೆ ಮತ್ತು ತಾಲೂಕಿನ ಇತರೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾನೆ. ಈತನ ಶ್ರೇಷ್ಠ ಸಾಧನೆಗೆ ತಾಲೂಕಿನ ಗಣ್ಯರು,ಜನಪ್ರತಿನಿಧಿಗಳು, ಶಿಕ್ಷಣ ಪ್ರೇಮಿಗಳು, ಸಕಲ ವಿದ್ಯಾರ್ಥಿಗಳು ಸಂಘ ಸಂಸ್ಥೆಗಳು ಧಾರ್ಮಿಕ ಮುಖಂಡರು ವಿಶೇಷವಾಗಿ ಹುಟ್ಟೂರಿನ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.


Prathidvani Yellapura