




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ…. ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ……
ಪ್ರತಿಧ್ವನಿ, ಯಲ್ಲಾಪುರ : ಪ್ರತಿ ಮನುಷ್ಯನ ಅತ್ಯಾವಶ್ಯಕ ವ್ಯವಸ್ಥೆ ಯಲ್ಲಿ ವಾಸಿಸುವ ಮನೆಯು ಪ್ರಮುಖವಾದುದು. ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಭೂಮಿಯ ಲಭ್ಯತೆ ಅತಿ ಕಡಿಮೆ. ಅದರಲ್ಲು ಯಲ್ಲಾಪುರ ತಾಲೂಕಿನಂತಹ ಅರಣ್ಯಪ್ರದೇಶವೆ ಹೆಚ್ಚಾಗಿರುವಾಗ ಸ್ವಂತ ಸೂರಿನ ಕನಸು ಬಲು ದೂರ ಇಂತಹ ಸಂದಿಗ್ದತೆಯ ನಡುವೆಯು ಸರ್ಕಾರ ಮಟ್ಟದಲ್ಲಿ ಸತತವಾಗಿ ಪ್ರಯತ್ನಿಸಿ ಬಡ ಮದ್ಯಮ ವರ್ಗದ ಸ್ವತಃ ಸೂರಿನ ಕನಸು ನನಸಾಗಿಸಿದ ಶ್ರೇಯಸ್ಸು ಕಾರ್ಮಿಕ ಖಾತೆ ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ಸಲ್ಲುತ್ತದೆ.

ಯಲ್ಲಾಪುರ ಪಟ್ಟಣದ ಮಂಜುನಾಥನಗರ ವಾಡ್೯ನ ವ್ಯಾಪ್ತಿಯಲ್ಲಿ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಹಿಂಭಾಗ 10 ಎಕರೆ ಭೂಮಿಯನ್ನು ಸಚಿವರಾದ ಹೆಬ್ಬಾರ್ ಸಂಭಂದ ಪಟ್ಟ ಅಧಿಕಾರಿಗಳೊಡನೆ ಇಲಾಖೆಯ ಸಚಿವರೊಡನೆ ಕೊನೆಗೆ ಮುಖ್ಯಮಂತ್ರಿಗಳೊಡನೆ ಚರ್ಚಿಸಿ ಪ್ರಯತ್ನಪಟ್ಟು ಪಟ್ಟಣ ಪಂಚಾಯತ ಸುಪರ್ಧಿಗೆ ನೀಡುವಲ್ಲಿ ಯಶಸ್ವಿಯಾದರು.


ನಂತರ ಆ ಭೂಮಿಯನ್ನು ಕೊಳಚೆ ನಿರ್ಮೂಲನ ಅಭಿವೃದ್ಧಿ ಮಂಡಳಿ ಅಧಿನಕ್ಕೆ ಹಸ್ತಾಂತರಿಸಿ G+2 ಮಾದರಿಯ ಗೃಹ ನಿರ್ಮಾಣದ ಯೋಜನೆಯನ್ನು ಅನುಷ್ಟಾನಗೊಳಿಸಿ ಕೊನೆಗು ಈ ಪ್ರದೇಶದಲ್ಲಿ ಸುಮಾರು 570 ಕ್ಕು ಅಧಿಕ ಮನೆಗಳ ನಿರ್ಮಾಣಕ್ಕೆ ಸಾಹಸ ಮಾಡಿದರು.

ಇದೀಗ ಭಾರತೀಯ ಸನಾತನ ಪರಂಪರೆ ಆಧಾರಿತ ನೂತನ ನಾಮ ಸಂವತ್ಸರದ ಯುಗಾದಿಯ ಶುಭ ಸಂದರ್ಭದಲ್ಲಿ ಲೋಕಾರ್ಪಣೆ ಮಾಡುತ್ತಿರುವುದು ಜನಮೆಚ್ಚುವ ದೈವ ಕಾರ್ಯದಷ್ಟೆ ಶ್ರೇಷ್ಟವಾಗಿದೆ.
ಕೇವಲ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಜನತೆಗೆ ನೀಡಬಹುದಾದ ಮೂಲಭೂತ ಸೌಕರ್ಯಗಳನ್ನು ನೀಡುವುದು ರಾಜಕೀಯ ನಾಯಕನ ಲಕ್ಷಣ. ಆ ವ್ಯಾಪ್ತಿಯನ್ನು ಮೀರಿ ಬಡವರ ಕಣ್ಣೊರೆಸಿ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಕೈಲಾದ ಸೇವೆ ಸಲ್ಲಿಸಿ ಕ್ಷೇತ್ರದ ಜನರ ಹೃದಯದಲ್ಲಿ ಸ್ಥಾನ ಪಡೆಯುವರೆ ಜನ ಸಾಮಾನ್ಯರ ಮಹಾನ್ ನಾಯಕರಾಗಬಲ್ಲರು ಅದಕ್ಕೆ ರಾಜ್ಯದಲ್ಲಿಯೆ ತಾಜಾ ಉದಾಹರಣೆ ಎಂದರೆ ನಮ್ಮ ನಿಮ್ಮ ಮನೆಯ ಮಗ ಅರಬೈಲ್ ಶಿವರಾಮ್ ಹೆಬ್ಬಾರ್.

ಲಾರಿ ಕ್ಲೀನರ್ ಆಗಿ ಡ್ರೈವರ್ ಆಗಿ ಬೆವರು ಹರಿಸಿ ದುಡಿದ ಶ್ರಮಿಕ, ಹೋಟೆಲ್ ಮೆ ಖಾನ ಚತ್ತರ್ ಮೆ ಸೋನಾ ಎಂಬಂತೆ ರಾಜ್ಯ ಹೊರ ರಾಜ್ಯ ಎಂದು ಸುತ್ತುತ್ತ ಸಿಕ್ಕ ಸಮಯದಲ್ಲಿ ಒಂದಷ್ಟು ಊಟ ಮಾಡಿ ನಿದ್ದೆ ಬಂದಾಗ ಮರದ ನೆರಳು, ಲಾರಿಯ ಒಳಗೆ, ಒಮ್ಮೊಮ್ಮೆ ಸಣ್ಣ ಬಸ್ ನಿಲ್ದಾಣದಲ್ಲು ದಿನಕಳೆದದ್ದು ಇಂದು ಇತಿಹಾಸ ಆದರೆ ಅದಾವುದನ್ನು ಮರೆಯದೆ ಮನಸ್ಸಿನಲ್ಲಿಟ್ಟುಕೊಂಡು ಬಡವರ ಬದುಕು ಹೇಗೆ ಅವರ ಕನಸುಗಳೇನು ಎಂದು ಅರಿತು ತನಗೆ ಅಧಿಕಾರ ಬಂದಾಗಿನಿಂದ ಪ್ರತಿ ನಿತ್ಯ ಬಡಮಧ್ಯಮವರ್ಗದ ಮತ್ತು ಹೆಚ್ಚಾಗಿ ಕಾರ್ಮಿಕರ ಕಲ್ಯಾಣಕ್ಕಾಗಿ ದುಡಿಯುತ್ತ ಇಂದು ರಾಜ್ಯಕ್ಕೆ ಮನೆಮಾತಾಗಿರುವ ಕಾರ್ಮಿಕರ ಮನೆ ಬೆಳಗಿದ ನಾಯಕರೆಂದು ಕರೆಸಿಕೊಳ್ಳುವ ಶಿವರಾಮ್ ಹೆಬ್ಬಾರ್ ನಿಜಕ್ಕು ಕ್ಷೇತ್ರದ ಮನೆಮಗನೆ.

ಹಲವು ದಶಕಗಳಿಂದ ಯಲ್ಲಾಪುರದಲ್ಲಿ ಒಂದಿಂಚು ಭೂಮಿಯನ್ನು ಸರ್ಕಾರದಿಂದ ನೀಡಲಾಗಿರಲಿಲ್ಲ ಸಚಿವ ಹೆಬ್ಬಾರ್ ಪ್ರಯತ್ನದಿಂದ ಹೊಸ ಇತಿಹಾಸ ಸೃಷ್ಟಿಯಾಗಿ ಇದೀಗ 570 ಮನೆಗಳ ಕಾಮಗಾರಿ ಬರದಿಂದ ಸಾಗಿದೆ ಮಾಚ್೯ 23 ರಂದು ಯುಗಾದಿ ಶುಭ ಸಂದರ್ಭದಲ್ಲಿ ಉದ್ಘಾಟಿಸುತ್ತಿರುವುದು ಅತ್ಯಂತ ಅಭಿನಂದನೀಯ ಕಾರ್ಯವಾಗಿದೆ.
ಕ್ಷೇತ್ರದಾದ್ಯಂತ ಅಭಿವೃದ್ಧಿ ಮಹಾಪೂರವೆ ಹರಿಯಲು ಸಚಿವರಾದ ಹೆಬ್ಬಾರ್ ಅವರ ಶ್ರಮದ ಪ್ರತಿಫಲವೆ ಕಾರಣವಾಗಿದೆ. ಹೆಬ್ಬಾರ್ ಅವರ ಕುರಿತಾಗಿ ಜನರು ಮಾತನಾಡುವುದಕ್ಕಿಂತ ಅವರ ಕಾರ್ಯಗಳೆ ಮಾತನಾಡುತ್ತವೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿಯೆ ಮಾದರಿ ಕ್ಷೇತ್ರವಾಗಿಸುವ ಅವರ ಮಹಾ ಕನಸಿಗೆ ನಮ್ಮೆಲ್ಲರ ಕ್ಷೇತ್ರದ ಸಮಸ್ತ ಜನರ ಆಶಿರ್ವಾದವಿದೆ. ಮಂಜುನಾಥ ನಗರ ವಾಡ್೯ ವ್ಯಾಪ್ತಿಯಲ್ಲಿ ಹೊಸ ನಗರವನ್ನೆ ಸೃಷ್ಟಿ ಮಾಡಿ ಬಡ ಮದ್ಯಮ ವರ್ಗದವರ ಸ್ವಂತ ಸೂರಿನ ಕನಸು ನನಸು ಮಾಡಿದ್ದಕ್ಕೆ ವಾಡ್೯ ಸದಸ್ಯನಾಗಿ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.
ಸತೀಶ್ ಶಿವಾನಂದ ನಾಯ್ಕ್
ಪಟ್ಟಣ ಪಂಚಾಯತ ಸದಸ್ಯ
ಮಂಜುನಾಥ ನಗರ








Prathidvani Yellapura