



ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ಜೋಡುಕೆರೆ ದಡದಲ್ಲಿ ಅರಣ್ಯ ಇಲಾಖೆ ವತಿಯಿಂದ ಕೆಲ ವರ್ಷಗಳ ಹಿಂದೆ ವನಮಹೋತ್ಸವ ಸಂದರ್ಭದಲ್ಲಿ ನೆಟ್ಟ ಗಿಡಗಳು ಸ್ವಚ್ಚಂದವಾಗಿ ಬೆಳೆಯುತ್ತಿದ್ದು ಭವಿಷ್ಯದಲ್ಲಿ ಕೆರೆಯ ಅಂದ ಹೆಚ್ಚಿಸಲಿದೆ ಎನ್ನುವಷ್ಟರಲ್ಲಿ ಬೆಳೆದ ಗಿಡಗಳು ಅರ್ಧ ಭಾಗಕ್ಕೆ ತುಂಡಾಗಿ ಬೀಳುತ್ತಿದ್ದು ಬೇಸಿಗೆಯಲ್ಲಿ ನೀರುಣಿಸಿ ಮಕ್ಕಳಂತೆ ಗಿಡಗಳ ಪೋಷಣೆಯಲಿದ್ದ ಜೋಡುಕೆರೆ ಪ್ರೇಮಿಗಳಿಗೆ ನೋವುಂಟಾಗಿದೆ.

ಕೆರೆಯ ದಡದಲ್ಲಿರುವ ಇಪ್ಪತ್ತಕ್ಕು ಹೆಚ್ಚು ಗಿಡಗಳಿಗೆ ಅರಣ್ಯ ಇಲಾಖೆಯವರು ವನಮಹೋತ್ಸವದ ಸಂದರ್ಭದಲ್ಲಿ ” ಟ್ರೀ ಗಾಡ್೯ ” ಅಳವಡಿಸಿದ್ದರು ಅದೇ ಈಗ ಬೆಳೆದ ಗಿಡಗಳಿಗೆ ಕಂಟಕಪ್ರಾಯವಾಗಿದೆ.

ಬೆಳೆದ ಗಿಡಗಳು ಮಳೆ ಗಾಳಿಗೆ ತೂರಾಡುತ್ತ ಟ್ರೀಗಾಡ್೯ ಕಂಟವನ್ನು ಸವರುತ್ತಿರುವುದರಿಂದ ಗಿಡದ ಆ ಭಾಗ ಸವೆದು ಸವೆದು ತುಂಡಾಗಿ ಬೀಳುತ್ತಿದೆ ಇದೊಂದು ರೀತಿ ಗಿಡಗಳ ಹತ್ಯಾ ಪ್ರಯತ್ನ ಎನ್ನ ಬಹುದು.

ಇದನ್ನು ಅರಣ್ಯ ಇಲಾಖೆಯ ಮಹಾಪರಾಧ ಎಂದು ಬಿಂಬಿಸುತ್ತಿಲ್ಲ ಬದಲಾಗಿ ಸ್ವಚ್ಚಂದವಾಗಿ ಬೆಳೆದು ಮೈ ತುಂಬಾ ಹಸಿರುಟ್ಟು ಪರಿಸರದ ಸೌಂದರ್ಯ ಹೆಚ್ಚಿಸುವ ಗಿಡಗಳ ನೆಡುವಿಕೆಯೊಂದೆ ನಮ್ಮ ಮತ್ತು ಅರಣ್ಯ ಇಲಾಖೆಯ ಕರ್ತವ್ಯವಲ್ಲ ಎಲ್ಲೆಲ್ಲಿ ಇಲಾಖೆ,ಸಂಘ ಸಂಸ್ಥೆಗಳು, ಸಾರ್ವಜನಿಕರು ಇಂತಹ ಗಿಡಗಳನ್ನು ನೆಟ್ಟು ಪರಿಸರದ ಪರವಾಗಿದ್ದೇವೆ ಎಂದು ಜಗತ್ತಿಗೆ ಸಾರುತ್ತಿದ್ದೇವೊ ಅಂತಹ ಸಂಕಟ ಮತ್ತು ಸಂಕಷ್ಟದಲ್ಲಿರುವ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಗಿಡಗಳನ್ನು ಉಳಿಸಿಕೊಳ್ಳಬೇಕಿದೆ.

ಪ್ರದಾನ ಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ” ಏಕ್ ಪೇಡ್ ಮಾಕೆ ನಾಮ್” ಎಂಬ ಹೊಸ ಘೊಷವಾಕ್ಯದೊಂದಿಗೆ ಮತ್ತಷ್ಡು ಗಿಡಗಳನ್ನು ನೆಡುವ ಪ್ರಯತ್ನದಲಿದ್ದಾರೆ. ಇಂತಹ ಸಂದರ್ಭದಲ್ಲಿ ನೆಟ್ಟಿರುವ ಗಿಡಗಳು ಕೆಲವು ಕಾರಣಗಳಿಂದ ಸಾಯುತ್ತಿವೆ ಅಂತಹ ಸಮಸ್ಯೆಗಳ ನಿವಾರಣೆಗೆ ಮುಂದಾಗಬೇಕಿದೆ ಮತ್ತು ” ಟ್ರೀ ಗಾಡ್೯ ವಿನ್ಯಾಸವನ್ನು ಮತ್ತಷ್ಟು ಬದಲಿಸಿ ಗಿಡಗಳ ಬೆಳವಣಿಗೆಗೆ ಪೂರಕವಾಗುವಂತೆ ವಿನ್ಯಾಸಗೊಳಿಸಬೇಕಿದೆ ಎಂಬುದು ಗಿಡ ಬೆಳೆಸುವವರ ಅಭಿಪ್ರಾಯವಾಗಿದೆ.