Breaking News

ಟ್ರೀ ಗಾಡ್೯ ಕಂಠವೆ ಬೆಳೆದ ಗಿಡಗಳಿಗೆ ಕಂಟಕವಾಗಿದೆ – ಅರಣ್ಯ ಇಲಾಖೆ ಪರಿಶೀಲಿಸಬೇಕಿದೆ.


ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ಜೋಡುಕೆರೆ ದಡದಲ್ಲಿ ಅರಣ್ಯ ಇಲಾಖೆ ವತಿಯಿಂದ ಕೆಲ ವರ್ಷಗಳ ಹಿಂದೆ ವನಮಹೋತ್ಸವ ಸಂದರ್ಭದಲ್ಲಿ ನೆಟ್ಟ ಗಿಡಗಳು ಸ್ವಚ್ಚಂದವಾಗಿ ಬೆಳೆಯುತ್ತಿದ್ದು ಭವಿಷ್ಯದಲ್ಲಿ ಕೆರೆಯ ಅಂದ ಹೆಚ್ಚಿಸಲಿದೆ ಎನ್ನುವಷ್ಟರಲ್ಲಿ ಬೆಳೆದ ಗಿಡಗಳು ಅರ್ಧ ಭಾಗಕ್ಕೆ ತುಂಡಾಗಿ ಬೀಳುತ್ತಿದ್ದು ಬೇಸಿಗೆಯಲ್ಲಿ ನೀರುಣಿಸಿ ಮಕ್ಕಳಂತೆ ಗಿಡಗಳ ಪೋಷಣೆಯಲಿದ್ದ ಜೋಡುಕೆರೆ ಪ್ರೇಮಿಗಳಿಗೆ ನೋವುಂಟಾಗಿದೆ.


     ಕೆರೆಯ ದಡದಲ್ಲಿರುವ ಇಪ್ಪತ್ತಕ್ಕು ಹೆಚ್ಚು ಗಿಡಗಳಿಗೆ ಅರಣ್ಯ ಇಲಾಖೆಯವರು ವನಮಹೋತ್ಸವದ ಸಂದರ್ಭದಲ್ಲಿ ” ಟ್ರೀ ಗಾಡ್೯ ” ಅಳವಡಿಸಿದ್ದರು ಅದೇ ಈಗ ಬೆಳೆದ ಗಿಡಗಳಿಗೆ ಕಂಟಕಪ್ರಾಯವಾಗಿದೆ.

ಬೆಳೆದ ಗಿಡಗಳು ಮಳೆ ಗಾಳಿಗೆ ತೂರಾಡುತ್ತ ಟ್ರೀಗಾಡ್೯ ಕಂಟವನ್ನು ಸವರುತ್ತಿರುವುದರಿಂದ  ಗಿಡದ ಆ ಭಾಗ ಸವೆದು ಸವೆದು ತುಂಡಾಗಿ ಬೀಳುತ್ತಿದೆ ಇದೊಂದು ರೀತಿ ಗಿಡಗಳ ಹತ್ಯಾ ಪ್ರಯತ್ನ ಎನ್ನ ಬಹುದು.


     ಇದನ್ನು ಅರಣ್ಯ ಇಲಾಖೆಯ ಮಹಾಪರಾಧ ಎಂದು ಬಿಂಬಿಸುತ್ತಿಲ್ಲ ಬದಲಾಗಿ ಸ್ವಚ್ಚಂದವಾಗಿ ಬೆಳೆದು ಮೈ ತುಂಬಾ ಹಸಿರುಟ್ಟು ಪರಿಸರದ ಸೌಂದರ್ಯ ಹೆಚ್ಚಿಸುವ ಗಿಡಗಳ ನೆಡುವಿಕೆಯೊಂದೆ ನಮ್ಮ ಮತ್ತು ಅರಣ್ಯ ಇಲಾಖೆಯ ಕರ್ತವ್ಯವಲ್ಲ ಎಲ್ಲೆಲ್ಲಿ ಇಲಾಖೆ,ಸಂಘ ಸಂಸ್ಥೆಗಳು, ಸಾರ್ವಜನಿಕರು ಇಂತಹ ಗಿಡಗಳನ್ನು ನೆಟ್ಟು ಪರಿಸರದ ಪರವಾಗಿದ್ದೇವೆ ಎಂದು ಜಗತ್ತಿಗೆ ಸಾರುತ್ತಿದ್ದೇವೊ ಅಂತಹ ಸಂಕಟ ಮತ್ತು ಸಂಕಷ್ಟದಲ್ಲಿರುವ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಗಿಡಗಳನ್ನು ಉಳಿಸಿಕೊಳ್ಳಬೇಕಿದೆ.


    ಪ್ರದಾನ ಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ” ಏಕ್ ಪೇಡ್ ಮಾಕೆ ನಾಮ್” ಎಂಬ ಹೊಸ ಘೊಷವಾಕ್ಯದೊಂದಿಗೆ ಮತ್ತಷ್ಡು ಗಿಡಗಳನ್ನು ನೆಡುವ ಪ್ರಯತ್ನದಲಿದ್ದಾರೆ. ಇಂತಹ ಸಂದರ್ಭದಲ್ಲಿ ನೆಟ್ಟಿರುವ ಗಿಡಗಳು ಕೆಲವು ಕಾರಣಗಳಿಂದ ಸಾಯುತ್ತಿವೆ ಅಂತಹ ಸಮಸ್ಯೆಗಳ ನಿವಾರಣೆಗೆ ಮುಂದಾಗಬೇಕಿದೆ ಮತ್ತು ” ಟ್ರೀ ಗಾಡ್೯ ವಿನ್ಯಾಸವನ್ನು ಮತ್ತಷ್ಟು ಬದಲಿಸಿ ಗಿಡಗಳ ಬೆಳವಣಿಗೆಗೆ ಪೂರಕವಾಗುವಂತೆ ವಿನ್ಯಾಸಗೊಳಿಸಬೇಕಿದೆ‌ ಎಂಬುದು ಗಿಡ ಬೆಳೆಸುವವರ ಅಭಿಪ್ರಾಯವಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *