Breaking News

ಕೈಲಾದ ಸಹಾಯ ಮಾಡಿ ಮಾನವೀಯ ನೆರವು ನೀಡಿ


ಪ್ರತಿಧ್ವನಿ, ಯಲ್ಲಾಪುರ : ದಿನಾಂಕ ಮೇ, 17 ರಂದು ಅರಬೈಲ್ ಘಟ್ಟದಲ್ಲಿ ಬೈಕ್ ಅಪಘಾತದಲ್ಲಿ ಮಲವಳ್ಳಿ( ಮಾವಿನ ಮನೆ) ಗ್ರಾಮದ ನಿವಾಸಿ ಗಣನಾಥ ಗೋಪಾಲ ಗಾಂವ್ಕರ್. ಎಳಮನೆ ಎಂಬಾತ ತೀವ್ರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಹೊಸೂರು ಕ್ರಾಸ್ ಬಳಿ ಇರುವ ಬಾಲಾಜಿ ನರರೋಗ ಮತ್ತು ಅಪಘಾತ ಚಿಕಿತ್ಸಾ ಸಂಸ್ಥೆಯಲ್ಲಿ ದಾಖಲಿಸಲಾಗಿತ್ತು.


ಸದ್ಯ ಚಿಕಿತ್ಸೆಗೆ ಪೂರಕವಾಗಿ ಸ್ಪಂದಿಸುತ್ತಿದ್ದು ಇದುವರೆಗೆ 7 ಲಕ್ಷಕ್ಕು ಅಧಿಕ ಮೊತ್ತ ವೆಚ್ಚವಾಗಿದೆ. ಮುಂದಿನ ಚಿಕಿತ್ಸೆಗೆ ಹಣಕಾಸಿನ ಕೊರತೆಯಾಗಿದ್ದು ಈ ತನ ಕುಟುಂಬವು ಹಣ ಹೊಂದಿಸುವಲ್ಲಿ ಅಶಕ್ತರಾಗಿದ್ದಾರೆ. ಇದೀಗ ಸಮಾಜದ ಮುಂದೆ ಸಹಾಯಕ್ಕಾಗಿ ಮೊರೆ ಇಟ್ಟಿದ್ದು. ಸಹೃದಯ ದಾನಿಗಳು ನಾಗರಿಕರು ಮಾನವೀಯ ನೆರವಿನ ದೃಷ್ಟಿಯಿಂದ ತಮ್ಮ ಕೈಲಾದ ಹಣದ ಸಹಾಯ ಮಾಡಬೇಕೆಂದು ಕೊರಿಕೊಂಡಿದ್ದಾರೆ.

ಭಗವಂತ ದಯೆಯಿಂದ ಸಹೃದಯ ದಾನಿಗಳಿಂದ ಜೀವವೊಂದು ಉಳಿದರೆ ಮುಂದೆ ಸಮಾಜಕ್ಕೆ ಆತನಿಂದಲು ಕಿಂಚಿತ್ತು ಇತರರಿಗು ಸಹಾಯವಾಗಬಹುದು. ಇಂತಹ ಸಂದಿಗ್ದ ಸಂದರ್ಭದಲ್ಲಿ ಸಹಾಯ ಹಸ್ತ ಚಾಚಿದರೆ ನಿಮಗು ನಿಮ್ಮ ಕುಟುಂಬಕ್ಕು ಕಷ್ಟ ಕಾಲದಲ್ಲಿ ಭಗವಂತ ಹರಸುವನು. ಕೈಲಾದ ಧನ ಸಹಾಯ ಮಾಡಿ ಸಹಕರಿಸಿ ಎಂಬುದು ” ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ” ಮಾನವೀಯ ಮನವಿ


ಸಹಾಯ ಮಾಡಲಿಚ್ಚಿಸುವ ಮಹನೀಯರು. ಈ ಕೆಳಗಿನ ಖಾತೆಗೆ ಹಣ ಸಂದಾಯ ಮಾಡಬಹುದಾಗಿದೆ ಮತ್ತು ಒಂದು ಜೀವ ಉಳಿಸಿದ ಪುಣ್ಯವು ನಿಮಗೊಲಿಯಲಿದೆ.

ಹಣ ಸಂದಾಯ ಮಾಡಬೇಕಾದ ಖಾತೆ ವಿವರ
ಮಾವಿನಮನೆ ಸೇವಾ ಸಹಕಾರಿ ಸಂಘದ ಖಾತೆ (138)
Acno – 08732191029400
IFSC code – PUNB0181110.

ಪೆಟಿಎಂ g pay – 8762521679
ಸಂಪರ್ಕಿಸಲು – 8277442025

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *