ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ರಾಜ್ಯದಲ್ಲಿ ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿ ಆಯ್ಕೆಯಾದ ಅರಬೈಲ್ ಶಿವರಾಮ ಹೆಬ್ಬಾರ್ ಸೋಮವಾರ ಅಧಿವೇಶನದ ಮೊದಲ ದಿನ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್ ಪಕ್ಷ ನಿಚ್ಛಳ ಬಹುಮತ ಪಡೆದು ಸರ್ಕಾರ ರಚಿಸಿದ್ದು ಸೋಮವಾರ ಕರೆದ ಮೊದಲ ಅಧಿವೇಶನದಲ್ಲಿ ಹಂಗಾಮಿ ಸ್ಪೀಕರ್ ಆರ್.ವಿ ದೇಶಪಾಂಡೆಯವರ ಸಮ್ಮುಖದಲ್ಲಿ ಭಗವಂತನ ಹೆಸರಿನಲ್ಲಿ ಪ್ರಮಾಣ …
Read More »Yearly Archives: 2023
ಸಂಸ್ಕಾರವಂತ ಮತ್ತು ಗುಣಮಟ್ಟದ ಶಿಕ್ಷಣಕ್ಕಾಗಿ ಯಲ್ಲಾಪುರ ವೈಟಿಎಸ್ಎಸ್ ನಿಮ್ಮ ಆಯ್ಕೆಯಾಗಿರಲಿ
ಶಿಕ್ಷಣಕ್ಕೆ ವೈಟಿಎಸ್ಎಸ್ ಉತ್ತಮ ಆಯ್ಕೆ ಏಕೆ ??? >> ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ವಿದ್ಯಾ ಸಂಸ್ಥೆ >> ದೀರ್ಘಕಾಲದ ವಿದ್ಯಾದಾನಗೈದ ಸಾತ್ವಿಕ ಇತಿಹಾಸ. >> ಜಾತಿ,ಮತ,ಧರ್ಮ,ಅಂತಸ್ತು ಭೇದವಿರದ ಸರ್ವಜನಾಂಗದ ವಿದ್ಯಾಕಾಶಿ. >> ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಹೊರಗಡೆ ಸಿಗುವ ಉನ್ನತ ಸ್ಥಾಯಿಯ ಗೌರವ. >> ಪಠ್ಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಯಲ್ಲು ಸಂಸ್ಥೆ ಮುಂಚೂಣಿಯಲ್ಲಿ. >> ಸಂಸ್ಕಾರವಂತ ಶಿಕ್ಷಣ ಕಲಿಕೆ ಮಾತ್ರವಲ್ಲದೆ ಸಾಂಸ್ಕೃತಿಕ ಸೊಬಗು ಪಸರಿಸುವ ಶಾಲೆ. >> ಉತ್ತಮ …
Read More »ಯಲ್ಲಾಪುರ ಸಂತೆಯಲ್ಲಿ ಬಿಡಾಡಿ ದನಗಳದ್ದೆ ದರ್ಬಾರು – ಹೈರಾಣಾದ ವ್ಯಾಪಾರಿಗಳು ಗ್ರಾಹಕರು
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದಲ್ಲಿ ಪ್ರತಿ ರವಿವಾರದಂದು ವಾರದ ಸಂತೆ ನಡೆಯುತ್ತಿದ್ದು ಪ್ರತಿ ವಾರ ವ್ಯಾಪಾರಿಗಳಿಗೆ, ಕೊಳ್ಳುವ ಗ್ರಾಹಕರಿಗೆ , ಸಂಚರಿಸುವ ಸಾರ್ವಜನಿಕರಿಗೆ ಬೀಡಾಡಿ ದನಗಳ ಕಾಟ ಹೆಚ್ಚಾಗಿದ್ದು ಸಮಸ್ಯೆ ಬಗೆಹರಿಸಬೇಕಾದ ಪಟ್ಟಣ ಪಂಚಾಯತ ಕರವಸೂಲಿಗಷ್ಟೇ ಸೀಮಿತವಾಗಿರುವುದು ಗ್ರಾಹಕರ, ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಯಲ್ಲಾಪುರದಲ್ಲಿ ರವಿವಾರ ನಡೆಯುವ ಸಂತೆಗೆ ಜಿಲ್ಲೆಯ ವ್ಯಾಪಾರಿಗಳಲ್ಲದೇ ಅಕ್ಕಪಕ್ಕದ ಜಿಲ್ಲೆಗಳಿಂದ ರೈತರು, ವ್ಯಾಪಾರಿಗಳು, ಹಣ್ಣು-ತರಕಾರಿ, ದವಸ ಧಾನ್ಯಗಳನ್ನು ಮಾರಾಟಕ್ಕೆ ತಂದು …
Read More »ರಾಜ್ಯದ 24 ನೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಯಲ್ಲಾಪುರ ಕಾಂಗ್ರೆಸ್ ಪಾಳಯದಲ್ಲಿ ಹರ್ಷೋದ್ಗಾರ.
ಪ್ರತಿಧ್ವನಿ,ಯಲ್ಲಾಪುರ – ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪಟಾಕಿ ಸದ್ದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪರ ಜಯಘೋಷ ಮುಗಿಲು ಮುಟ್ಟಿತ್ತು. ನಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕರ್ ಮಾತನಾಡಿ ರಾಜ್ಯಕ್ಕಿಂದು ಹಬ್ಬದ ವಾತಾವರಣ ಬಡವರ,ಶೋಷಿತರ, ಅಲ್ಪಸಂಖ್ಯಾತರ, ದಲಿತ, ಹಿಂದುಳಿದ,ಮಧ್ಯಮ ವರ್ಗದ ಜನ ನಾಯಕರಾಗಿ ಗುರುತಿಸುವ ಸಿದ್ದರಾಮಯ್ಯ ಅವರು ರಾಜ್ಯದ ಚುಕ್ಕಾಣಿ ಹಿಡಿದದ್ದು ಕರ್ನಾಟಕದ ಭಾಗ್ಯವಾಗಿದೆ. ಯುವಕರ ಕಣ್ಮಣಿ ಪಕ್ಷವನ್ನು ಸಂಕಷ್ಟದಲ್ಲು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ ಡಿ.ಕೆ ಶಿವಕುಮಾರ್ ಅವರು …
Read More »ಉತ್ತರ ಕನ್ನಡ ಜಿಲ್ಲೆಯ ವಿದ್ಯಾಕಾಶಿ ಯಲ್ಲಾಪುರದ ವೈಟಿಎಸ್ಎಸ್ ಆಂಗ್ಲ ಮಾದ್ಯಮ ಶಾಲೆಯ ಸಾಧನೆ – ಗುಣಾತ್ಮಕ ಫಲಿತಾಂಶದಲ್ಲಿ ತಾಲೂಕಿಗೆ ಮೊದಲ ಸ್ಥಾನ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ವೈ.ಟಿ.ಎಸ್.ಎಸ್ ಸಂಸ್ಥೆಯ ಆಂಗ್ಲಮಾಧ್ಯಮ ಪ್ರೌಢಶಾಲೆಯು 92.55 ಗುಣಾತ್ಮಕ ಫಲಿತಾಂಶ ದಾಖಲಿಸಿ ತಾಲೂಕಿನ ಒಟ್ಟೂ 25 ಪ್ರೌಡಶಾಲೆಗಳಲ್ಲಿ ಮೊದಲ ಸ್ಥಾನದಲ್ಲಿದೆ.ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲೂ ಸಹ 100% ಫಲಿತಾಂಶ ದಾಖಲಿಸಿದ್ದು ಗುಣಾತ್ಮಕ ಫಲಿತಾಂಶದಲ್ಲೂ ತಾಲೂಕಿಗೆ ಮೊದಲ ಸ್ಥಾನ ಪಡೆದಿರುವುದರಿಂದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
Read More »ಪಾದಚಾರಿ ಸಂಚಾರಕ್ಕೆ ಫುಟ್ ಪಾಥ್ ಮುಕ್ತವಾಗಿರಲಿ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದಲ್ಲಿ ಎಲ್ಲೆಂದರಲ್ಲಿ ಪಾದಚಾರಿ ಮಾರ್ಗವನ್ನು ಗೂಡಂಗಡಿಕಾರರು ಅತಿಕ್ರಮಣ ಮಾಡಿದ್ದು ಸಂಚರಿಸಲು ರಸ್ತೆಯನ್ನೇ ಅವಲಂಬಿಸಬೇಕಾದ ಸ್ಥಿತಿ ಒದಗಿ ಬಂದಿದೆ. ವಯೋವೃದ್ಧರು, ಮಹಿಳೆಯರು, ಮಕ್ಕಳು ವಿಶೆಷವಾಗಿ ಅಂಗವಿಕಲರು ಪಟ್ಟಣದಲ್ಲಿ ಸಂಚರಿಸಲು ಭಯ ಪಡುವ ವಾತಾವರಣವಿದೆ. ಪಟ್ಟಣಕ್ಕೆಂದೇ ಇರುವ ಮೊಳ ಉದ್ದದ ರಸ್ತೆಯಲ್ಲಿ ಗೂಡಂಗಳಿಗಳ ಆರ್ಭಟವೇ ಹೆಚ್ಚಾಗಿದ್ದು ಸಂಚರಿಸಲು ಸ್ಥಳವೇ ಇಲ್ಲದಂತಾಗಿದೆ. ಗಾಂಧಿ ಚೌಕದಿಂದ ಬಸ್ ನಿಲ್ದಾಣದವರೆಗೆ , ಬೆಲ್ ರಸ್ತೆ, ಬಸ್ …
Read More »ಕೊಟ್ಟ ಭರವಸೆ ಈಡೇರಿಸಿ-ರಾಮು ನಾಯ್ಕ್.
ಪ್ರತಿಧ್ವನಿ,ಯಲ್ಲಾಪುರ : ಕಾರಣಗಳೇನೇ ಇರಲಿ ಇಂದಿನಿಂದ ಅಧಿಕಾರಕ್ಕೆ ಬರಲಿರುವ ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಹಾಗೂ ಜನಪರ ಆಡಳಿತ ನೀಡಲಿ ಎಂದು ನಾಗರೀಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಪತ್ರಿಕಾ ಹೇಳಿಕೆ ನೀಡಿದ್ದಾರೆ.ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಕಾರ್ಡುಗಳು ಹಾಗೂ ಅನೇಕ ಉಚಿತ ಕೊಡುಗೆಗಳು ಮತದಾರರ ಮೇಲೆ ಸಾಕಷ್ಟು ಪರಿಣಾಮ ಬೀರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. 135 ಸ್ಥಾನಗಳಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಿದ ಮತದಾರ ಪ್ರಭು ತನ್ನ ಕೆಲಸ ಮಾಡಿದ್ದಾನೆ. ಇನ್ನೇನಿದ್ದರೂ ನೀಡಿದ …
Read More »ಭರತನಳ್ಳಿ ” ಹಝರತ್ ಸೈಯ್ಯದ್ ಮರ್ದಾನ್ ಷಾ ಖಾದ್ರಿ ವಲಿಅಲ್ಲಾ ದರ್ಗಾ ” ದಲ್ಲಿ ನಡೆದ ಭಾವೈಕ್ಯತಾ ಉರುಸ್…
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಭರತನಹಳ್ಳಿಯ ಹಝರತ್ ಸೈಯ್ಯದ್ ಮರ್ದಾನ್ ಷಾ ಖಾದ್ರಿ ವಲಿಅಲ್ಲಾ ದರ್ಗಾದಲ್ಲಿ ಪ್ರತಿವರ್ಷದಂತೆ 2 ದಿನಗಳ ಭಾವೈಕ್ಯತಾ ಉರುಸ್ (ಜಾತ್ರೆ) ನಡೆಯಿತು.22 ನೆಯ ವರ್ಷದ ಈ ಕಾರ್ಯಕ್ರಮ ಮೇ.16 ರಂದು ರಾತ್ರಿ ಗೌಸಿಯಾ ಧ್ವಜಾರೋಹಣದೊಂದಿಗೆ ಆರಂಭವಾಯಿತು. ಮೇ.17 ರಂದು ರಾತ್ರಿ ಬೆಂಗಳೂರಿನ ಉಲ್ಮಾ ಎ ಕರಾಮ್ ಮೌಲಾನಾ ಶಾರಿಬ್ ಝಿಯಾ ಮಿಸ್ವಾಹಿ ಮತ್ತು ಮಂಗಳೂರಿನ …
Read More »ಚುನಾವಣೆ ನಂತರ ಶಾಸಕ ಹೆಬ್ಬಾರ್ ನಡೆಸಿದ ಇಲಾಖೆಗಳ ಪ್ರಗತಿ ಪರಿಶೀಲನ ಸಭೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಅಧಿಕಾರಿಗಳು ಚುನಾವಣ ನೀತಿ ಸಂಹಿತೆ ಮುಕ್ತಾಯವಾಗಿದೆ ಎಂಬ ವಿಷಯವನ್ನು ತಲೆಗೆ ತುಂಬಿಕೊAಡು ಸಾರ್ವಜನಿಕ ಸೇವಾ ಕಾರ್ಯಕ್ಕೆ ಮುಂದಾಗಬೇಕಿದೆ. ಪ್ರಸ್ತುತ ವರ್ಷದಲ್ಲಿ ಬಿಸಿಲಿನ ತಾಪಕ್ಕೆ ನೀರಿನ ಸಮಸ್ಯೆ ಎದುರಾಗುತ್ತಿದ್ದು ಮುನ್ನೆಚ್ಚರಿಕೆ ವಹಿಸಬೇಕಿದೆ. ದೈವಾನುಗ್ರಹದಿಂದ ಈ ಬಾರಿ ಯಲ್ಲಾಪುರ ತಾಲೂಕಿನಲ್ಲಿ ಇಲ್ಲಿಯವರೆಗೆ ದೊಡ್ಡ ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಎಲ್ಲಾ ಇಲಾಖೆಗಳಿಗು ನನ್ನದೊಂದು ಪ್ರಮುಖ ಸೂಚನೆ ಯಾವುದೆ ಕಾರಣಕ್ಕು ಶಾಲಾ …
Read More »ಸಂಸ್ಕಾರ ಮಾನವನ ಔನ್ನತ್ಯದ ಅಡಿಪಾಯ….
ಸಂಸ್ಕಾರದಲ್ಲಿ ಎರಡು ರೀತಿಯ ಸಂಸ್ಕಾರವನ್ನು ಕಾಣಬಹುದು . ಒಂದು ಹಿಂದೂ ಧರ್ಮದಲ್ಲಿ ಬರುವ ನಾಮಕರಣ , ಅನ್ನಪ್ರಾಶನ , ಉಪನಯನ , ಕನ್ಯಾ ಸಂಸ್ಕಾರ, ವಿವಾಹ , ಇತ್ಯಾದಿ. ಇನ್ನೊಂದುಸತ್ಯ , ಧರ್ಮ, ನೀತಿ , ಕರುಣೆ, ಶಾಂತಿ,ನಂಬಿಕೆ , ಸ್ನೇಹ, ತ್ಯಾಗ, ಆಚಾರ ಇವು ಜಾತಿ , ಧರ್ಮ, ಅಂತಸ್ತುಗಳ ಮೀರಿದ ಭಾರತೀಯ ಪರಂಪರೆಯ ಶ್ರೇಷ್ಠ ಸಂಸ್ಕೃತಿಯೆನ್ನಬಹುದು . ಸಂಸ್ಕಾರವೆನ್ನುವುದು ಮಗುವಿಗೆ ತಾಯಿಯ ಗರ್ಭದಲ್ಲಿಂದಲೇ ಪ್ರಾರಂಭವಾಗುವ ಕ್ರಿಯೆ. ಮಹಾಭಾರತದಲ್ಲಿ …
Read More »
Prathidvani Yellapura