
ಎಂಟನೆ ತರಗತಿ ಓದುತ್ತಿರುವ ಶಿರಸಿ ಪೋರ ” ಶ್ರೀಧರ ಸಂಜೀವ ಕೆರೆಕರ “ ಕೈಚಳಕದಲ್ಲಿ ಮೂಡಿದ ಪರಿಸರ ಸ್ನೇಹಿ ಗಣಪ ಯಲ್ಲಾಪುರದ ಜಿಲ್ಲಾ ಪಂಚಾಯತ ಇಂಜಿನಿಯರಿಂಗ್ ಉಪವಿಭಾಗದಲ್ಲಿ ಪ್ರತಿಷ್ಟಾಪನೆಗೊಂಡಿದೆ

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್, ಪಂಚಾಯತ್ ರಾಜ್ ಇಂಜಿನೀಯರಿಂಗ್ ಉಪ ವಿಭಾಗ ಯಲ್ಲಾಪುರ ಕಛೇರಿಯಲ್ಲಿ ಗಣೇಶ ಚತುರ್ಥಿ ಉತ್ಸವ ವಿಜ್ರಂಭಣೆಯಿಂದ ನೆರವೆರಿಸಲಾಗುತ್ತಿದೆ. ವಿಶೇಷವೆಂದರೆ ಕಳೆದ ವರ್ಷದಂತೆ ಈ ವರ್ಷವು ಕೂಡ ಚಂದನ ಆಂಗ್ಲ ಮಾಧ್ಯಮ ಪ್ರೌಢಶಾಲೆ, ನರೇಬೈಲ್, ಶಿರಸಿ. ಶಾಲೆಯ 8ನೇ ತರಗತಿಯ ವಿಧ್ಯಾರ್ಥಿ ಶ್ರೀಧರ ಸಂಜೀವ ಕೆರೆಕರ- ಕೆ.ಎಚ್.ಬಿ. ಕಾಲೋನಿ, ಶಿರಸಿ ಇತನು ಸುಂದರವಾದ ಮುತ್ತು ಹವಳಗಳಿಂದ ಅಲಂಕೃತಗೊಂಡ ಪರಿಸರ ಸ್ನೇಹಿ ಗಣೇಶಮೂರ್ತಿ ತಯಾರಿಸಿದ್ದಾನೆ.
ಇತನ ಕಲೆಗೆ ಪ್ರೋತ್ಸಾಹಿಸಲು ಕಛೇರಿಯ ಅಧಿಕಾರಿ ಅಶೋಕ ಬಿ. ಬಂಟ್-ಸ.ಕಾ.ಇಂ ಹಾಗೂ ಪಂ.ರಾ.ಇಂ./ಗ್ರಾ.ಕು.ನೀ&ನೈ. ಉಪವಿಭಾಗ ಸಿಬ್ಬಂದಿಗಳು ಕಛೇರಿಯಲ್ಲಿ ಈ ಪೋರ ತಯಾರಿಸಿದ ಗಣೇಶನ ಮೂರ್ತಿಯನ್ನು ಪ್ರತಿಸ್ಥಾಪಿಸಲು ನಿರ್ಣಯಿಸಿ, ಶ್ರೀ ಗಣೇಶಮೂರ್ತಿಯನ್ನು ಪ್ರತಿಸ್ಥಾಪಿಸಿ ಸಾರ್ವಜನಿಕ ಗಣೇಶ ಚತುರ್ಥೀ ಉತ್ಸವವನ್ನು ಅಧಿಕಾರಿ/ಸಿಬ್ಬಂದಿಗಳು ಹಾಗೂ ಗುತ್ತಿಗೆದಾರರು ಸೇರಿ ಆಚರಿಸಲಾಗುತ್ತಿದೆ.
ನಾಲ್ಕನೇ ದಿನ ಶುಕ್ರವಾರ ಮಹಾಪೂಜೆ, ಪ್ರಸಾದ ಭೋಜನೆ ವಿತರಣೆ ವ್ಯವಸ್ಥೆ ಮಾಡಲಾಗಿದೆ. ಐದನೇ ದಿನ ಶನಿವಾರದಂದು ಶ್ರೀ ಮಂಗಳಮೂರ್ತಿಯನ್ನು ಮೆರವಣಿಗೆಯೊಂದಿಗೆ ವಿಸರ್ಜನೆ ಮಾಡಲಾಗುವುದು.
ಸಕಲ ಇಷ್ಟಾರ್ಥಗಳನ್ನು ಪರಿಹರಿಸೊ ವಿಘ್ನ ವಿನಾಶಕನ ಕೃಪೆಯಿಂದ ಯಲ್ಲಾಪುರ ತಾಲೂಕಿನಾದ್ಯಂತ ನೂರಾರು ಕಡೆಗಳಲ್ಲಿ ಸಾರ್ವಜನಿಕ ಪ್ರತಿಷ್ಟಾಪಿತ ಗಣಪತಿ ಉತ್ಸವ ವಿಜ್ರಂಭಣೆಯಿಂದ ನಡೆದು ಬರುತ್ತಿದ್ದು ತಾಯಿ ಗ್ರಾಮದೇವಿ ಅನುಗ್ರಹ ಈ ಸೀಮೆಯ ಮೇಲೆ ಸದಾ ಇರಲಿದೆ.


















Prathidvani Yellapura