Breaking News

ರಾತ್ರಿಪೂರ್ಣ ನಿದ್ದೆಗೆಟ್ಟು, ಜೀವದ ಹಂಗುತೊರೆದು ಕತ್ತಲೆ ಕಾನನದಲ್ಲಿ ಶ್ರಮಿಸಿ ಯಲ್ಲಾಪುರಕ್ಕೆ ಬೆಳಕು ನೀಡಿದ ಹೆಸ್ಕಾಂ ಬಳಗ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ಗುರುವಾರ ರಾತ್ರಿ ಸುರಿದ ಮಳೆಗೆ ಕಿರವತ್ತಿ ಗ್ರಿಡ್ ನಿಂದ ಹೊರಟ 33kv ಸಾಮರ್ಥ್ಯದ ಮೈನ್ ಲೈನ್ ಮೇಲೆ ದೊಡ್ಡ ಗಾತ್ರದ ಮರ ಬಿದ್ದ ಪರಿಣಾಮ ಯಲ್ಲಾಪುರ ಸಂಪೂರ್ಣ ರಾತ್ರಿ ಕತ್ತಲಲ್ಲಿ ಕಾಲ ಕಳೆಯಬೇಕಾಯಿತು.


ಸುಮಾರು 9-55 ಕ್ಕೆ ಕರೆಂಟ್ ಹೋದ ಪರಿಣಾಮ ರಾತ್ರಿ ಕರೆಂಟ್ ಕೊಡಬಹುದು ಎಂದು ಕಾಯುತ್ತ ಕುಳಿತ ಯಲ್ಲಾಪುರ ಮಂದಿಗೆ ರಾತ್ರಿ ಸಂಪೂರ್ಣ ಕರೆಂಟ್ ಬರುವುದಿಲ್ಲ ಎಂದು ತಿಳಿಯುವಷ್ಟರಲ್ಲಿ ಮಲಗುವ ಸಮಯವಾಗಿತ್ತು.

ಅವರಿಗೇನು ಗೊತ್ತು ಮೈನ್ ಲೈನ್ ಫಾಲ್ಟಾಗಿದೆ ಕರೆಂಟ್ ಬರುವುದಿಲ್ಲ ಎಂದು.
ಆದರೆ ಅಂತಹ ದಟ್ಟಡವಿ ಮದ್ಯದಲ್ಲಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ರಾತ್ರೋರಾತ್ರಿ ಕಾರ್ಯಾಚರಣೆಗಿಳಿದ ಯಲ್ಲಾಪುರ ಹೆಸ್ಕಾಂ ಸಿಬ್ಬಂದಿಗಳ ತಂಡ ಶುಕ್ರವಾರ ಮುಂಜಾನೆ 6 ಗಂಟೆಗೆ ಕರೆಂಟ್ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಅದಕ್ಕೊಂದು ಸಲಾಂ ಹೇಳಲೇಬೇಕು.


ಸಾರ್ವಜನಿಕರ ಮೂಲಭೂತ ಸೌಕರ್ಯಗಳಲ್ಲಿ ವಿದ್ಯುತ್ ಸಹ ಪ್ರಮುಖ ಸ್ಥಾನ ಅಲಂಕರಿಸಿದ್ದು ವ್ಯತ್ಯಯವಾದರೆ ಜನರಿಗೆ ಕೆಲಸವೆ ಆಗುವುದಿಲ್ಲ ಎಂಬ ಪರಿಸ್ಥಿತಿಗೆ ಬಂದು ನಿಂತಂತಿದೆ. ಇಂತಹ ಒತ್ತಡದ ನಡುವೆ ಜನರ ಆಕ್ರೋಶದ ಮದ್ಯೆ ತಮ್ಮ ಕುಟುಂಬವನ್ನು ಲೆಕಿಸದೆ ಜೀವದ ಹಂಗುತೊರೆದು ನಿದ್ರೆ ಬಿಟ್ಟು ವಿದ್ಯುತ್ ನೀಡುವ ಏಕೈಕ ಉದ್ದೇಶದಿಂದ ಸಂಪೂರ್ಣ ರಾತ್ರಿ ಶ್ರಮ ವಹಿಸಿ ಕರೆಂಟ್ ನೀಡಿದ್ದು ಹೆಸ್ಕಾಂ ಮೇಲಿನ ಗೌರವ ಹೆಚ್ಚಿದಂತಾಗಿದೆ ಎನ್ನುತ್ತಾರೆ ಯಲ್ಲಾಪುರದ ಪ್ರಜ್ಞಾವಂತರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *