

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕಂಪ್ಲಿ ಗ್ರಾಮ ಪಂಚಾಯತ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆದು ರೇಣುಕಾ ಬಸವಣ್ಣಿ ಭೋವಿವಡ್ಡರ ಅಧ್ಯಕ್ಷರಾಗಿ , ಸದಾಶಿವ ನರಸಿಂಹ ಭಟ್ಟ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕಳೆದ ಆಗಸ್ಟ್ ತಿಂಗಳಿನಲ್ಲಿ ಕಂಪ್ಲಿ ಗ್ರಾ.ಪಂಚಾಯತಕ್ಕೆ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣಾ ಆಯ್ಕೆ ಪ್ರಕ್ರಿಯೆಯಲ್ಲಿ ಸಮಯಕ್ಕೆ ಸರಿಯಾಗಿ ನಾಮಪತ್ರ ಸಲ್ಲಿಕೆಯಾಗದ ಕಾರಣ ಚುನಾವಣೆ ಮುಂದೂಡಿ ಆಯೋಗದ ನಿರ್ದೇಶನಕ್ಕೆ ಕಾಯಲಾಗಿತ್ತು. ಸದ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಡಿ.19ರ ಮಂಗಳವಾರದಂದು ಚುನಾವಣೆ ನಡೆದಿದೆ. 8 ಸದಸ್ಯ ಬಲ ಹೊಂದಿರುವ ಕಂಪ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಸ್ಥಾನಕ್ಕೆ ಮಂಗಲಾ ರಾಮಾ ನಾಯ್ಕ ಹಾಗೂ ರೇಣುಕಾ ಬಸವಣ್ಣಿ ಭೋವಿವಡ್ಡರ ನಾಮಪತ್ರ ಸಲ್ಲಿಸಿದ್ದರೆ ಉಪಾಧ್ಯಕ್ಷ ಸ್ಥಾನಕ್ಕೆ ಸದಾಶಿವ ನರಸಿಂಹಭಟ್ಟ ಹಾಗೂ ಶಬನಮ್ ಮೌಲಾಲಿ ಸಾಬ್ ನಾಮಪತ್ರ ಸಲ್ಲಿಸಿದ್ದರು. ಮಂಗಲಾ ರಾಮ ನಾಯ್ಕ ಅವರಿಗೆ 3 ಮತಗಳು ಹಾಗೂ ರೇಣುಕಾ ಬಸವಣ್ಣಿ ಭೋವಿವಡ್ಡರ 5 ಮತಗಳನ್ನು ಪಡೆದು ಜಯಶಾಲಿಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಶಬನಮ್ ಮೌಲಾಲಿ ಸಾಬ 3 ಮತಗಳನ್ನು ಪಡೆದರೆ ಸದಾಶಿವ ನರಸಿಂಹ ಭಟ್ಟ 5 ಮತಗಳನ್ನು ಪಡೆದು ಜಯಶಾಲಿಯಾದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ದಾಕ್ಷಾಯಿಣಿ ಐ ನಾಯ್ಕ ಅವರು ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಪಂಚಾಯತ ಅಭಿವೃದ್ಧಿ ಅಧಿಕಾರಿ ರುದ್ರಯ್ಯ ಹಿರೇಮಠ ಉಪಸ್ಥಿತರಿದ್ದರು.



