
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಪೊಲೀಸ್ ವೃತ್ತಿ ಎಂದರೆ ಅದೊಂದು ಒತ್ತಡದ ವೃತ್ತಿ ಎಂಬುದು ಎಲ್ಲರಿಗೂ ತಿಳಿದ ಸಾಮಾನ್ಯ ವಿಷಯ. ನಿತ್ಯವೂ ಒಂದಲ್ಲ ಒಂದು ಜಂಜಾಟದಲ್ಲಿ ಸಮಸ್ಯೆಗಳ ಮದ್ಯದಲ್ಲಿ , ಅಪರಾಧಗಳ ವಿಚಾರದಲ್ಲಿ ಮುಳುಗಿ ಹೋಗಿ ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಒತ್ತಡದಲ್ಲಿರುತ್ತಾರೆ. ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯಲ್ಲಾಪುರ ಪೊಲೀಸರು ಪ್ರತಿನಿತ್ಯ ಮುಂಜಾನೆ ಕ್ರೀಡಾ ಚಟುವಟಿಕೆಗೆ ಮೊರೆ ಹೋಗಿದ್ದು ತಮ್ಮ ವಸತಿ ಗೃಹ ಸಂಕೀರ್ಣದ ಆವರಣದಲ್ಲಿ ವಾಲಿಬಾಲ್ ಕೋರ್ಟ್ ನಿರ್ಮಿಸಿಕೊಂಡು ಎರಡು ತಂಡಗಳಾಗಿ ಆಟವಾಡುತ್ತಾರೆ.

ಇಲಾಖೆಯ ಎಲ್ಲಾ ಸ್ತರದ ಅಧಿಕಾರಿಗಳು, ಸಿಬ್ಬಂದಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದಲ್ಲದೇ ಒಬ್ಬರಿಗೊಬ್ಬರು ಸ್ಪೂರ್ತಿದಾಯಕವಾಗಿ ಹುರುಪು ತುಂಬುತ್ತಾ ಆಟವಾಡುತ್ತಾರೆ.

ಪಿಐ ರವಿ ಗುಡ್ಡಿ ಉತ್ತಮ ವಾಲಿಬಾಲ್ ಸ್ಮಾಶರ್ ಆಗಿ ಅಂಕಣದಲ್ಲಿ ಕಂಡರೆ ಉಳಿದ ಪೊಲೀಸರು ಸಹ ಅವರಿಗಿಂತ ಕಡಿಮೆ ಇಲ್ಲವೆಂಬಂತೆ ಸರ್ವಿಸ್ ಮಾಡುವುದು, ಗ್ಯಾಪ್ ಹಾಕುವುದು, ಪಾಸ್ ನೀಡುವುದು, ಗಾರ್ಡ್ ಮಾಡುವುದು ತನ್ನ ಆಟದಿಂದ ತನ್ನ ತಂಡ ಗೆಲ್ಲಿಸಬೇಕೆಂಬ ಹುಮ್ಮಸ್ಸಿನಲ್ಲಿ ವಾಲಿಬಾಲ್ ಆಟದಲ್ಲಿ ಮುಳುಗಿರುತ್ತಾರೆ.

ಇದರಿಂದ ದೈಹಿಕ ಹಾಗೂ ಮಾನಸಿಕ ಸ್ಪೂರ್ತಿಯೊಂದಿಗೆ ನಿತ್ಯದ ಕರ್ತವ್ಯದಲ್ಲಿ ಆಲಸ್ಯ ಬರದೇ ಲವಲವಿಕೆಯಿಂದಿರಲು ಸಾಧ್ಯವಾಗುತ್ತದೆ ಎನ್ನುತ್ತಾರೆ ನಮ್ಮ ಯಲ್ಲಾಪುರ ಆರಕ್ಷಕರು.
Prathidvani Yellapura