Breaking News

ಲೋಕಸಭಾ ವ್ಯರ್ಥ ಕಲಾಪ ಯಲ್ಲಾಪುರ ತಾಲೂಕಿನ ಹಿರಿಯ ಕವಿ ಡಿ.ಜಿ ದುಂಡಿ ತೀವ್ರ ಆಕ್ಷೇಪ

ಚಿತ್ರ ಕೃಪೆ..ಹಿಂದುಸ್ತಾನ್ ಟೈಮ್ಸ್ ಲೋಕಸಭೆಯಲ್ಲಿ ಸುಗಮ ಕಲಾಪ ನಡೆಯದೆ ನಿತ್ಯವು ಪೋಲಾಗುತ್ತಿರುವ ಭಾರತೀಯ ತೆರಿಗೆದಾರರ ಹಣ

ಪ್ರತಿಧ್ವನಿ ವಿಶೇಷ ಅತಿಥಿ ಬರಹ – ಡಿ.ಜಿ.ದುಂಡಿ

ಪ್ರತಿಧ್ವನಿ,ಯಲ್ಲಾಪುರ : ಇಡೀ ದೇಶಕ್ಕೆ ದೇಶವೇ ನಮ್ಮನ್ನು ಆಳಲೆಂದು ನಾವೇ ಆರಿಸಿ ಕಳಿಸಿದ ಸದಸ್ಯರು ನಮಗಾಗಿ, ದೇಶಕ್ಕಾಗಿ ಚರ್ಚಿಸಿ ದೂರಾಲೋಚನೆಯ, ಪ್ರಗತಿಪರ ಯೋಜನೆಗಳನ್ನು ರೂಪಿಸುತ್ತಾರೆ. ದೇಶದ ಹಲವು ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಇವರೆಲ್ಲ ಅಸಾಧಾರಣ ಬುದ್ದಿವಂತ ಜವಾಬ್ದಾರಿಯುತ ಜನ. ಎಂದು ಕಿವಿ ಕಣ್ಣು ಚುರುಕಾಗಿಸಿಕೊಂಡು ಕಾಯುತ್ತಾ ಕುಳಿತರೆ…. ಕಳೆದ ಆರು ದಿನಗಳಿಂದಲೂ …ಕಲಾಪ ನಡೆಸಲು ಅಸಾಧ್ಯವಾಗುವಂತೆ ಸಭಾಧ್ಯಕ್ಶರು ಪದೇ ಪದೇ ಕಲಾಪ ಮುಂದೆ ಹಾಕುವಂತೆ ಮಾಡುತ್ತಿದ್ದಾರೆ. ಇದನ್ನು ದೇಶದ ಪ್ರಾಮಾಣಿಕ ತೆರಿಗೆದಾರನಾಗಿ ಖಂಡಿಸುತ್ತೇನೆ.

ಡಿ.ಜಿ.ದುಂಡಿ ಹಿರಿಯ ಕವಿಗಳು ಚಿಂತಕರು

ಈಗಾಗಲೇ ಕಲಾಪದ ಅರ್ಧ ಭಾಗ ವ್ಯರ್ಥವಾಗಿ ಅಮೂಲ್ಯವಾದ ಸಮಯ ಗತಿಸಿಹೋಗಿದೆ. ದೇಶದ ಯಾವುದೇ ಸಮಸ್ಯೆಗಳ ಬಗ್ಗೆ ಪ್ರಗತಿಯ ಬಗ್ಗೆ ಒಂದು ಕ್ಷಣದ ಚರ್ಚೆ ಸಹಾ ನಡೆದಿಲ್ಲ.ಆಯ್ಕೆ ಆಗದವರಲ್ಲೂ ತಿಳುವಳಿಕೆ, ಜ್ನಾನ, ದೇಶದ ಬಗ್ಗೆ ಕಾಳಜಿ ಇರುವವರಿದ್ದಾರೆ.ದೇಶ ಪ್ರೇಮಿಗಳಿದ್ದಾರೆ. ಆದರೆ ಅಧಿಕಾರ ಇಲ್ಲ ಅಷ್ಟೆ. ನೌಕರರು ಮುಷ್ಕರ ಹೂಡಿದರೆ ಎಸ್ಮಾ ಜಾರಿಮಾಡಬಹುದು.ಆಗಲೂ ಬಗ್ಗದಿದ್ದರೆ ನೌಕರಿ ಯಿಂದ ತೆಗೆದುಹಾಕಬಹುದು. ಆದರೆ ಇವರಿಗೇನುಮಾಡುವುದು?

ಲೋಕಸಭಾ ಅಧಿವೇಶನ ನಡೆದಾಗ ಒಂದು  ನಿಮಿಷಕ್ಕೆ 2. 50 ಲಕ್ಷ ರೂಪಾಯಿ ಖರ್ಚು ಬರುತ್ತದೆ ಅನ್ನುವುದನ್ನು ಓದಿ ತಿಳಿದಿದ್ದೆ. ಈಗ  3 ಲಕ್ಷ ರೂಪಾಯಿ ಒಂದು ನಿಮಿಷಕ್ಕೆ ಖರ್ಚಾಗುತ್ತದೆ. ಒಂದು ತಾಸಿಗೆ 1.80 ( ಅಂದರೆ 1ಕೋಟಿ 80 ಲಕ್ಷ) ದಿನಕ್ಕೆ 8 ತಾಸು ನಡೆದರೆ 14 ಕೋಟಿ   40 ಲಕ್ಷ ರೂ ಒಂದು ದಿನಕ್ಕೆ ನಾವು ಸಲ್ಲಿಸಿದ  ಟ್ಯಾಕ್ಸ ಹಣದಿಂದ 

ಇದನ್ನು ನಾವು ನೀಡಿರುವುದು ದೇಶದ ಪ್ರಗತಿಗೆ. ಆದರೆ ಇದೇನಾಗುತ್ತಿದೆ. ಇನ್ನಾದರೂ ಕಲಾಪ ಸುಗಮವಾಗಿ ನಡೆಯುವಂತೆ ಗೌರವಾನ್ವಿತ ಲೋಕಸಭಾ ಸದಸ್ಯರು ಪಕ್ಷ ಬೇಧ ಮರೆತು ಸಹಕರಿಸಿ ದೇಶದ ಪ್ರಗತಿಬಗ್ಗೆ ಚರ್ಚಿಸಿ ಇರುವ ಸಮಸ್ಯೆಗಳನ್ನು ಬಗೆಹರಿಸಲು ಸಹಕರಿಸಬೇಕಾಗಿ ಕಳಕಳಿಯಿಂದ ವಿನಂತಿಸುತ್ತಿದ್ದೇನೆ.

ಜಾಹಿರಾತು ನೀಡಿ ಯಲ್ಲಾಪುರ ನೆಲದ ಪ್ರತಿಧ್ವನಿ ಪ್ರೋತ್ಸಾಹಿಸಿ ದೂರವಾಣಿ ಸಂಖ್ಯೆ -9113096085

ಅಭಿವೃದ್ಧಿ ನಡೆ ಇದು ಹೆಬ್ಬಾರ್ ಭರವಸೆಯ ನಡೆ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *