





ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಸುಮಾರು 12 ರಿಂದ 13 ಗ್ರಾಂ ತೂಗುವ ಚಿನ್ನದ ಮಾಂಗಲ್ಯ ಸರ ಕಳೆದುಕೊಂಡಿದ್ದ ದಂಪತಿಗಳು ವಾಟ್ಸಪ್ ಗ್ರೂಪ್ನಲ್ಲಿದ್ದ ಸಂದೇಶದ ಮೂಲಕ ಮರಳಿ ಪಡೆದ ಘಟನೆ ಯಲ್ಲಾಪು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಕೃಷ್ಣಮೂರ್ತಿ ಗಾಂವ್ಕರ್ ಶೇವ್ಕಾರ ದಂಪತಿಗಳು ಏ.29ರಂದು ಚಿನ್ನಾಪುರ- ಮಲವಳ್ಳಿ ರಸ್ತೆಯಲ್ಲಿ ಬೈಕ್ನಲ್ಲಿ ಹೋಗುವಾಗ ಮಾರ್ಗಮಧ್ಯೆ ಸುಮಾರು ಅಂದಾಜು 85 ರಿಂದ 90 ಸಾವಿರ ಮೌಲ್ಯದ 12 ರಿಂದ 13 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಳೆದುಕೊಂಡಿದ್ದರು. ಸರ ಎಲ್ಲಿ ಬಿದ್ದು ಹೋಗಿದೆ ಎಂದೇ ಗೊತ್ತಿರದ ದಂಪತಿಗಳಿಗೆ ನೆರವಾದದ್ದು ವಾಟ್ಸಪ್ ಗ್ರೂಪ್ಗಳಲ್ಲಿ ಹರಿದಾಡಿದ ಒಂದು ಮೆಸೇಜ್…

ಕಳಚೆ ಮೂಲದ ಹೊಸಕುಂಬ್ರಿಯ (ಈಗ ತೆಲಂಗಾರದಲ್ಲಿ ನೆಲೆಸಿರುವ)ಆರ್.ವಿ ಭಟ್ ದಂಪತಿಗಳು ಅದೇ ದಾರಿಯಲ್ಲಿ ಹೋಗುವಾಗ ತೆಲಂಗಾರ ಬಳಿಯ ಬೆಳ್ಳಿಮನೆ ಘಟ್ಟದ ಹತ್ತಿರ ಸರ ದೊರೆತಿದ್ದು, ಅವರು ಸರ ದೊರಕಿರುವ ಮಾಹಿತಿಯನ್ನು ಕೆಲವು ವಾಟ್ಸಪ್ ಗ್ರೂಪ್ ಗಳಲ್ಲಿ ಹಂಚಿಕೊಂಡಿದ್ದರು. ಸಂಬಂಧಿಕರಿಂದ ಈ ಮೆಸೇಜಿನ ಮಾಹಿತಿ ಪಡೆದು ಅವರನ್ನು ಸಂಪರ್ಕಿಸಿ ಮಾಂಗಲ್ಯ ಸರ ನಮ್ಮದೇ ಎಂದು ಖಾತ್ರಿ ಪಡಿಸಿ ಮರಳಿ ಪಡೆಯಲಾಯಿತು.

ಕಳೆದುಕೊಂಡ ವಸ್ತುವಿನ ಬೆಲೆ ಹೆಚ್ಚಿರಲಿ ಕಡಿಮೆ ಇರಲಿ ಕಳೆದುಕೊಂಡವರಿಗೆ ಆ ವಸ್ತುವಿನ ಪ್ರಾಮುಖ್ಯತೆ, ಅನಿವಾರ್ಯತೆ ಮಾತಲ್ಲಿ ಹೇಳಲಾರದ್ದು. ಅಂತೆಯೇ ದೊರೆತ ವಸ್ತುವನ್ನ ಮರಳಿಸುವ ಗುಣಕೂಡ ಬೆಲೆಕಟ್ಟಲಾರದ್ದು. ಹೀಗಾಗಿ ಆರ್.ವಿ.ಭಟ್ ದಂಪತಿಗಳ ಪ್ರಾಮಾಣಿಕತೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದ್ದು ಅದೇ ವಾಟ್ಸಪ್ ಗುಂಪುಗಳಲ್ಲಿ ಪ್ರಶಂಸೆಯ ಸಂದೇಶಗಳು ಹರಿದಾಡುತ್ತಿವೆ.




Prathidvani Yellapura