

ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ವೆಂಕಟರಮಣ ಮಠದ ಕಟ್ಟಡದಲ್ಲಿರುವ ಕೆನರಾಬ್ಯಾಂಕ್ಗೆ ಸಂಬAಧಿಸಿದ ಜನರೇಟರ್ ಪೆಟ್ಟಿಗೆಯೊಳಗೆ ಮಾನಸಿಕ ಅಸ್ವಸ್ಥನಂತಿರುವ ಯುವಕನೊಬ್ಬ ಅವಿತು ಕುಳಿತಿದ್ದು ಕೆಲಕಾಲ ಆತಂಕ ಸೃಷ್ಟಿ ಮಾಡಿತ್ತು.

ಕೆನರಾ ಬ್ಯಾಂಕ್ ಜನರೇಟರ್ ಡಬ್ಬಿಯೊಳಗೆ ಅವಿತು ಕುಳಿತಿದ್ದ ಮಾನಸಿಕ ಅಸ್ವಸ್ಥನಂತಿರುವ ಯುವಕ ಯಾವಾಗ ಮತ್ತು ಎಷ್ಟು ದಿನದಿಂದ ಒಳಗಿದ್ದ ಎಂಬುದು ಯಾರಿಗೂ ತಿಳಿದಿಲ್ಲ. ಬ್ಯಾಂಕ್ ಸಿಬ್ಬಂದಿ ಶನಿವಾರ ಮದ್ಯಾಹ್ನ ಜನರೇಟರ್ ಆನ್ ಮಾಡಲು ತೆರಳಿದಾಗ ಜನರೇಟರ್ ಬಾಗಿಲು ಮುರಿದಿರುವುದು ಕಂಡು ಬಂದಿದೆ. ಅನುಮಾನಗೊಂಡು ಬಾಗಿಲು ಸರಿಸಿ ಒಳನೋಡಿದರೆ ಒಳಗಿನ ಇಕ್ಕಟ್ಟಾದ ಸ್ಥಳದಲ್ಲಿ ಯುವಕನೋರ್ವ ಮಲಗಿರುವುದು ಕಂಡು ಬಂದಿದೆ. ಗಾಬರಿಗೊಂಡ ಸಿಬ್ಬಂದಿ ಬ್ಯಾಂಕಿನ ವ್ಯವಸ್ಥಾಪಕರಿಗೆ ತಿಳಿಸಿದ್ದಾನೆ. ವ್ಯವಸ್ಥಾಪಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಹೊರತಂದು ವಿಚಾರಿಸಿದಾಗ ಅಸ್ಪಷ್ಟವಾಗಿ ಹಿಂದಿ ಮಾತನಾಡುತ್ತಾನೆ. ಮಹಿಳೆಯರ ಚಪ್ಪಲಿ ಹಾಗೂ ಯಾವುದೋ ಕೆಲಸದ ಮೇಲಿರುವಂತಹ ಧಿರಿಸು ಧರಿಸಿದ್ದಾನೆ. ಬಲವಾಗಿ ಕೇಳಿದಾಗ ಕಿಷನ್ ಎಂಬ ಹೆಸರು ಬಿಟ್ಟರೆ ಮತ್ತೇನೂ ಹೇಳುವುದಿಲ್ಲ. ಕೊನೆಗೆ ಆತ ಮಾನಸಿಕ ಅಸ್ವಸ್ಥನೆಂದು ತಿಳಿದು ಬಿಟ್ಟಿದ್ದಾರೆ. ಆದರೆ ಜನರೇಟರ್ ಒಳಗಿದ್ದಾಗ ಸ್ಟಾರ್ಟ್ ಆಗುವ ವೈರ್ ತುಂಡರಿಸಿದ್ದಾನೆ. ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಾಣದಿದ್ದರೂ ನಡವಳಿಕೆಯಲ್ಲಿ ಮಾತ್ರ ಮಾನಸಿಕ ಅಸ್ವಸ್ಥನಂತಿದ್ದಾನೆ.
Prathidvani Yellapura