
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ತಾಲೂಕಿನ ಮಂಚೀಕೇರಿಯ ಸೂರಜ್ ಕಲಾ ಸೌದ(ರಿ),ಮಹಿಷಾಶುರಮರ್ದಿನಿ ನಾಟ್ಯ ಕಲಾ ಸಂಘ ಮತ್ತು ರಾಮಲಿಂಗೇಶ್ವರ ದೇವಸ್ಥಾನ ಬೀಳಕಿಯ ಆಶ್ರಯದಲ್ಲಿ ಏ.17 ರಂದು ತಾಲೂಕಿನ ಬಿಳಕಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅಹ್ವಾನಿತ ನಾಟಕ ಸ್ಪರ್ಧೆಯಲ್ಲಿ ಅಂಕೋಲಾದ ಸಣ್ಣಮ್ಮ ಬೊಮ್ಮಯ್ಯ ದೇವ ನಾಟ್ಯ ಸಂಘದ ಅಣ್ಣ ಕೊಟ್ಟ ಉಡುಗೊರೆ ನಾಟಕ ಪ್ರಥಮ, ಮಂಚೀಕೇರಿಯ ಮಹಿಷಾಶುರಮರ್ದಿನಿ ನಾಟ್ಯ ಕಲಾ ಸಂಘದ ಮಗ ಹೋದರೂ ಮಾಂಗಲ್ಯ ಬೇಕು ನಾಟಕ ದ್ವಿತೀಯ ಸ್ಥಾನವನ್ನೂ ಕಾರವಾರ ಮಾಜಾಳಿಯ ಶ್ರೀ ಕಂಡ್ರಿನಾಥ ನವ ನಾಟ್ಯ ಮಂಡಳಿಯ ಮುಗಿಲು ಮುಟ್ಟಿದ ಅಣ್ಣನ ಆಕ್ರಂಧನ ನಾಟಕ ತೃತೀತ ಸ್ಥಾನ ಪಡೆದಿವೆ ಎಂದು ಸಂಘಟಕರು ತಿಳಿಸಿದ್ದಾರೆ.