Breaking News

” ಶ್ರೀ ರಾಮ ಜಯ ರಾಮ ಜಯ ಜಯ ರಾಮ “
🚩ಆತ್ಮೀಯ ಹಿಂದು ಧರ್ಮದ ಬಂಧುಗಳೆ. 🚩

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

2024 ರ ಜನವರಿ 22 ರಂದು ನೂರಾರು ವರ್ಷಗಳ ನೋವಿನ ಇತಿಹಾಸಕ್ಕೆ ತಿಲಾಂಜಲಿ ಇಟ್ಟು ಭರತ ಭೂಮಿಯಲ್ಲಿ ಹಿಂದು ನೆಲದಲ್ಲಿ ಮರ್ಯಾದಾ ಪುರುಷೋತ್ತಮ ” ಪ್ರಭು ಶ್ರೀ ರಾಮನ ಜನ್ಮ ಸ್ಥಳ ಅಯೋಧ್ಯೆ ” ಯಲ್ಲಿ ದಿವ್ಯವಾದ ದೇಗುಲ ಭಾರತೀಯ ಸನಾತನ ಸಂಸ್ಕೃತಿಯ ಪ್ರತಿ ಹಿಂದುವಿನ ಆತ್ಮಗೌರವದ ಪ್ರತೀಕವಾಗಿ ಲೋಕಾರ್ಪಣೆಯಾಗುತ್ತಿದೆ.
ಬಂಧುಗಳೆ ಇದು ಸಾಮಾನ್ಯದ ಸಂಗತಿಯಲ್ಲ ನೂರಾರು ವರ್ಷಗಳ ಸುದೀರ್ಘ ಹೋರಾಟದ ಪ್ರತಿಫಲ ಭಗವಂತನ ಅನುಗ್ರಹ ನಮ್ಮ ಜೀವಿತಾವದಿಯಲ್ಲಿ ಕಣ್ಣಾರೆ ಕಾಣುತ್ತಿದ್ದೇವೆ ನಾವೆ ಧನ್ಯರು.

ಇಂತಹ ಪರಮ ಪವಿತ್ರ ದಿನವನ್ನು ಹಿಂದು ಕುಲಕೋಟಿ ಸಂಭ್ರಮಿಸಬೇಕಾದ ದಿನ ಯಾವುದೇ ಕಾರಣ ನೀಡದೆ ಪ್ರತಿಯೊಬ್ಬರೂ ತಮ್ಮ ಮನಃಪೂರ್ವಕ ಭಕ್ತಿ ಆರಾಧನೆಯನ್ನು ಪ್ರಭು ಶ್ರೀರಾಮನಿಗೆ ಅರ್ಪಿಸಬೇಕಿದೆ.


ನೆನಪಿಡಿ ಇದು ಬಿಜೆಪಿ ರಾಮ ಮಂದಿರವಲ್ಲ, ಇದು ಕಾಂಗ್ರೆಸ್ ರಾಮ ಮಂದಿರವಲ್ಲ, ಇದು ಜೆಡಿಎಸ್ ರಾಮ ಮಂದಿರವಲ್ಲ ಇದು ಯಾವುದೆ ಪಕ್ಷದ ರಾಮ ಮಂದಿರವಲ್ಲ, ಇದು ಯಾವುದೆ ಜಾತಿಯ ರಾಮ ಮಂದಿರವಲ್ಲ ಇದು ಯಾವುದೆ ಸಂಘ, ಸಂಘಟನೆಯ ರಾಮ ಮಂದಿರವಲ್ಲ…. ಇದು ಸಮಸ್ತ ಹಿಂದು ಧರ್ಮದ ಕಟ್ಟ ಕಡೆಯ ವ್ಯಕ್ತಿಯವರೆಗಿನ ಹಿಂದು ನೆಲದ ಸ್ವಾಭಿಮಾನದ ಸಂಕೇತದ ನಮ್ಮ ಮಂದಿರ ಬೇರೆಲ್ಲಾ ವಿಚಾರಗಳನ್ನು ಬದಿಗೊತ್ತಿ ನಮ್ಮ ಧಾರ್ಮಿಕ ಬದ್ದತೆಯ ಆಚರಣೆಯನ್ನು ಮಾತ್ರ ನೆನಪಿಡಿ ಆಗ ಪ್ರಭು ಶ್ರೀ ರಾಮನ ತಾರಕ ಮಂತ್ರ ತನ್ನಿಂದ ತಾನೆ ನಿಮ್ಮ ನಾಲಿಗೆಯಲ್ಲಿ ನುಲಿವುದು.
ಬಂಧುಗಳೆ ಈ ಸಂಭ್ರಮವನ್ನು ಇತಿಹಾಸದಲ್ಲಿ ನೆನಪಿಡುವಂತೆ ಆಚರಿಸೋಣ.

ಪ್ರತಿಧ್ವನಿ, ಯಲ್ಲಾಪುರ
ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮ ಭಕ್ತ

  • ಪ್ರತಿ ಮನೆಯ ಮುಂದೆ ತಳಿರು ತೋರಣವಿರಲಿ.
  • ಪ್ರತಿ ಮನೆಗಳಲ್ಲಿ ಸಿಹಿ ಖಾದ್ಯ ತಯಾರಿಸಿ ಸ್ವಿಕರಿಸಿ ಬಾಯಿ ಸಿಹಿಯಾಗಿಸಿ.
  • ಭಗವಾಧ್ವಜ ಮನೆ ಮತ್ತು ಪರಿಸರದಲ್ಲಿ ಹಾರಾಡಲಿ.
  • ಜ,21,22 ಮತ್ತು 23 ಮೂರುದಿನಗಳ ಕಾಲ ನಿಮ್ಮ ಮನೆಯ ತುಂಬಾ ಹಣತೆ ಬೆಳಗಲಿ
  • ಪ್ರತಿ ದೇವಾಲಯಗಳಲ್ಲಿ ವಿಶೇಷ ಪೂಜೆ ಶಂಖ, ಗಂಟಾ ನಾದ ಮೊಳಗಲಿ.
  • ಜನರು ಹೆಚ್ಚಾಗಿ ನಿಮ್ಮ ಹತ್ತಿರದ ದೇವಾಸ್ಥಾನದಲ್ಲಿ ಸೇರಿ ಭಜನೆ ಪೂಜೆಯೊಂದಿಗೆ ಸಂಭ್ರಮಿಸಬೇಕಿದೆ
  • ಪ್ರತಿ ಮನೆ ಮನಃ ಗಳಲ್ಲಿ ರಾಮ ತಾರಕ ಮಂತ್ರ ಜಪಿಸಬೇಕು

  • ಇನ್ನೂ ವಿವಿಧ ಬಗೆಯ ಧಾರ್ಮಿಕ ಕಾರ್ಯಗಳು ಶ್ರದ್ದಾ ಕೇಂದ್ರಗಳಲ್ಲಿ ನಡೆಯಲಿ.
    ಯಕ್ಷಗಾನ, ನಾಟಕ, ಆರ್ಕೆಸ್ಟ್ರಾ, ಕ್ರಿಕೆಟ್, ಪ್ರವಾಸ ಇನ್ನಿತರ ಕಾರ್ಯಗಳಿಗೆ ಸಮಯ ಮೀಸಲಿಡುವ ಹಿಂದು ಧರ್ಮದ ಬಂಧುಗಳು ಈ ಒಂದು ದಿನವನ್ನು ನಮ್ಮ ಜೀವಿತಾವಧಿಯ ಅತ್ಯಂತ ಪವಿತ್ರ ದಿನ ವಾಗಿಸಲು ನಿಮ್ಮ ಅಮೂಲ್ಯ ಸಮಯವನ್ನು ಮೀಸಲಿಡಿ ಇಡೀ ಭರತ ಖಂಡವೇ ರಾಮ ಮಯವಾಗಿಸೋಣ. ನಮ್ಮ ಯಲ್ಲಾಪುರ ತಾಲೂಕನ್ನು ಶ್ರೀ ರಾಮ ಮಯವಾಗಿಸೋಣ.
  • ಧನ್ಯವಾದಗಳು ‌‌ ‌ ‌‌
  • 🚩 ಶ್ರೀ ರಾಮ ಜಯ ರಾಮ ಜಯ ಜಯ ರಾಮ 🚩

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *