

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
2024 ರ ಜನವರಿ 22 ರಂದು ನೂರಾರು ವರ್ಷಗಳ ನೋವಿನ ಇತಿಹಾಸಕ್ಕೆ ತಿಲಾಂಜಲಿ ಇಟ್ಟು ಭರತ ಭೂಮಿಯಲ್ಲಿ ಹಿಂದು ನೆಲದಲ್ಲಿ ಮರ್ಯಾದಾ ಪುರುಷೋತ್ತಮ ” ಪ್ರಭು ಶ್ರೀ ರಾಮನ ಜನ್ಮ ಸ್ಥಳ ಅಯೋಧ್ಯೆ ” ಯಲ್ಲಿ ದಿವ್ಯವಾದ ದೇಗುಲ ಭಾರತೀಯ ಸನಾತನ ಸಂಸ್ಕೃತಿಯ ಪ್ರತಿ ಹಿಂದುವಿನ ಆತ್ಮಗೌರವದ ಪ್ರತೀಕವಾಗಿ ಲೋಕಾರ್ಪಣೆಯಾಗುತ್ತಿದೆ.
ಬಂಧುಗಳೆ ಇದು ಸಾಮಾನ್ಯದ ಸಂಗತಿಯಲ್ಲ ನೂರಾರು ವರ್ಷಗಳ ಸುದೀರ್ಘ ಹೋರಾಟದ ಪ್ರತಿಫಲ ಭಗವಂತನ ಅನುಗ್ರಹ ನಮ್ಮ ಜೀವಿತಾವದಿಯಲ್ಲಿ ಕಣ್ಣಾರೆ ಕಾಣುತ್ತಿದ್ದೇವೆ ನಾವೆ ಧನ್ಯರು.

ಇಂತಹ ಪರಮ ಪವಿತ್ರ ದಿನವನ್ನು ಹಿಂದು ಕುಲಕೋಟಿ ಸಂಭ್ರಮಿಸಬೇಕಾದ ದಿನ ಯಾವುದೇ ಕಾರಣ ನೀಡದೆ ಪ್ರತಿಯೊಬ್ಬರೂ ತಮ್ಮ ಮನಃಪೂರ್ವಕ ಭಕ್ತಿ ಆರಾಧನೆಯನ್ನು ಪ್ರಭು ಶ್ರೀರಾಮನಿಗೆ ಅರ್ಪಿಸಬೇಕಿದೆ.

ನೆನಪಿಡಿ ಇದು ಬಿಜೆಪಿ ರಾಮ ಮಂದಿರವಲ್ಲ, ಇದು ಕಾಂಗ್ರೆಸ್ ರಾಮ ಮಂದಿರವಲ್ಲ, ಇದು ಜೆಡಿಎಸ್ ರಾಮ ಮಂದಿರವಲ್ಲ ಇದು ಯಾವುದೆ ಪಕ್ಷದ ರಾಮ ಮಂದಿರವಲ್ಲ, ಇದು ಯಾವುದೆ ಜಾತಿಯ ರಾಮ ಮಂದಿರವಲ್ಲ ಇದು ಯಾವುದೆ ಸಂಘ, ಸಂಘಟನೆಯ ರಾಮ ಮಂದಿರವಲ್ಲ…. ಇದು ಸಮಸ್ತ ಹಿಂದು ಧರ್ಮದ ಕಟ್ಟ ಕಡೆಯ ವ್ಯಕ್ತಿಯವರೆಗಿನ ಹಿಂದು ನೆಲದ ಸ್ವಾಭಿಮಾನದ ಸಂಕೇತದ ನಮ್ಮ ಮಂದಿರ ಬೇರೆಲ್ಲಾ ವಿಚಾರಗಳನ್ನು ಬದಿಗೊತ್ತಿ ನಮ್ಮ ಧಾರ್ಮಿಕ ಬದ್ದತೆಯ ಆಚರಣೆಯನ್ನು ಮಾತ್ರ ನೆನಪಿಡಿ ಆಗ ಪ್ರಭು ಶ್ರೀ ರಾಮನ ತಾರಕ ಮಂತ್ರ ತನ್ನಿಂದ ತಾನೆ ನಿಮ್ಮ ನಾಲಿಗೆಯಲ್ಲಿ ನುಲಿವುದು.
ಬಂಧುಗಳೆ ಈ ಸಂಭ್ರಮವನ್ನು ಇತಿಹಾಸದಲ್ಲಿ ನೆನಪಿಡುವಂತೆ ಆಚರಿಸೋಣ.

ಪ್ರತಿಧ್ವನಿ, ಯಲ್ಲಾಪುರ
ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮ ಭಕ್ತ
- ಪ್ರತಿ ಮನೆಯ ಮುಂದೆ ತಳಿರು ತೋರಣವಿರಲಿ.
- ಪ್ರತಿ ಮನೆಗಳಲ್ಲಿ ಸಿಹಿ ಖಾದ್ಯ ತಯಾರಿಸಿ ಸ್ವಿಕರಿಸಿ ಬಾಯಿ ಸಿಹಿಯಾಗಿಸಿ.
- ಭಗವಾಧ್ವಜ ಮನೆ ಮತ್ತು ಪರಿಸರದಲ್ಲಿ ಹಾರಾಡಲಿ.
- ಜ,21,22 ಮತ್ತು 23 ಮೂರುದಿನಗಳ ಕಾಲ ನಿಮ್ಮ ಮನೆಯ ತುಂಬಾ ಹಣತೆ ಬೆಳಗಲಿ
- ಪ್ರತಿ ದೇವಾಲಯಗಳಲ್ಲಿ ವಿಶೇಷ ಪೂಜೆ ಶಂಖ, ಗಂಟಾ ನಾದ ಮೊಳಗಲಿ.
- ಜನರು ಹೆಚ್ಚಾಗಿ ನಿಮ್ಮ ಹತ್ತಿರದ ದೇವಾಸ್ಥಾನದಲ್ಲಿ ಸೇರಿ ಭಜನೆ ಪೂಜೆಯೊಂದಿಗೆ ಸಂಭ್ರಮಿಸಬೇಕಿದೆ
- ಪ್ರತಿ ಮನೆ ಮನಃ ಗಳಲ್ಲಿ ರಾಮ ತಾರಕ ಮಂತ್ರ ಜಪಿಸಬೇಕು
ಇನ್ನೂ ವಿವಿಧ ಬಗೆಯ ಧಾರ್ಮಿಕ ಕಾರ್ಯಗಳು ಶ್ರದ್ದಾ ಕೇಂದ್ರಗಳಲ್ಲಿ ನಡೆಯಲಿ.
ಯಕ್ಷಗಾನ, ನಾಟಕ, ಆರ್ಕೆಸ್ಟ್ರಾ, ಕ್ರಿಕೆಟ್, ಪ್ರವಾಸ ಇನ್ನಿತರ ಕಾರ್ಯಗಳಿಗೆ ಸಮಯ ಮೀಸಲಿಡುವ ಹಿಂದು ಧರ್ಮದ ಬಂಧುಗಳು ಈ ಒಂದು ದಿನವನ್ನು ನಮ್ಮ ಜೀವಿತಾವಧಿಯ ಅತ್ಯಂತ ಪವಿತ್ರ ದಿನ ವಾಗಿಸಲು ನಿಮ್ಮ ಅಮೂಲ್ಯ ಸಮಯವನ್ನು ಮೀಸಲಿಡಿ ಇಡೀ ಭರತ ಖಂಡವೇ ರಾಮ ಮಯವಾಗಿಸೋಣ. ನಮ್ಮ ಯಲ್ಲಾಪುರ ತಾಲೂಕನ್ನು ಶ್ರೀ ರಾಮ ಮಯವಾಗಿಸೋಣ.- ಧನ್ಯವಾದಗಳು
- 🚩 ಶ್ರೀ ರಾಮ ಜಯ ರಾಮ ಜಯ ಜಯ ರಾಮ 🚩
