
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಭರತನಹಳ್ಳಿಯ ಹಝರತ್ ಸೈಯ್ಯದ್ ಮರ್ದಾನ್ ಷಾ ಖಾದ್ರಿ ವಲಿಅಲ್ಲಾ ದರ್ಗಾದಲ್ಲಿ ಪ್ರತಿವರ್ಷದಂತೆ 2 ದಿನಗಳ ಭಾವೈಕ್ಯತಾ ಉರುಸ್ (ಜಾತ್ರೆ) ನಡೆಯಿತು.
22 ನೆಯ ವರ್ಷದ ಈ ಕಾರ್ಯಕ್ರಮ ಮೇ.16 ರಂದು ರಾತ್ರಿ ಗೌಸಿಯಾ ಧ್ವಜಾರೋಹಣದೊಂದಿಗೆ ಆರಂಭವಾಯಿತು. ಮೇ.17 ರಂದು ರಾತ್ರಿ ಬೆಂಗಳೂರಿನ ಉಲ್ಮಾ ಎ ಕರಾಮ್ ಮೌಲಾನಾ ಶಾರಿಬ್ ಝಿಯಾ ಮಿಸ್ವಾಹಿ ಮತ್ತು ಮಂಗಳೂರಿನ ಮೌಲಾನಾ ಅಬ್ಧುಲ್ ರಷೀದ್ ಸಖಾಫಿ ಜೈನಿ ಇವರಿಂದ ಉಪನ್ಯಾಸ; ಬೆಂಗಳೂರಿನ ಮುಯೀನ್ ಖಾದ್ರಿ ಮತ್ತು ನಬೀಲಾ ಬರ್ಕಾತಿ ಇವರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸಂಜೆ ಪ್ರತಿಭಾವಂತ ಮಕ್ಕಳಿಂದ ಮಧುರ ನಾತಖ್ವಾನಿ ಕಾರ್ಯಕ್ರಮಗಳು ಜರುಗಿದವು. ಮೇ.17 ರಂದು ರಾತ್ರಿ ನಡೆದ ಅನ್ನಸಂತರ್ಪಣೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿವಿಧ ಪ್ರದೇಶದ ಮುಸ್ಲಿಂ ಬಾಂಧವರೊಂದಿಗೆ, ಸುತ್ತಮುತ್ತಲಿನ ಅಪಾರ ಸಂಖ್ಯೆಯ ಹಿಂದೂ ಜನಾಂಗದ ಜನರೂ ಪಾಲ್ಗೊಂಡು ಭಾವೈಕ್ಯತೆಗೆ ಸಾಕ್ಷಿಯಾದರು.
ದರ್ಗಾ ಸಮಿತಿಯ ಅಧ್ಯಕ್ಷ ಅಖಿಲ ಅಹ್ಮದ್ ಎಂ. ಭರತನಹಳ್ಳಿ, ಕಾರ್ಯದರ್ಶಿ ಅಬ್ದುಲ್ ಅಜೀಂ ಬಿ. ಸೈಯ್ಯದ್, ನಿರ್ದೇಶಕರಾದ ಹೇರಂಭ ಹೆಗಡೆ ಭರತನಹಳ್ಳಿ, ನಾಗೇಶ ದೇವಡಿಗ, ಕೃಷ್ಣಮೂರ್ತಿ ನಾಯ್ಕ, ಅಬ್ದುಲ್ ಗಫೂರ್ ನೂರಿ ಮತ್ತಿತರ ಪ್ರಮುಖರು 2 ದಿನಗಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನೆರವೇರಿಸಿದರು.





Prathidvani Yellapura