




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಹೊರವಲಯದ ಕಲ್ಲಗದ್ದೆಯಲ್ಲಿ ಬೀಡಿಕರ ಕುಟುಂಬದ ಅಡಿಯಲ್ಲಿ ಚೌಡೇಶ್ವರಿ ಅಮ್ಮನವರು ಮತ್ತು ನಾಗೇವರ ಪ್ರತಿಷ್ಟಾಪನೆ ಸಾಂಗವಾಗಿ ನೆರವೇರಿತು.

ಪಟ್ಟಣದ ಹೊರವಲಯದ ಕಲ್ಲಗದ್ದೆಯಲ್ಲಿ ತಮ್ಮ ಪೂರ್ವಜರ ಕಾಲದಿಂದಲೂ ಪೂಜಿಸುತ್ತಾ ಬರುತ್ತಿದ್ದ ಬೀಡಿಕರ್ ಕುಟುಂಬದ ಸದಸ್ಯರು ಇದೀಗ ಗದ್ದೆಗಳ ನಡುವೆ ಪುಟ್ಟ ಗುಡಿ ನಿರ್ಮಿಸಿ ಪ್ರತಿಷ್ಟಾಪನೆ ಕಾರ್ಯ ನೆರವೇರಿಸಿದರು.

ವೈದ್ದಿಕರ ವೇದ ಮಂತ್ರ ಘೋಷಗಳ ನಡುವೆ ಪ್ರತಿಷ್ಟಾಪನೆ ಕಾರ್ಯ ಜರುಗಿತು ನೂರಾರು ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.

ಉಮೇಶ್ ಬಿಡೀಕರ್, ಉದಯ ಬಿಡೀಕರ್, ಲೊಕೇಶ್ ಬಿಡೀಕರ್ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.



