
ಪ್ರತಿದ್ವನಿ ಯಲ್ಲಾಪುರ : ತಾಲೂಕಿನ ನಂದೊಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ತೆಂಗಿನಜಡ್ಡಿಯಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಇರಿಸಿಕೊಂಡಿದ್ದ ನಾಡ ಬಂದೂಕನ್ನು ಯಲ್ಲಾಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತೆಂಗಿನ ಜಡ್ಡಿಯ ಮಂಜುನಾಥ ಕೇಶವ ಸಿದ್ದಿ ಎಂಬಾತ ಅಧಿಕೃತ ಪರವಾನಗಿ ಇಲ್ಲದೇ ನಾಡಬಂದೂಕನ್ನು ಇಟ್ಟುಕೊಂಡಿದ್ದು ಯಲ್ಲಾಪುರ ಪೊಲೀಸರು ಧಾಳಿ ನಡೆಸಿದಾಗ ಆರೋಪಿ ಪರಾರಿಯಾಗಿದ್ದಾನೆ. ಆತನ ಮನೆಯ ಕೊಟ್ಟಿಗೆಯಲ್ಲಿ ಶೋಧಿಸಿದಾಗ ನಾಡ ಬಂದೂಕು ಪತ್ತೆಯಾಗಿದ್ದು ಪರಾರಿಯಾದ ಆಪಾದಿತ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.





Prathidvani Yellapura