
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಆನಗೋಡು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕಾಡಿನಲ್ಲಿ ಸಿಗುವ ಅಣಬೆ ತಿಂದು ಐವರು ಅಸ್ವಸ್ಥರಾಗಿ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಈ ವರ್ಷದಲ್ಲಿ ಅಣಬೆ ಸಮಯ ನಿಗಧಿಯಾದಂತಿಲ್ಲ. ನಾಗರಪಂಚಮಿಯಿಂದ ದೊರೆಯುತ್ತಿರುವ ಅಣಬೆ ದೀಪಾವಳಿವರೆಗೂ ಮಾರುಕಟ್ಟೆಯಲ್ಲಿ ಕಂಡುಬರುತ್ತಿದೆ. ಬುಧವಾರ ಆನಗೋಡಿನ ಸಿದ್ದಿ ಸಮುದಾಯದ ಕುಟುಂಬವೊಂದು ಕಾಡಿನಲ್ಲಿ ದೊರೆತ ಅಣಬೆಯನ್ನು ಮನೆಗೆ ತಂದು ಅಡುಗೆ ಮಾಡಿ ಐವರು ಸೇವಿಸಿದ್ದು ಕೆಲ ಸಮಯದ ನಂತರ ತಲೆ ಸುತ್ತಿ ಮೈ ನಡುಗಿ ವಾಂತಿಯಾಗಲು ಪ್ರಾರಂಭಿಸಿದೆ.

ಒಮ್ಮೆಲೆ ಐವರಲ್ಲೂ ಈ ಲಕ್ಷಣಗಳು ಕಂಡೊಡನೆ ಯಲ್ಲಾಪುರ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದ್ದು ನಾಲ್ವರು ಮಹಿಳೆಯರು ಓರ್ವ ಪುರುಷ ಸೇರಿಂದತೆ ಐವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.




