
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಯಲ್ಲಾಪುರ : ಬೆಂಗಳೂರಿನ ಚನ್ನಮ್ಮನ ಕೆರೆ ಓಳಾಂಗಣ ಕ್ರಿಡಾಗಂಣದಲ್ಲಿ ನಡೆದ ಕರ್ನಾಟಕ ಪ್ರಿಮಿಯರ್ ಲೀಗ್ ಕ್ವಾಡ್ ಸ್ಕೆಟಿಂಗ್ ಹಾಕಿ ಪಂದ್ಯಾವಳಿಯಲ್ಲಿ ಯಲ್ಲಾಪುರ ರೊಲರ್ ಸ್ಕೆಟಿಂಗ್ ಕ್ಲಬ್ನ ವಿದ್ಯಾರ್ಥಿಗಳು ಬಂಗಾರದ ಪದಕವನ್ನು ಪಡೆದುಕೊಂಡಿದ್ದಾರೆ,
ಜುಲೈ 14 ರಿಂದ ಪ್ರಾರಂಭವಾಗಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ ಕ್ವಾಡ್ ಸ್ಕೆಟಿಂಗ್ ಹಾಕಿ ಪಂದ್ಯಾವಳಿಯಲ್ಲಿ ಬ್ಲಾಕ್ ಪ್ಯಾಂಥರ್ಸ್ ಹಾಗು ವೆಸ್ಟ್ರನ್ ಬುಲ್ಸ ತಂಡದ ನಡುವೆ ನಡೆದ ಪೈನಲ್ ಪಂದ್ಯದಲ್ಲಿ 4-2 ಅಂತರದಿಂದ ಜಯಿಸಿ ವೆಸ್ಟ್ರನ್ ಬುಲ್ಸ ತಂಡದ ಆಟಗಾರರು ಬಂಗಾರದ ಪದಕವನ್ನು ಪಡೆದು ಕೊಂಡರು.

ಕರ್ನಾಟಕದ ವಿವಿಧ ಊರುಗಳಿಂದ 220 ಕ್ಕೂ ಹೆಚ್ಚು ಸ್ಕೆಟಿಂಗ ಪಟುಗಳು ಬಾಗವಹಿಸಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಯಲ್ಲಾಪುರ ರೊಲರ್ ಸ್ಕೆಟಿಂಗ್ ಕ್ಲಬ್ ನ ಆಟಗಾರರಾದ ವಿಶ್ವದರ್ಶನ ಪ್ರೌಢಶಾಲೆಯ ತಪನ್ ಲಕ್ಷ್ಮೀಕಾಂತ ಭಟ್ಟ, ಪುಷ್ಕರ್ ಪ್ರಕಾಶ್ ಶೇಟ್ , ಕಿರಣ ಮಂಜುನಾಥರಾವ್ , ಹಾಗು ದೀಯಾ ಸುರೇಶ ಶೇಟ್ ಹಾಗೂ ಮದರ್ ಥೇರೆಸಾ ಆಂಗ್ಲ ಮಾಧ್ಯಮ ಶಾಲೆಯ ಸೇಜಲ್ ಸತೀಶ ನಾಯ್ಕ ಪೈನಲ್ ಪಂದ್ಯದಲ್ಲಿ ಆಟವಾಡಿ ಕ್ಲಬ್ನ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ ಎಂದು ಯಲ್ಲಾಪುರ ರೊಲರ್ ಸ್ಕೆಟಿಂಗ್ ಕ್ಲಬ್ ನ ಆಧ್ಯಕ್ಷರಾದ ಪ್ರಕಾಶ ಶೇಟ್ ತಿಳಿಸಿದ್ದಾರೆ.

ಕರೊನಾ ಲಾಕ್ಡೌನ್ ಸಂಧರ್ಬದಲ್ಲಿ ಕರ್ನಾಟಕ ರೊಲರ್ ಸ್ಕೆಟಿಂಗ್ ಕ್ಲಬ್ ನ ತರಬೇತುದಾರರಾದ ದೀಲಿಪ್ ಹಣಬರ್ , ಅಜೇಯ ಗಾವಡಾ, ಸಚಿನ ಗಾವಡಾ ಅವರಿಂದ ತರಬೇತಿ ಪಡೆದ ಯಲ್ಲಾಪುರದ ಅನೇಕ ಮಕ್ಕಳು ಕಳೆದ ಎರಡು ವರ್ಷ ಗಳಿಂದ ಚಂಡಿಗಡ್ ಹಾಗೂ ಪಂಜಾಬ್ ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಇದೀಗ ಬಂಗಾರದ ಪದಕ ಪಡೆದುಕೊಂಡಿರುವುದು ಯಲ್ಲಾಪುರಕ್ಕೆ ಹೆಮ್ಮೆಯ ವಿಷಯವಾಗಿದೆ. ತರಬೇತುದಾರ ದೀಲಿಪ್ ಹಣಬರ್ ಹಾಗೂ ಪದಕ ವಿಜೇತ ಕ್ರೀಡಾಪಟುಗಳಿಗೆ ಪೋಷಕರು, ಊರನಾಗರೀಕರು , ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಅಭಿನಂದಿಸಿದ್ದಾರೆ.


Prathidvani Yellapura