
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಪ್ರತಿವರ್ಷದಂತೆ ಈ ವರ್ಷವೂ ರಂಗಸಹ್ಯಾದ್ರಿ ಅಡಿಯಲ್ಲಿ ಬೇಸಿಗೆ ಶಿಬಿರ ಆರಂಭವಾಗಿದ್ದು ಮೊದಲ ದಿನವೇ 45 ಕ್ಕೂ ಅಧಿಕ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಶಿಬಿರದಲ್ಲಿ ಮಕ್ಕಳು ಎಲ್ಲ ವಿಧದ ತರಬೇತಿಗಳನ್ನು ಪಡೆದು ಪ್ರಯೋಜನ ಪಡೆದುಕೊಳ್ಳಬೇಕಿದೆ. ಬೇಸಿಗೆ ರಜೆ ಎಂದು ಕಾಲಹರಣ ಮಾಡದೇ ಸಂಸ್ಕಾರ, ಸಂಗೀತ, ಕಲೆ, ಸಾಹಿತ್ಯ , ಕ್ರೀಡೆ, ಬುದ್ದಿಚುರುಕಾಗುವಂತಹ ಅಭ್ಯಾಸಗಳನ್ನು ಕಲಿತು ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಳ್ಳಬೇಕು. ಸಮಾಜಕ್ಕೆ ಉತ್ತಮ ಪ್ರಜೆಯಾಗಲು ಮಕ್ಕಳಿರುವಾಗಲೇ ಸಂಸ್ಕಾರವAತ ನಡೆ ಕಲಿತಯಬೇಕೆಂದು ಪಟ್ಟಣದ ಮಾದರಿ ಶಾಲೆಯಲ್ಲಿ ಪ್ರಸಕ್ತ ಸಾಲಿನ ಬೇಸಿಗೆ ಶಿಬಿರ ಉದ್ಘಾಟಿಸಿದ ನಿವೃತ್ತ ಉಪನಿರ್ದೇಶಕ ಕೆ.ಜಿ.ಭಟ್ಟ ಹೇಳಿದರು.

ವೇದಿಕೆಯಲ್ಲಿ ನಿವೃತ್ತ ದೈಹಿಕ ಶಿಕ್ಷಕ ಜಿ.ಎಂ ತಾಂಡುರಾಯನ್, ಕಾ.ನಿ.ಪ ಸಂಘದ ಅಧ್ಯಕ್ಷ ಕೆ.ಎಸ್.ಭಟ್ಟ, ಶಾಲೆಯ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಗಾಯತ್ರಿ ಬೋಳಗುಡ್ಡೆ, ಸದಸ್ಯೆ ಕವಿತಾ, ನಿವೃತ್ತ ಡಿ.ಆರ್.ಎಫ್.ಒ ಜಿ.ಐ ನಾಯ್ಕ ಉಪಸ್ಥಿತರಿದ್ದರು.

ಕು.ಸಂಪದ ಡಿ ಕಟ್ಟೀಮನಿ ಪ್ರಾರ್ಥಿಸಿದಳು. ಪಾರ್ವತಿ ಡಿ ಕಟ್ಟೀಮನಿ ಸ್ವಾಗತಿಸಿದರು. ಸುಮಂಗಲಾ ಜೋಷಿ ವಂದಿಸಿದರು. ಸುಬ್ರಹ್ಮಣ್ಯ ಭಟ್ಟ ನಿರೂಪಿಸಿದರು.





Prathidvani Yellapura