
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ: ಪಟ್ಟಣದಲ್ಲಿ ಶುಕ್ರವಾರ ಸಂಜೆಯ ವೇಳೆ ಎಲ್ಲೆಲ್ಲು ತಮಟೆಯದೆ ಸದ್ದು ಬೇಡರ ವೇಷದಾರಿಗಳ ಕುಣಿತದ ಸೊಬಗು ಎಲ್ಲೆಡೆ ಹರಡಿತ್ತು.

ಹೋಳಿ ಹಬ್ಬದ ಹಿನ್ನಲೆಯಲ್ಲಿ ಬೇಡರ ವೇಷದ ಕುಣಿತ ಮಹತ್ವ ಪಡೆದಿದ್ದು ಶಿರಸಿ ಭಾಗದಲ್ಲಿ ಜನ ಜನಿತವಾದ ಕಲೆಯನ್ನು ಕಳೆದ ಕೆಲ ವರ್ಷಗಳಿಂದ ಯಲ್ಲಾಪುರದಲ್ಲೂ ನಡೆಸಿಕೊಂಡು ಬರಲಾಗುತ್ತಿದೆ.

ಸಂಜೆ 6 ಘಂಟೆಯಿಂದ ಪ್ರಾರಂಭವಾದ ಬೇಡರ ವೇಷದ ಕುಣಿತ ರವೀಂದ್ರ ನಗರದ ಪ್ರಶಾಂತ ಡಿ ಜೋಗಳೇಕರ ಹಾಗೂ ತನಯ ಮಹೇಶ್ ನಾಯ್ಕ ಮತ್ತು ಅಂಬೇಡ್ಕರ್ ನಗರದ ಅಕ್ಷಯ ಪದ್ಮನಾಭ ರೇವಣಕರ ಬೇಡರ ವೇಷಧಾರಿಗಳಾಗಿ ತಮ್ಮ ರೋಷಾವೇಶದ ನೃತ್ಯದೊಂದಿಗೆ ಜನಮನ ಸೆಳೆದರು.

ಅಂಬೇಡ್ಕರ್ ನಗರದ ಬೇಡರ ವೇಷದ ಪ್ರದರ್ಶನಕ್ಕೆ ಉದ್ಯಮಿ ಬಾಲಕೃಷ್ಣ ನಾಯಕ್, ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಜಗನ್ನಾಥ ರೇವಣಕರ್ , ಪ್ರಶಾಂತ ಸಬಾಹಿತ, ಪದ್ಮನಾಭ ರೇವಣಕರ ತಮಟೆ ಬಾರಿಸಿ ಚಾಲನೆ ನೀಡಿದರು.

ರವೀಂದ್ರ ನಗರದ ಬೇಡರ ವೇಷದ ಪ್ರದರ್ಶನಕ್ಕೆ ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ್, ಪ್ರಭಾಕರ ಸಾಣೆ ಚಾಲನೆ ನೀಡಿದರು.

ಎರಡುವಕಡೆಗಳಿಂದ ಮೆರವಣಿಗೆ ಮೂಲಕ ಸಾಗಿ ಬಂದ ಬೇಡರವೇಷ ಪೊಲೀಸ್ ವೃತ್ತದಲ್ಲಿ ಜಮಾವಣೆಗೊಂಡಿತು ಸಾಗರೋಪಾದಿಯಲ್ಲಿ ನೆರೆದಿದ್ದ ಜನಜಾತ್ರೆಯಲ್ಲಿ ಮೂವರು ಬೇಡರವೇಷದಾರಿಗಳ ರೋಷಾವೇಷದ ನೃತ್ಯದ ಸೊಬಗು ಅದ್ಬುತವಾಗಿತ್ತು.

ಬೇಡರ ವೇಷದ ಕುಣಿತಗಾರರ ಹೆಜ್ಜೆಗೆ ಸರಿಯಾದ ತಮಟೆ ಸದ್ದು ಸಾಥ್ ಕೊಡುವುದರೊಂದಿಗೆ ಕುಣಿತಕ್ಕೆ ಮತ್ತಷ್ಟು ಮೆರುಗು ತಂದಿತ್ತು. ಎಲ್ಲಾ ಯುವಕರು ಹಿರಿಯರು ತಾಳಬದ್ದವಾಗಿ ತಟ್ಟಿದ ತಮಟೆ ಸದ್ದು ಎಲ್ಲರ ಹೃದಯ ಗೆದ್ದಿತು.

ವರ್ಷದಿಂದ ವರ್ಷಕ್ಕೆ ಜನಮನಬಗೆಲ್ಲುತ್ತಿರುವ ಬೇಡರವೇಷಕ್ಕೆ ನೆರೆದಿರುವ ಸಹಸ್ರಾರು ಜನಜಂಗುಳಿಯೆ ಸಾಕ್ಷಿಯಾಗಿದೆ.
ಘನಶಾಮ ರೇವಣಕರ
Prathidvani Yellapura