ಗ್ರಾಮದೇವಿ ತಾಯಿ ಅನುಗ್ರಹ , ಶ್ಯಾಮಲಾ ನಾಗೇಶ್ ಪ್ರಯತ್ನದಲ್ಲಿ… ಪ್ರತಿಧ್ವನಿ ಸುದ್ದಿ ಸಾರ
ಪ್ರತಿಧ್ವನಿ, ಯಲ್ಲಾಪುರ – ಹಚ್ಚ ಹಸಿರಿನ ಮಲೆನಾಡು ಸೌಂದರ್ಯ ರಾಶಿಯ ನೆಲೆಬೀಡು ಯಲ್ಲಾಪುರ ತಾಲೂಕಿನಲ್ಲಿ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಅಪಘಾತ ವಲಯವೆಂದೇ ಹೆಸರಾಗಿರುವ ಅರಭೈಲ್ ಘಟ್ಟ ಪ್ರದೇಶವೀಗ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದು ಕಿಡಿಗೇಡಿಗಳು ಹಚ್ಚಿದ ವಿಕೃತ ಮನಸ್ಸಿನ ಬೆಂಕಿ ಕಿಡಿ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಹೊತ್ತಿ ಉರಿದಿದ್ದು ಹಸಿರಾದ ಪ್ರದೇಶವೆಲ್ಲಾ ಸುಟ್ಟು ಬೂದಿಮಯ ಪ್ರದೇಶವಾಗಿ ಗೋಚರಿಸುತ್ತಿದೆ.


ಮಾಚ್೯ 1 ರಂದು ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ ಇದ್ದಕ್ಕಿದ್ದಂತೆ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಏಕಕಾಲಕ್ಕೆ ಕಾಣಿಸಿಕೊಂಡಿತು. ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಸ್ಥಳೀಯ ನಾಗರಿಕರ ಸಹಕಾರದೊಂದಿಗೆ ಎಷ್ಟೇ ಬೆಂಕಿ ನಂದಿಸಿದರು ಮತ್ತೆ ಮತ್ತೆ ಬೆಂಕಿ ಬೇರೆ ಬೇರೆ ಪ್ರದೇಶದಲ್ಲಿ ಕಾಣಿಸಿಕೊಳ್ಳಲಾರಂಬಿಸಿದ್ದು ಇಲಾಖೆಯ ತಲೆನೋವಿಗೆ ಕಾರಣವಾಯಿತು.

ಅರಬೈಲ್ ಘಟ್ಟದಲ್ಲಿ ರಾತ್ರಿಯಲ್ಲಿ ಹೊತ್ತಿ ಉರಿದ ಬೆಂಕಿಯ ದೃಶ್ಯ
ಬೆಂಕಿ ಸ್ವಾಭಾವಿಕವಾಗಿ ಬಿದ್ದಿದ್ದಲ್ಲ ಬದಲಾಗಿ ಬೇಕೆಂತಲೆ ವಿಕೃತ ಮನೋಭಾವದಲ್ಲಿ ಕೆಲವರ ಕಿಡಿಗೇಡಿತನದ ಕೃತ್ಯ ಇದಾಗಿದೆ ಎನ್ನವುದು ಎಂತಹವರಿಗು ಮೇಲ್ನೋಟಕ್ಕೆ ತಿಳಿಯುವಂತದಾಗಿತ್ತು.

ಆದರೆ ಕಿಚ್ಚು ಹೊತ್ತಿಸಲು ಕಾರಣರಾರು ಎನ್ನುವುದಕ್ಕಿಂತ ಅದನ್ನು ನಂದಿಸುವುದೆ ಅರಣ್ಯ ಇಲಾಖೆಯ ಪ್ರಥಮ ಆದ್ಯತೆಯಾಗಿತ್ತು ಅದರಂತೆ ಹಗಲು ರಾತ್ರಿ ಎನ್ನದೆ ಹಿರಿಯ ಅಧಿಕಾರಿಗಳಿಂದ ಹಿಡಿದು ಕೆಳ ಹಂತದ ಅರಣ್ಯ ಸಿಬ್ಬಂದಿಗಳು ಸ್ಥಳೀಯ ನಾಗರಿಕರು ಪಾಲ್ಗೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಯಾರದೋ ಮೇಲಿನ ಸಿಟ್ಟು ಅಸಮದಾನ ಅರಣ್ಯದ ಮೇಲೆ ವಿಕೃತಿ ಮೆರೆದಿರುವುದು ಕ್ಷಮಿಸಲಾರದ ತಪ್ಪಾಗಿದ್ದು ಮೂಕ ಪ್ರಾಣಿಗಳ ಆರ್ಥನಾದ, ಅಮೂಲ್ಯ ಸಸ್ಯ ಸಂಪತ್ತಿನ ನಾಶ, ಭೂಮಿಗೆ ಫಲವತ್ತತ್ತೆ ತರುವ ಉದುರಿದ ಎಲೆಗಳ ಸರ್ವನಾಶ, ನೂರಾರು ಹಾವುಗಳ ಮಾರಣಹೋಮ ಅಲ್ಲದೆ ಮುಂದೆ ಪ್ರಾಣಿ ಪಕ್ಷಿಗಳಿಗೆ ಆಹಾರದ ಕೊರತೆ ಈ ಪ್ರದೇಶದಲ್ಲಿ ಎದುರಾಗಲಿದ್ದು ಪ್ರಾಣಿಗಳು ಜನವಸತಿ ಪ್ರದೇಶಗಳತ್ತ ಮುಖಮಾಡಲಿವೆ.

