Breaking News

ಹಚ್ಚ ಹಸಿರಿನ ಅರಬೈಲ್ ಘಟ್ಟಕ್ಕೆ ಕಿಚ್ಚು ಹಚ್ಚಿದ ಕೀಚಕರು ಯಾರು???

ಗ್ರಾಮದೇವಿ ತಾಯಿ ಅನುಗ್ರಹ , ಶ್ಯಾಮಲಾ ನಾಗೇಶ್ ಪ್ರಯತ್ನದಲ್ಲಿ… ಪ್ರತಿಧ್ವನಿ ಸುದ್ದಿ ಸಾರ

ಪ್ರತಿಧ್ವನಿ, ಯಲ್ಲಾಪುರ – ಹಚ್ಚ ಹಸಿರಿನ ಮಲೆನಾಡು ಸೌಂದರ್ಯ ರಾಶಿಯ ನೆಲೆಬೀಡು ಯಲ್ಲಾಪುರ ತಾಲೂಕಿನಲ್ಲಿ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಅಪಘಾತ ವಲಯವೆಂದೇ ಹೆಸರಾಗಿರುವ ಅರಭೈಲ್ ಘಟ್ಟ ಪ್ರದೇಶವೀಗ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದು ಕಿಡಿಗೇಡಿಗಳು ಹಚ್ಚಿದ ವಿಕೃತ ಮನಸ್ಸಿನ ಬೆಂಕಿ ಕಿಡಿ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಹೊತ್ತಿ ಉರಿದಿದ್ದು ಹಸಿರಾದ ಪ್ರದೇಶವೆಲ್ಲಾ ಸುಟ್ಟು ಬೂದಿಮಯ ಪ್ರದೇಶವಾಗಿ ಗೋಚರಿಸುತ್ತಿದೆ.

ಅರಬೈಲ್ ಘಟ್ಟ ಪ್ರದೇಶದಲ್ಲಿ ಬಿದ್ದ ಒಣಗಿದ ಮರಗಳು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿರುವುದು
ಬೆಂಕಿ ಸಂಪೂರ್ಣ ಆರಿಸಿದರು ಅಲ್ಲಲ್ಲಿ ಹೊಗೆಯಡುತ್ತಿರುವುದು


ಮಾಚ್೯ 1 ರಂದು ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ ಇದ್ದಕ್ಕಿದ್ದಂತೆ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಏಕಕಾಲಕ್ಕೆ ಕಾಣಿಸಿಕೊಂಡಿತು. ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಸ್ಥಳೀಯ ನಾಗರಿಕರ ಸಹಕಾರದೊಂದಿಗೆ ಎಷ್ಟೇ ಬೆಂಕಿ ನಂದಿಸಿದರು ಮತ್ತೆ ಮತ್ತೆ ಬೆಂಕಿ ಬೇರೆ ಬೇರೆ ಪ್ರದೇಶದಲ್ಲಿ ಕಾಣಿಸಿಕೊಳ್ಳಲಾರಂಬಿಸಿದ್ದು ಇಲಾಖೆಯ ತಲೆನೋವಿಗೆ ಕಾರಣವಾಯಿತು.


ಅರಬೈಲ್ ಘಟ್ಟದಲ್ಲಿ ರಾತ್ರಿಯಲ್ಲಿ ಹೊತ್ತಿ ಉರಿದ ಬೆಂಕಿಯ ದೃಶ್ಯ

ಬೆಂಕಿ ಸ್ವಾಭಾವಿಕವಾಗಿ ಬಿದ್ದಿದ್ದಲ್ಲ ಬದಲಾಗಿ ಬೇಕೆಂತಲೆ ವಿಕೃತ ಮನೋಭಾವದಲ್ಲಿ ಕೆಲವರ ಕಿಡಿಗೇಡಿತನದ ಕೃತ್ಯ ಇದಾಗಿದೆ ಎನ್ನವುದು ಎಂತಹವರಿಗು ಮೇಲ್ನೋಟಕ್ಕೆ ತಿಳಿಯುವಂತದಾಗಿತ್ತು.

ಮಕ್ಕಳಂತೆ ಪ್ರೀತಿಯಿಂದ ಪ್ರತಿನಿತ್ಯ ಅಕ್ಕರೆ ತೋರುತ್ತಿದ್ದ ಅರಣ್ಯ ಸುಡುತ್ತಿರುವುದನ್ನು ಕಂಡು ಮರುಗಿದ ಅರಣ್ಯ ಇಲಾಖೆ ಅಧಿಕಾರಿಗಳು

ಆದರೆ ಕಿಚ್ಚು ಹೊತ್ತಿಸಲು ಕಾರಣರಾರು ಎನ್ನುವುದಕ್ಕಿಂತ ಅದನ್ನು ನಂದಿಸುವುದೆ ಅರಣ್ಯ ಇಲಾಖೆಯ ಪ್ರಥಮ ಆದ್ಯತೆಯಾಗಿತ್ತು ಅದರಂತೆ ಹಗಲು ರಾತ್ರಿ ಎನ್ನದೆ ಹಿರಿಯ ಅಧಿಕಾರಿಗಳಿಂದ ಹಿಡಿದು ಕೆಳ ಹಂತದ ಅರಣ್ಯ ಸಿಬ್ಬಂದಿಗಳು ಸ್ಥಳೀಯ ನಾಗರಿಕರು ಪಾಲ್ಗೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಯಾರದೋ ಮೇಲಿನ ಸಿಟ್ಟು ಅಸಮದಾನ ಅರಣ್ಯದ ಮೇಲೆ ವಿಕೃತಿ ಮೆರೆದಿರುವುದು ಕ್ಷಮಿಸಲಾರದ ತಪ್ಪಾಗಿದ್ದು ಮೂಕ ಪ್ರಾಣಿಗಳ ಆರ್ಥನಾದ, ಅಮೂಲ್ಯ ಸಸ್ಯ ಸಂಪತ್ತಿನ ನಾಶ, ಭೂಮಿಗೆ ಫಲವತ್ತತ್ತೆ ತರುವ ಉದುರಿದ ಎಲೆಗಳ ಸರ್ವನಾಶ, ನೂರಾರು ಹಾವುಗಳ ಮಾರಣಹೋಮ ಅಲ್ಲದೆ ಮುಂದೆ ಪ್ರಾಣಿ ಪಕ್ಷಿಗಳಿಗೆ ಆಹಾರದ ಕೊರತೆ ಈ ಪ್ರದೇಶದಲ್ಲಿ ಎದುರಾಗಲಿದ್ದು ಪ್ರಾಣಿಗಳು ಜನವಸತಿ ಪ್ರದೇಶಗಳತ್ತ ಮುಖಮಾಡಲಿವೆ.

ಅಧಿಕಾರಿ ಎಂಬ ಹಮ್ಮುಬಿಮ್ಮು ಇಲ್ಲದೆ ಬ್ಲೊವರ್ ಮಿಷನ್ ಹೆಗಲಿಗೇರಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಎ.ಸಿ.ಎಫ್ ಹಿಮವತಿ ಭಟ್
ನನ್ಬ ಒಡಲಿಗೆ ಕಿಚ್ಚು ಹಚ್ಚಿದರೆ ನಿಮಗೇ ನಷ್ಟ ಕಾಲಕಾಲಕ್ಕೆ ಮಳೆಯಾಗದು, ಭೂಮಿಯ ಫಲವತ್ತತೆ ನಾಶ, ಅಂತರ್ಜಲ ಮಟ್ಟದಲ್ಲಿ ಕುಸಿತ, ಉತ್ತಮ ಗಾಳಿ, ಆರೋಗ್ಯಕರ ವಾತಾವರಣ, ಹಚ್ಚಹಸಿರಿನ ಮಲೆನಾಡು ನಮ್ಮದು ಎಂಬ ಹೆಗ್ಗಳಿಕೆಗೆ ದಕ್ಕೆ, ಒಟ್ಟಿನಲ್ಲಿ ಮನುಷ್ಯನ ವಿಕೃತಿಗೆ ಪ್ರಕೃತಿಯ ಉತ್ತರ ಅತ್ಯಂತ ಘನಘೋರ ಇನ್ನಾದರು ಎಚ್ಚೆತ್ತು ಇಂತಹ ಅವಘಡಗಳಾಗದಂತೆ ಕೇವಲ ಇಲಾಖೆ ಮಾತ್ರವಲ್ಲ ನಾಗರಿಕರು ಕೈ ಜೋಡಿಸಿ ನಮ್ಮ ಅರಣ್ಯ ರಕ್ಷಿಸಬೇಕಿದೆ ಎಂಬುದು ಪ್ರತಿಧ್ವನಿಯ ಧ್ವನಿಯಾಗಿದೆ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *