Breaking News

ಗ್ಯಾರಂಟಿ ಅನುಷ್ಟಾನಕ್ಕಾಗಿ ಕೃಷಿ ಕೇತ್ರಕ್ಕೆ ಕೊರತೆ ಮಾಡದ ರಾಜ್ಯ ಸರ್ಕಾರ – ಭತ್ತದ ಕ್ಷೇತ್ರ ಗಣನೀಯ ಕುಸಿತ ಭವಿಷ್ಯದಲ್ಲಿದೆ ಆತಂಕ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : ತಾಲೂಕಿನಲ್ಲಿ ಮಳೆಗಾಲ ಹತ್ತಿರವಾಗುತ್ತಿದ್ದಂತೆ ಕೃಷಿ ಚಟುವಟಿಕೆ ನಿಧಾನವಾಗಿ ಗರಿಗೆದರಿದೆ. ಭೂಮಿ ಹದಗೊಳಿಸುವುದು ಎಲೆಗೊಬ್ವರ ಒಟ್ಟುಮಾಡುವುದು ಸೇರಿದಂತೆ ಇತರೆ ಚಟುವಟಿಕೆಗಳು ದಿನದಿಂದ ದಿನಕ್ಕೆವೇಗ ಪಡೆಯುತ್ತಿದೆ.

ಗ್ಯಾರಂಟಿ ಯೋಜನೆಗಳ ಅನುಷ್ಟಾನಕ್ಕಾಗಿ ರಾಜ್ಯ ಸರ್ಕಾರ ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತಿಲ್ಲ ಅಭಿವೃದ್ಧಿ ಶೂನ್ಯ ಎಂಬ ವಿರೋದ ಪಕ್ಷದ ಆರೋಪದ ಮದ್ಯೆಯು ಸರ್ಕಾರ ಕೃಷಿ ಕ್ಷೇತ್ರಕ್ಕಾಗಲಿ ರೈತರಿಗಾಗಲಿ ಯಾವುದೇ  ಯೋಜನೆಗಳನ್ನು ನಿಲ್ಲಿಸಿಲ್ಲ ಯಥಾ ಪ್ರಕಾರ ಸಹಾಯಧನದ ಯೋಜನೆಗಳು ಮುಂದುವರೆದಿದೆ. ಆದರೆ ವರ್ಷದಿಂದ ವರ್ಷಕ್ಕೆ ಪ್ರಮುಖ ಆಹಾರ ಬೆಳೆಯಾದ ಭತ್ತದ ಕೃಷಿಕ್ಷೇತ್ರ ಗಣನೀಯವಾಗಿ ಕುಸಿತ ಕಾಣುತ್ತಿದ್ದು ಆತಂಕ ಸೃಷ್ಟಿಸುತ್ತಿದೆ.


ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ109 ಮಿ.ಮೀ ಮಳೆ ದಾಖಲಾಗಿದ್ದು ವಾಡಿಕೆ ಮಳೆಯೇ 26 ಮಿಮೀ ಆಗಿದ್ದು ಅದಕ್ಕಿಂತ 86 ಮಿಮೀ ಮಳೆ ಹೆಚ್ಚೇ ಆಗಿದೆ. ಕಳೆದ ವರ್ಷ ಈ ವೇಳೆಗೆ 72 ಮಿಮೀ ಮಳೆಯಾಗಿತ್ತು.
ತಾಲ್ಲೂಕಿನ ಕಿರವತ್ತಿ ಮತ್ತು ಮದನೂರು ಭಾಗದಲ್ಲಿ ಕೂರ್ಗಿ ಭತ್ತದ ಬಿತ್ತನೆ ಕೆಲವೆಡೆ ಪ್ರಾರಂಭವಾಗಿದೆ. ಕಳೆದ ವರ್ಷ ಒಟ್ಟು 3020 ಮಿಮೀ ಮಳೆಯಾಗಿದ್ದು ವಾಡಿಕೆಗಿಂತ 400 ಮಿಮೀ ಮಳೆ ಹೆಚ್ಚುವರಿಯಾಗಿಯೇ ಬಿದ್ದಿದೆ ಪರಿಣಾಮ ಭೂಮಿಯಲ್ಲಿ ತೇವಾಂಶ ಇರುವುದರಿಂದ ಭಿತ್ತನೆಗೆ ಯೋಗ್ಯವಾಗಿದೆ ಎನ್ನುತ್ತಾರೆ ಕೃಷಿ ತಜ್ಞರು.


ತಾಲೂಕಿನಲ್ಲಿ 1,30,110 ಹೆಕ್ಟೇರ್ ಭೂ ಪ್ರದೇಶ ಹೊಂದಿದ್ದು 1,16,986 ಹೆಕ್ಟೇರ್ ಭೂ ಪ್ರದೇಶ ಅರಣ್ಯ ಪ್ರದೇಶವಾಗಿದೆ. ಇದರಲ್ಲಿ 10,382 ಹೆಕ್ಟೇರ್ ಭೂ ಪ್ರದೇಶ ಕೃಷಿ ಸಾಗುವಳಿಗೆಗೆ ಯೋಗ್ಯವಾಗಿದ್ದು ಅದರಲ್ಲಿ 2,675 ಹೆಕ್ಟೇರ್ ಭೂಪ್ರದೇಶ ಕೃಷು ಚಟುವಟಿಕೆ ನಡೆಯುತ್ತಿದ್ದು ಉಳಿದ ಕ್ಷೇತ್ರದಲ್ಲಿ ತೋಟಗಾರಿಕಾ ಬೆಳೆ ಆವರಿಸಿದೆ.


ಭತ್ತ 2100 ಹೆಕ್ಟೇರ್ ,ಕಬ್ಬು 380 ಹೆಕ್ಟೇರ್, ಮುಸುಕಿನ ಜೋಳ 175 ಹೆಕ್ಟೇರ್, ಹತ್ತಿ 20 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಗುರಿ ಹೊಂದಲಾಗಿದೆ.
ಇದರಲ್ಲಿ ಆತಂಕದ ವಿಚಾರವೆಂದರೆ ರೈತರು ಹಲವು ಕಾರಣಗಳಿಂದ ಆಹಾರ ಧಾನ್ಯ ಬೆಳೆಯುವ ಬದಲು ತೋಟಗಾರಿಕ ಬೆಳೆಗಳಿಗೆ ಒತ್ತು ಕೊಡುತ್ತಿದ್ದು ಅದರಲ್ಲು ವಾಣಿಜ್ಯ ಬೆಳೆ ಅಡಕೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಮತ್ತು ಕಬ್ಬಿನ ಬೆಳೆ ಕಡೆಗೆ ವಾಲುತ್ತಿದ್ದಾರೆ. ಕೂಲಿಕಾರ್ಮಿಕರ ಕೊರತೆ ಬೆಲೆಯಲ್ಲಿ ಸ್ಥಿರತೆ ಇಲ್ಲದಿರುವುದು ಸೇರಿದಂತೆ ಆರ್ಥಿಕ ವ್ಯವಹಾರದಲ್ಲಿಯೂ ಭತ್ತದ ಕ್ಷೇತ್ರಕ್ಕಿಂತ ಅಡಕೆ ಕ್ಷೇತ್ರಕ್ಕೆ ಮೌಲ್ಯ ಹೆಚ್ಚಿರುತ್ತದೆ ಈ ಎಲ್ಲಾ ಕಾರಣಗಳಿಂದ ಪ್ರಮುಖ ಆಹಾರ ಬೆಳೆಯಾದ ಭತ್ತ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಿದೆ.


ಭತ್ತದ ಬೆಳೆ ಕುಸಿತ ಕಾಣುತ್ತಿರುವುದು
2021-22 ಸಾಲಿನಲ್ಲಿ 2755 ಹೆಕ್ಟೇರ್
2022-23 ಸಾಲಿನಲ್ಲಿ 2531 ಹೆಕ್ಟೇರ್
2023-24 ಸಾಲಿನಲ್ಲಿ 2327 ಹೆಕ್ಟೇರ್
2024-25 ಸಾಲಿನಲ್ಲಿ 1950 ಹೆಕ್ಟೇರ್


ರಸಗೊಬ್ಬರ ಸಾಕಷ್ಟು ದಾಸ್ತಾನಿದ್ದು ವರ್ಷಕ್ಕೆ ತಾಲೂಕು ವ್ಯಾಪ್ತಿಗೆ 1800 ಟನ್ ರಸಗೊಬ್ಬರದ ಅವಶ್ಯಕತೆ ಇದ್ದು ಸದ್ಯಕ್ಕೆ ಕೃಷಿ ಇಲಾಖೆಯಲ್ಲಿ 848 ಟನ್ ರಸಗೊಬ್ಬರ ಇತ್ತು ಅದರಲ್ಲಿ ಈಗಾಗಲೆ 94 ಟನ್ ರೈತರಿಗೆ ಹಂಚಲಾಗಿದೆ ಉಳಿಕೆ 755 ಟನ್ ಶಿಲ್ಕಿದೆ. ಅದರಲ್ಲಿ 375 ಟನ್ ಯೂರಿಯಾ 114, ಟನ್ ಡಿಎಪಿ 114 ಟನ್ , 66 ಟನ್ ಪೊಟಾಷಿಯಂ, 176 ಟನ್ ಕಾಂಪ್ಲೆಕ್ಸ್ ಲಭ್ಯವಿದೆ.


ಕಳೆದ ವರ್ಷ ಬೆಳೆ ವಿಮೆ 379 ರೈತರಿಗೆ 3,95,171 ರುಪಾಯಿ ಬೆಳೆ ವಿಮೆ ವಿತರಣೆಯಾಗಿದೆ. ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ 17 ಕೃಷಿಹೊಂಡ ಮಾಡಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಪಾರಂಪರಿಕ ದೇಸಿ ತಳಿಗಳ ಸಮೀಕ್ಷೆ ನಡೆಸಲಾಗುತ್ತಿದ್ದು ಅದಕ್ಕಾಗಿ ಹೊಸ ಆ್ಯಪ್ ಸಿದ್ದಪಡಿಸಲಾಗಿದೆ.ಪ್ರಧಾನಮಂತ್ರಿ ಕಿಸಾನ್ ಯೋಜನೆಯಲ್ಲಿ ತಾಲ್ಲೂಕಿನ7404 ರೈತರಿಗೆ ಪ್ರಯೋಜನ ದೊರೆಯಲಿದ್ದು 6974 ರೈತರಿಗೆ ಇಕೆವೈಸಿ ಮೂಲಕ ಖಾತೆಗೆ ಹಣ ಜಮಾವಣೆಯಾಗಿದೆ.
ಇಲಾಖೆಯು ಸದಾ ರೈತರ ಜೊತೆಗಿದ್ದು ಕೃಷಿ ಚಟುವಟಿಕೆಗೆ ಸರ್ಕಾರಗಳು ಯಾವುದಕ್ಕು ಕೊತೆ ಮಾಡುತ್ತಿಲ್ಲ. ಸಹಾಯಧನದಲ್ಲಿ ಸಿಗುವ ಯಾವುದೆ ಸೌಲಭ್ಯ ನಿಲ್ಲಿಸಿಲ್ಲ. ರೈತರೆ ಕೆಲವು ಯೋಜನೆಗಳಿಗೆ ಆಸಕ್ತಿ ತೋರದೆ ಸಹಾಯ ಧನದಲ್ಲಿ ಸಿಗುವ ಸೌಲಭ್ಯಕ್ಕೆ ಆಸಕ್ತಿ ತೋರುತ್ತಿಲ್ಲ.


ರೈತರು ಆದಷ್ಟು ಆಹಾರ ಬೆಳೆಗೆ ಪ್ರಾಮುಖ್ಯತೆ ನೀಡಬೇಕಿದೆ ಕೇವಲ ವಾಣಿಜ್ಯ ಬೆಳೆ ತೋಟಗಾರಿಕಾ ಬೆಳೆಗಳ ಕಡೆಗೆ ಹೆಚ್ಚು ಗಮನ ಹರಿಸಿದರೆ ಭವಿಷ್ಯದಲ್ಲಿ ಆಹಾರದ ಕೊರತೆ ಉದ್ಬವಿಸಲಿದೆ. ಯಾವುದೆ ರೈತರು ತಮಗೆ ಲಭ್ಯವಿರುವ ಭೂಮಿಯಲ್ಲಿ ಕನಿಷ್ಟಪಕ್ಷ ಅರ್ಧದಷ್ಟು ಆಹಾರ ಬೆಳೆಗೆ ಸೀಮಿತಗೊಳಿಸಿದರೆ ಸೂಕ್ತ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ತಪ್ಪದೆ ಪಡೆಯಿರಿ ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆಯಿರಿ.
ನಾಗರಾಜ್ ನಾಯ್ಕ್
ತಾಲೂಕು ಸಹಾಯಕ ಕೃಷಿ ನಿರ್ದೇಶಕರು.
ಯಲ್ಲಾಪುರ.

ದೇಶಕ್ಕೆ ಅನ್ನ ನೀಡುವ ರೈತರಿಗಾಗಿಯೆ ಅಸ್ತಿತ್ವಕ್ಕೆ ತಂದಿರುವ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಎಂದರೆ ಸರ್ಕಾರ ತಲೆ ತಗ್ಗಿಸಬೇಕಿದೆ. ತಾಲೂಕು ಮಟ್ಟದ ಕೃಷಿ ಇಲಾಖೆಯಲ್ಲಿ ಒಬ್ಬರೇ ಸರ್ಕಾರಿ ಅಧಿಕಾರಿ ಎಂಬುದು ಬಹುದೊಡ್ಡ ಹಾಸ್ಯ ರಾಜ್ಯದಲ್ಲಿ ಮೊದಲ ಆದ್ಯತೆಯಲ್ಲಿರಬೇಕಾದ ಇಲಾಖೆಗಳಲ್ಲಿ ಕೃಷಿ ಇಲಾಖೆಗೆ ಪ್ರಥಮ ಆದ್ಯತೆ ನೀಡಿ ಸಿಬ್ಬಂದಿಗಳ ಕೊರತೆ ನೀಗಿಸಬೇಕು. ವಿದ್ಯೆ,ವಿದ್ಯುತ್, ಪೊಲೀಸ್, ಅರಣ್ಯ,ಬ್ಯಾಂಕ್, ಸಾರಿಗೆ,ರೈಲ್ವೆ ಇನ್ನಿತರೆ ಯಾವ ಇಲಾಖೆ ಇಲ್ಲದಿದ್ದರು ಜನರ ಜೀವನ ಸಾಗುತ್ತದೆ ಆದರೆ ಆಹಾರ ಮತ್ತು ಆರೋಗ್ಯ ಇರದಿದ್ದರೆ ಬದುಕಿಗೆ ಅರ್ಥವಿಲ್ಲ ಇಷ್ಟೆಲ್ಲಾ ತಿಳಿದರು ಕೃಷಿ ಇಲಾಖೆ ನಿರ್ಲಕ್ಷಿಸಿದರೆ ಸರ್ಕಾರದ ಅಸ್ತಿತ್ವಕ್ಕೆ ಏನು ಅರ್ಥ.
ಸತೀಶ್ ಶಿವಾನಂದ ನಾಯ್ಕ್
ರೈತರು ಮತ್ತು ಜನಪ್ರತಿನಿಧಿಗಳು
ಮಂಚಿಕೇರಿ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *