






ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬಡೆದ ಹೋಳಿ ಉತ್ಸವ ಸಮಿತಿ ಸಭೆಯು ಈ ವರ್ಷದ ಹೋಳಿ ಆಚರಿಸುವ ಕುರಿತು ಚರ್ಚಿಸಿ ದಿನ ನಿಗಧಿಪಡಿಸಲಾಯಿತು.


ಸಮಿತಿ ನಿರ್ಣಯದಂತೆ ಮಾ,25 ರ ಸಂಜೆಗೆ ಅಂಬೇಡ್ಕರ್ ಗಲ್ಲಿ, ರವೀಂದ್ರ ನಗರ, ಶಾರದಾಗಲ್ಲಿ ಗಳಿಂದ ಉತ್ತರ ಕನ್ನಡದ ವಿಶೇಷ ಆಚರಣೆಯಾದ ” ಬೇಡರ ವೇಷ ” ನಡೆಯಲಿದ್ದು ರಾತ್ರಿ 8 ಗಂಟೆಯಿಂದ 9 ರ ಒಳಗೆ ಪೊಲೀಸ್ ವೃತ್ತದಲ್ಲಿ ಮೂರು ತಂಡಗಳ ಬೇಡರ ವೇಷದ ಸಮಾಗಮವಾಗಲಿದ್ದು ಕಣ್ಮನ ಸೆಳೆಯಲಿದೆ.

ಮಂಗಳವಾರ ಬೆಳಗ್ಗೆ 9-30 ಕ್ಕೆ ಪುಡಿ ಬಣ್ಣದ ಹೋಳಿ ಪ್ರಾರಂಭಗೊಂಡು 11-30 ಕ್ಕೆ ಬಸವೇಶ್ವರ ವೃತ್ತದಲ್ಲಿ ಕಾಮದಹನ ನಡೆಯಲಿದೆ ಅದಾದ ನಂತರ ಹೋಕುಳಿ ಬಣ್ಣದ ಹೋಳಿ ನಡೆಯಲಿದ್ದು ಸಂಜೆ ಬಸವೇಶ್ವರ ವೃತ್ತದಲ್ಲಿ ಕರಿ ಹಾಕಲಾಗುತ್ತದೆ ಎಂದು ಸಭೆಯ ನಿರ್ಧಾರವನ್ನು ಮಾಧ್ಯಮಕ್ಕೆ ತಿಳಿಸಲಾಯಿತು.

ಸಾರ್ವಜನಿಕರು ಹೋಳಿ ಹಬ್ಬವನ್ನು ಸಂಸ್ಕೃತಿಗೆ ದಕ್ಕೆ ಬರದಂತೆ ಆಚರಿಸಬೇಕಿದ್ದು ಕೆಮಿಕಲ್ ಬಣ್ಣಗಳನ್ನು ಬಳಸದಂತೆ ಎಚ್ಚರಿಸಲಾಗಿದೆ. ಹೋಳಿ ಆಡುವವೇಳೆ ವಿಕೃತಿ ತೋರದೆ ಯಾರಿಗು ಮುಜುಗರವಾಗದಂತೆ ನಡೆದುಕೊಳ್ಳಬೇಕಿದೆ. ಹೋಳಿ ಬಣ್ಣದಾಟ ಮುಗಿದ ನಂತರ ಕೆರೆ,ನದಿ,ಜಲಪಾತಗಳ ಪ್ರದೇಶಗಳಿಗೆ ತೆರಳುವವರು ಬಹಳ ಎಚ್ಚರಿಕೆ ಮತ್ತು ಜಾಗ್ರತೆ ವಹಿಸಬೇಕಿದೆ ಎಂದು ಸಭೆಯ ಹಿರಿಯರು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಹೋಳಿ ಉತ್ಸವ ಸಮಿತಿ ಅಧ್ಯಕ್ಷ ಉದಯ ಜಾಲಿಹಾಳ, ಉಪಾಧ್ಯಕ್ಷ ಜಗನ್ನಾಥ ರೇವಣಕರ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಶಿರೀಷ್ ಪ್ರಭು, ಮಾಧವ ನಾಯಕ್, ರಜತ್ ಬದ್ದಿ, ಘನಶ್ಯಾಮ ರೇವಣ್ಕರ್ ಮಂಜುನಾಥ ಕಾನಡೆ, ಅಕ್ಷಯ್, ನಯನ ಅರುಣ್ ಇಂಗಳೆ, ಮಹಿಳಾ ಪ್ರಮುಖರಾದ ನಮಿತಾ ಬೀಡಿಕರ್, ರಾಧಾಗುಡಿಗಾರ್ ಹಾಗು ಇನ್ನಿತರ ಹಿರಿಯರು, ಯುವಕರು ಉಪಸ್ಥಿತರಿದ್ದರು.