Breaking News

ಹೋಳಿ ಬಣ್ಣದಾಟಕ್ಕೆ ದಿನ ನಿಗದಿ ಮಾಡಿದ ” ಹೋಳಿ ಉತ್ಸವ ಸಮಿತಿ “


ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬಡೆದ ಹೋಳಿ ಉತ್ಸವ ಸಮಿತಿ ಸಭೆಯು ಈ ವರ್ಷದ ಹೋಳಿ ಆಚರಿಸುವ ಕುರಿತು ಚರ್ಚಿಸಿ ದಿನ ನಿಗಧಿಪಡಿಸಲಾಯಿತು.


   ಸಮಿತಿ ನಿರ್ಣಯದಂತೆ ಮಾ,25 ರ ಸಂಜೆಗೆ ಅಂಬೇಡ್ಕರ್ ಗಲ್ಲಿ, ರವೀಂದ್ರ ನಗರ, ಶಾರದಾಗಲ್ಲಿ ಗಳಿಂದ ಉತ್ತರ ಕನ್ನಡದ ವಿಶೇಷ ಆಚರಣೆಯಾದ ” ಬೇಡರ ವೇಷ ” ನಡೆಯಲಿದ್ದು ರಾತ್ರಿ 8 ಗಂಟೆಯಿಂದ 9  ರ ಒಳಗೆ ಪೊಲೀಸ್ ವೃತ್ತದಲ್ಲಿ ಮೂರು ತಂಡಗಳ ಬೇಡರ ವೇಷದ ಸಮಾಗಮವಾಗಲಿದ್ದು ಕಣ್ಮನ ಸೆಳೆಯಲಿದೆ.


     ಮಂಗಳವಾರ ಬೆಳಗ್ಗೆ 9-30 ಕ್ಕೆ ಪುಡಿ ಬಣ್ಣದ ಹೋಳಿ ಪ್ರಾರಂಭಗೊಂಡು 11-30 ಕ್ಕೆ ಬಸವೇಶ್ವರ ವೃತ್ತದಲ್ಲಿ ಕಾಮದಹನ ನಡೆಯಲಿದೆ ಅದಾದ ನಂತರ ಹೋಕುಳಿ ಬಣ್ಣದ ಹೋಳಿ ನಡೆಯಲಿದ್ದು ಸಂಜೆ ಬಸವೇಶ್ವರ ವೃತ್ತದಲ್ಲಿ ಕರಿ ಹಾಕಲಾಗುತ್ತದೆ ಎಂದು ಸಭೆಯ ನಿರ್ಧಾರವನ್ನು ಮಾಧ್ಯಮಕ್ಕೆ ತಿಳಿಸಲಾಯಿತು.


    ಸಾರ್ವಜನಿಕರು ಹೋಳಿ ಹಬ್ಬವನ್ನು ಸಂಸ್ಕೃತಿಗೆ ದಕ್ಕೆ ಬರದಂತೆ ಆಚರಿಸಬೇಕಿದ್ದು ಕೆಮಿಕಲ್ ಬಣ್ಣಗಳನ್ನು ಬಳಸದಂತೆ ಎಚ್ಚರಿಸಲಾಗಿದೆ. ಹೋಳಿ ಆಡುವವೇಳೆ ವಿಕೃತಿ ತೋರದೆ ಯಾರಿಗು ಮುಜುಗರವಾಗದಂತೆ ನಡೆದುಕೊಳ್ಳಬೇಕಿದೆ. ಹೋಳಿ ಬಣ್ಣದಾಟ ಮುಗಿದ ನಂತರ ಕೆರೆ,ನದಿ,ಜಲಪಾತಗಳ ಪ್ರದೇಶಗಳಿಗೆ ತೆರಳುವವರು ಬಹಳ ಎಚ್ಚರಿಕೆ ಮತ್ತು ಜಾಗ್ರತೆ ವಹಿಸಬೇಕಿದೆ ಎಂದು ಸಭೆಯ ಹಿರಿಯರು ಕಿವಿಮಾತು ಹೇಳಿದರು.


     ಈ ಸಂದರ್ಭದಲ್ಲಿ ಹೋಳಿ ಉತ್ಸವ ಸಮಿತಿ ಅಧ್ಯಕ್ಷ ಉದಯ ಜಾಲಿಹಾಳ, ಉಪಾಧ್ಯಕ್ಷ ಜಗನ್ನಾಥ ರೇವಣಕರ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಶಿರೀಷ್ ಪ್ರಭು, ಮಾಧವ ನಾಯಕ್, ರಜತ್ ಬದ್ದಿ, ಘನಶ್ಯಾಮ ರೇವಣ್ಕರ್ ಮಂಜುನಾಥ ಕಾನಡೆ, ಅಕ್ಷಯ್, ನಯನ ಅರುಣ್ ಇಂಗಳೆ,  ಮಹಿಳಾ ಪ್ರಮುಖರಾದ ನಮಿತಾ ಬೀಡಿಕರ್, ರಾಧಾಗುಡಿಗಾರ್ ಹಾಗು ಇನ್ನಿತರ ಹಿರಿಯರು, ಯುವಕರು ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *