

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಭಾರತ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು ಶುಭ ಶುಕ್ರವಾರ ಮದ್ಯಾಹ್ನ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ “ಚಂದ್ರಯಾನ-3” ಯಶಸ್ವಿ ಉಡಾವಣೆಯಾಗಿದೆ.

ಚಂದ್ರಯಾನ- 3 ವಿಫಲವಾದರೂ ದೃತಿಗೆಡದ ಭಾರತದ ವಿಜ್ಞಾನಿಗಳು ಕಳೆದ ಬಾರಿಯ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಚಂದ್ರಯಾನ-3 ಯಶಸ್ವಿ ಉಡಾವಣೆ ಮಾಡಿದ್ದಾರೆ.

ಇದು ವಿದ್ಯಾರ್ಥಿಗಳಲ್ಲಿ ದೇಶದ ಬಗೆಗಿನ ಗೌರವ ಮತ್ತಷ್ಟು ಹೆಚ್ಚಲು ಮತ್ತು ಬಾಹ್ಯಾಕಾಶ ಕುರಿತ ಕುತೂಹಲಕ್ಕೆ ಪೂರಕವಾಗುವಂತೆ ಚಂದ್ರಯಾನ-3 ಉಡಾವಣೆಯ ಸಂಪೂರ್ಣ ದೃಶ್ಯಾವಳಿಯನ್ನು ದೊಡ್ಡಪರದೆಯ ಮೇಲೆ ನೇರಪ್ರಸಾರವನ್ನು ತೋರಿಸುವ ಮೂಲಕ ಯಲ್ಲಾಪುರದ ಹೋಲಿ ರೋಜರಿ ಪ್ರೌಢಶಾಲೆ ಸಾರ್ಥಕ ಕಾರ್ಯ ಮಾಡಿದೆ.

ಪಟ್ಟಣದ ಹೋಲಿರೋಜರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕ ರಾಜಶೇಖರ್ 8,9,10 ನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಗು ಶಿಕ್ಷಕರಿಗೆ ಚಂದ್ರಯಾನ -3 ಉಡಾವಣೆಯ ಹಂತ ಹಂತದ ಮಾಹಿತಿಯನ್ನು ಕನ್ನಡದಲ್ಲೇ ವಿವರಿಸಿ ಮಕ್ಕಳಿಗೆ ಅರಿವಾಗುವಂತೆ ತಿಳಿಸಿದರು.
ಬಾಹ್ಯಾಕಾಶ ಕ್ಷೇತ್ರದ ಕುತೂಹಲ ಮಕ್ಕಳಿಗೆ ಮಾತ್ರ ಇರುವುದಲ್ಲ ಸಮಸ್ತ ಮನು ಕುಲಕ್ಕೆ ಅದರ ಬಗ್ಗೆ ಕುತೂಹಲ ಇದ್ದೇಇದೆ. ಹಲವು ವರ್ಷಗಳ ಕಾಲ ಪರ ದೇಶಗಳ ಸಾದನೆಯನ್ನೆ ನಾವು ನಮ್ಮ ಮಕ್ಕಳು ಓದುತ್ತ ಬಂದಿದ್ದೆವು ಆದರೆ ಇತ್ತೀಚಿನ ವರ್ಷಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಅಗ್ರಸ್ಥಾನ ಅಲಂಕರಿಸಿದ್ದು ನಮ್ಮ ವಿಜ್ಞಾನಿಗಳ ಶ್ರೇಷ್ಠ ಸಾಧನೆ ವಿದ್ಯಾರ್ಥಿಗಳಿಗೆ ಯುವಕರಿಗೆ ದೇಶವಾಸಿ ಪ್ರಜೆಗಳಿಗೆ ತಿಳಿಸಬೇಕಿದೆ ಇಂತಹ ಸಾರ್ಥಕ ಕಾರ್ಯ ಮಾಡಿದ ಎಲ್ಲಾ ಶಿಕ್ಷಕ ವೃಂದಕ್ಕೆ ” ಪ್ರತಿಧ್ವನಿ ಯಲ್ಲಾಪುರ ” ಶಿರಬಾಗಿ ನಮಿಸುತ್ತದೆ. ಶ್ಯಾಮಲಾ ನಾಗೇಶ್ ,ಪ್ರಧಾನ ಸಂಪಾದಕಿ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ಗ್ರಾಮದೇವಿ ಸುಕ್ಷೇತ್ರ, ಯಲ್ಲಾಪುರ.
Prathidvani Yellapura